I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I
ಶಿವಮೊಗ್ಗ : ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ರಾಜ್ಯ ಅಸಂಘಟಿತ ಸಂಘವೂ ಕೆಎಸ್ಸಾಆರ್ಟಿಸಿಯ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದೆ
ಈ ಸಂದರ್ಭದಲ್ಲಿ ಮಾತಾನಾಡಿದ ಸಂಘದ ಮುಖಂಡರು ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಸೋಮಿನಕೊಪ್ಪ, ಸಿದ್ದಿಪುರ, ಗೆಜ್ಜೆನಹಳ್ಳಿ, ಮುದ್ದಿನಕೊಪ್ಪ ಗ್ರಾಮಗಳಿಗೆ ಹೊಂದಿಕೊಂಡಂತೆ ಇರುವ ಸಿದ್ದಿಪುರ ಗ್ರಾಮದಲ್ಲಿ ಕೈಗಾರಿಕಾ ಪ್ರದೇಶ ಒಳಗೊಂಡಂತೆ ಇರುವ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಕಾರ್ಮಿಕರ ವಸತಿ ನಿಲಯವನ್ನು ಸರ್ಕಾರ ಹೆಚ್ಚು ಕೋಟಿ ವೆಚ್ಚ ಮಾಡಿ ನಿರ್ಮಿಸಲಾಗಿದ್ದು, ಕಟ್ಟಡಗಳು, ವಸತಿಗಳು ಅತ್ಯಂತ ವ್ಯವಸ್ಥಿತವಾದ ಸೌಲಭ್ಯಗಳನ್ನು ಹೊಂದಿದೆ. ಸಕಾಲಿಕ ಸಾರಿಗೆ ವ್ಯವಸ್ಥೆಗಳಿಲ್ಲದೆ ಸರ್ಕಾರದ ಈ ಬಹುಮುಖ್ಯ ಯೋಜನೆ ಕುಂಠಿತವಾಗಿದೆ ಎಂದು ತಿಳಿಸಿದರು,
ಸಾರಿಗೆ ಸೌಲಭ್ಯವಿಲ್ಲದೆ ಕಾರ್ಮಿಕರು ವಸತಿ ನಿಲಯಗಳಿಗೆ ಬಾರದೆ ಸರ್ಕಾರದ ಉದ್ದೇಶ ಸಫಲವಾಗುತ್ತಿಲ್ಲ. ಶಿವಮೊಗ್ಗ ಮಹಾನಗರದಲ್ಲಿ ಕಾರ್ಯನಿರ್ವಹಿಸುವಂಥ ಹಾಗೂ ವಲಸೆ ಕಾರ್ಮಿಕರು, ಶ್ರಮಜೀವಿಗಳಿಗೆ ಸರ್ಕಾರ ವ್ಯವಸ್ಥಿತವಾದ ವಸತಿಯ ವ್ಯವಸ್ಥೆ ಮಾಡಿದ್ದರೂ ಕೂಡ ಸಾರಿಗೆ ವ್ಯವಸ್ಥೆ ಇಲ್ಲದೆ ಎಲ್ಲಿ ಕಟ್ಟಡ ನಿರ್ಮಾಣವಾಗುತ್ತದೆಯೋ, ಅಲ್ಲಿಯೇ ಟೆಂಟುಗಳಲ್ಲಿ ತಮ್ಮ ಜೀವನವನ್ನು ಮುಂದುವರಿಸಿದ್ದಾರೆ. ಸರ್ಕಾರದ ಯೋಜನೆ ಸಾಫಲ್ಯವಾಗಬೇಕು ಎಂದಾದರೆ ಸಾರಿಗೆ ಇಲಾಖೆ ಸಹಕಾರದ ಅವಶ್ಯಕತೆ ಇದೆ ಎಂದು ವಿವರಿಸಿದ್ದಾರೆ,
ಸಿದ್ದಿಪುರ ಗ್ರಾಮವು ಸುತ್ತಮುತ್ತ ಹಲವು ಹಳ್ಳಿಗಳ ಸಂಪರ್ಕ ಹೊಂದಿದ್ದು, ಇವುಗಳಿಗೂ ಕೂಡ ಸಾರಿಗೆ ಸೌಲಭ್ಯದ ಕೊರತೆ ಇದೆ. ಕಟ್ಟಡ ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ನೀಡಿದರೆ, ಕಾರ್ಮಿಕರ ವಸತಿ ನಿಲಯಗಳಿಗೆ ಕಾರ್ಮಿಕರು ತೆರಳಲು ಅನುಕೂಲವಾಗುತ್ತದೆ. ಜೊತೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳಿಗೂ ಕೂಡ ಅನುಕೂಲವಾಗುತ್ತದೆ
ಸಿದ್ದಿಪುರ ಕೈಗಾರಿಕಾ ಪ್ರದೇಶವೂ ಸಹ ಹೊಂದಿಕೊಂಡಿದ್ದು ಹಾಗೂ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ ನಿರ್ಮಾಣವಾಗುತ್ತಿದ್ದು, ಸಾರಿಗೆ ವ್ಯವಸ್ಥೆಯ ಅವಶ್ಯಕತೆ ಇದೆ. ಆದ್ದರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ತಕ್ಷಣದಲ್ಲಿ ಸಾರಿಗೆ ವ್ಯವಸ್ಥೆಯನ್ನು ಮಾಡಲು ರಾಜ್ಯ ಅಸಂಘಟಿತ ಕಾರ್ಮಿಕರ ಸಂಘವು ಆಗ್ರಹಿಸಿದೆ,
ಈ ಸಂದರ್ಭದಲ್ಲಿ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಕುಪೇಂದ್ರ ಆಯನೂರು, ರಾಜ್ಯಾಧ್ಯಕ್ಷರಾದ ಪ್ರದೀಪ್ ಹೊನ್ನಪ್ಪ, ರಾಜ್ಯ ಉಪಾಧ್ಯಕ್ಷರಾದ ಸುರೇಖಾ ಪಾಲಾಕ್ಷಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಇಂದು.ಬಿ. ಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಮಮತಾ ರಾಘವೇಂದ್ರ, ರಾಜ್ಯ ಕಾನೂನು ಸಲಹೆಗಾರರಾದ ಚೇತನ್ ಲಕ್ಕಪ್ಪ, ರಾಜ್ಯ ಸಮಿತಿಯ ಖಜಾಂಚಿ ಶಶಿಕುಮಾರ್, ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ರಮೇಶ್ ಮಡಿವಾಳ ಬಂದಗದ್ದೆ, ಶಿವಮೊಗ್ಗ ಮಹಾನಗರದ ಅಧ್ಯಕ್ಷರಾದ ಚಂದ್ರಶೇಖರ್. ವೈ., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ವಿನಿ ಗೌಡ, ಅಶೋಕ್ ಪಡವಗೋಡ್, ಜಿಲ್ಲಾ ಉಪಾಧ್ಯಕ್ಷರಾದ ಪ್ರದೀಪ್ ಕವಾಡ್, ಧರ್ಮರಾಜ್, ಅಡಿಕೆ ಕಾರ್ಮಿಕರ ವಿಭಾಗದ ಜಿಲ್ಲಾ ಸಂಚಾಲಕ ಅರುಣ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಶಕುಂತಲಾ ಮತ್ತು ಸಿದ್ದನ ಗೌಡು, ಮಹಾನಗರ ಪ್ರಧಾನ ಕಾರ್ಯದರ್ಶಿ ಶ್ರೀಮತಿ ದೀಪ ರಮೇಶ್, ಶಿವಮೊಗ್ಗ ತಾಲೂಕು ಅಧ್ಯಕ್ಷರಾದ ಮಂಜಣ್ಣ ಬೇಡರ ಹೊಸಳ್ಳಿ, ಪ್ರಧಾನ ಕಾರ್ಯದರ್ಶಿ ಮುತ್ತುರಾಜ್, ಮತ್ತು ರಶ್ಮಿ, ಭದ್ರಾವತಿ ನಗರ ಅಧ್ಯಕ್ಷರಾದ ರುಕ್ಕುಣಮ್ಮ, ಭದ್ರಾವತಿ ಗ್ರಾಮಾಂತರ ಅಧ್ಯಕ್ಷರಾದ ಜಬೀವುಲ್ಲಾ, ತೀರ್ಥಹಳ್ಳಿ ತಾಲೂಕು ಅಧ್ಯಕ್ಷರು ಸುರೇಶ್, ಸೊರಬ ತಾಲೂಕು ಅಧ್ಯಕ್ಷ ಸಂದೀಪ್ ಮಳಲಗದ್ದೆ, ಹೊಸನಗರ, ಶಿಕಾರಿಪುರ ತಾಲೂಕು ವೇದ ಕಲೊಪ್ಪ ಇತರ ಪ್ರಮುಖರು ಹಾಜರಿದ್ದರು.