I ಆಶೀರಾಜ್ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಕಛೇರಿ ಮೇಲೆ I ತುಂಗಾನಗರ ಪೊಲೀಸರ ದಾಳಿ, ಶೋಧ I
ಶಿವಮೊಗ್ಗ : ನಗರದಲ್ಲಿ ಲ್ಯಾಂಡ್ ಲಿಟಿಗೇಶನ್ ಹೆಚ್ಚತ್ತಿದೆ, ಬಿಲ್ಡರ್ಸ್, ಡೆವಲಪರ್ಸ್ ಹೆಸರಿನಲ್ಲಿ ನಾಗರೀಕರಿಗೆ ಉಂಡೆನಾಮ ಮಡಗುತ್ತಿರುವ ಪ್ರಕರಣಗಳು ಕೂಡ ಸಾಮಾನ್ಯವಾಗಿದೆ,
ಇಂತಹದೊಂದು ನಿಟ್ಟಿನಲ್ಲಿ ಆಶೀರಾಜ್ ಬಿಲ್ಡರ್ಸ್ ಮತ್ತು ಡೆವಲಪರ್ಸ್ ,ಗೋಪಾಲ ಗೌಡ ಬಡಾವಣೆ, ಶಿವಮೊಗ್ಗ ಇವರು ಕಡಿಮೆ ದರದಲ್ಲಿ ಮನೆ ಕಟ್ಟಿಕೊಡುವುದಾಗಿ ಹಾಗು ಮನೆ ಕಟ್ಟಲು ಕಡಿಮೆ ದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಬಗ್ಗೆ ಪ್ರಕರಣ ದಾಖಲಾಗಿದೆ,
ಇಂದು ಶಿವಮೊಗ್ಗ ನ್ಯಾಯಾಲಯದಿಂದ ಶೋಧನೆ ವಾರೆಂಟ್ ಪಡೆದ ತುಂಗಾನಗರ ಪೋಲಿಸರು ಆಶೀರಾಜ್ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಕಛೇರಿ ಮೇಲೆ ದಾಳಿ ನಡೆಸಿರುವುದು ಬೆಳಕಿಗೆ ಬಂದಿದೆ,


