Friday, 18 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I
ಸೂರ್ಯಗಗನ

I ಪತ್ರಕರ್ತ ಅನಿಲ್ ಕುಮಾರ್ ನಾಯ್ಕ ಕುಟುಂಬಕ್ಕೆ I ಆರ್ಥಿಕ ನೆರವು ನೀಡುವಂತೆ I ಕರವೇ ಸ್ವಾಭಿಮಾನಿ ಬಣದಿಂದ ಆಗ್ರಹ ಮನವಿ ಸಲ್ಲಿಕೆ I

I ಪತ್ರಕರ್ತ ಅನಿಲ್ ಕುಮಾರ್ ನಾಯ್ಕ ಕುಟುಂಬಕ್ಕೆ I ಆರ್ಥಿಕ ನೆರವು ನೀಡುವಂತೆ I ಕರವೇ ಸ್ವಾಭಿಮಾನಿ ಬಣದಿಂದ ಆಗ್ರಹ ಮನವಿ ಸಲ್ಲಿಕೆ I ಶಿವಮೊಗ್ಗ : ವಾಹನ ಅಪಘಾತದಲ್ಲಿ ಮೃತ ಹೊಂದಿದ ಶಿವಮೊಗ್ಗದ ದೃಶ್ಯ ಮಾಧ್ಯಮದ ವರದಿಗಾರರಾದ ಎಸ್.ಅನಿಲ್ ಕುಮಾರ್…

I ಪತ್ರಕರ್ತ ಅನಿಲ್ ಕುಮಾರ್ ನಾಯ್ಕ ಕುಟುಂಬಕ್ಕೆ I ಆರ್ಥಿಕ ನೆರವು ನೀಡುವಂತೆ I ಕರವೇ ಸ್ವಾಭಿಮಾನಿ ಬಣದಿಂದ ಆಗ್ರಹ ಮನವಿ ಸಲ್ಲಿಕೆ I

ಶಿವಮೊಗ್ಗ : ವಾಹನ ಅಪಘಾತದಲ್ಲಿ ಮೃತ ಹೊಂದಿದ ಶಿವಮೊಗ್ಗದ ದೃಶ್ಯ ಮಾಧ್ಯಮದ ವರದಿಗಾರರಾದ ಎಸ್.ಅನಿಲ್ ಕುಮಾರ್ ನಾಯ್ಕ ಕುಟುಂಬಕ್ಕೆ ಕ್ಷೇಮನಿಧಿ ಹಾಗೂ ವಿಶೇಷ ಅನುದಾನಗಳ ಅಡಿಯಲ್ಲಿ ಆರ್ಥಿಕ ನೆರವು ನೀಡುವಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಹಾಗೂ ಮಹಾನಗರ ಪಾಲಿಕೆಗೆ, ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರಿಗೆ ಕರವೇ ಸ್ವಾಭಿಮಾನಿ ಬಣ ಮನವಿ ನೀಡಿ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಬಣದ ಜಿಲ್ಲಾಧ್ಯಕ್ಷರಾದ ಕರವೇ ಕಿರಣ್ ಮಾತನಾಡಿ ಶಿವಮೊಗ್ಗ ನಗರದ ಆಟೋ ಕಾಂಪ್ಲೆಕ್ಸ್ ಹಿಂಬದಿಯಿಂದ ಬೆಂಕಿ ನಗರಕ್ಕೆ ಹೋಗುವ ಮಾರ್ಗ ಮಧ್ಯೆ ಮಾ. ೮ ರಂದು ಎರಡು ಧ್ವಿ ಚಕ್ರ ವಾಹನದ ನಡುವೆ ಮುಖಾಮುಖಿ ಅಪಘಾತಕ್ಕೀಡಾಗಿ ಮಾ.೯ರಂದು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಮೃತನಾದ ಬಿ.ಟಿವಿ ವರದಿಗಾರರಾದ ಎಸ್. ಅನಿಲ್ ಕುಮಾರ್ ನಾಯ್ಕರವರಿಗೆ ಮಾನವೀಯ ಶ್ರದ್ದಾಂಜಲಿ ಅರ್ಪಿಸಿ ಈ ಮೂಲಕ ಕರವೇ ಸ್ವಾಭಿಮಾನಿ ಬಣ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವಂತೆ ಆಗ್ರಹಿಸಿದ್ದಾರೆ,

ಪತ್ರಕರ್ತ ಮೃತ ಅನಿಲ್ ನಾಯ್ಕರವರ ಕುಟುಂಬ ದಯನೀಯ ಸ್ಥಿತಿಯಲ್ಲಿ.. 

ಪತ್ರಕರ್ತರಾಗಿ ಸಮಾಜದಲ್ಲಿ ಶ್ರಮಿಸುತ್ತಿರುವ ಕುಟುಂಬಗಳಿಗೆ ನಿಜಕ್ಕೂ ಯಾವುದೇ ಜೀವ ಭದ್ರತೆಗಳಾಗಲಿ, ಕುಟುಂಬಕ್ಕೆ ಆರ್ಥಿಕ ಭದ್ರತೆಗಳಾಗಲಿ ಬಹುತೇಕ ಇಲ್ಲವಾಗಿದ್ದು, ದೃಶ್ಯ ಮಾಧ್ಯಮದ ಪತ್ರಕರ್ತ ಮೃತ ಅನಿಲ್ ನಾಯ್ಕರವರ ಕುಟುಂಬ ಇಂತಹದೊಂದು ದಯನೀಯ ಸ್ಥಿತಿಯಲ್ಲಿದೆ ಎಂದು ಹೇಳಿದ್ದಾರೆ,

ಮಕ್ಕಳ ವ್ಯಾಸಾಂಗಕ್ಕೆ ಅನುಕೂಲವಾಗುವಂತೆ ಆರ್ಥಿಕ ನೆರವು…

ಪತ್ರಕರ್ತ ಎಸ್ ಅನಿಲ್ ಕುಮಾರ್‌ರವರು ಇಲ್ಲದ ಈ ಕುಟುಂಬ ಆರ್ಥಿಕ ಆವಸಾನಕ್ಕೆ ತಲುಪಿದ್ದು ಇಂದು ಅನಾಥವಾಗಿದೆ, ಈ ಸಂದರ್ಭದಲ್ಲಿ ಸಂತಾಪ ಸೂಚನೆಗಿಂತಲೂ ಈ ಕುಟುಂಬದ ಮೂರುವರೆ ವರ್ಷದ ಗಂಡು ಮಗು ಹಾಗೂ ಓರ್ವ ಮಗಳು, ಪತ್ನಿ ಅವರುಗಳು ಜೀವನ ನಿರ್ವಹಣೆ ಹಾಗೂ ಮಕ್ಕಳ ವ್ಯಾಸಾಂಗಕ್ಕೆ ಅನುಕೂಲವಾಗುವಂತೆ ಆರ್ಥಿಕ ನೆರವು ಆಗತ್ಯವಾಗಿ ಬೇಕಾಗಿದೆ ಎಂದು ಕರವೇ ಸ್ವಾಭಿಮಾನಿ ಬಣ ಈ ಮೂಲಕ ತಿಳಿಸಿದೆ,

ಆರ್ಥಿಕ ನೆರವು ಬಿಡುಗಡೆಯಾಗಲಿ ಕರವೇ ಸ್ವಾಭಿಮಾನಿ ಬಣ…

ಎಸ್.ಎನ್ ಚೆನ್ನಬಸಪ್ಪನವರ ಶಾಸಕ ನಿಧಿ, ಬಿ.ವೈ ರಾಘವೇಂದ್ರರವರ ಸಂಸದ ನಿಧಿ, ಹಾಗೂ
ಉಸ್ತುವಾರಿ ಮಂತ್ರಿಗಳಾದ ಮಧು ಬಂಗಾರಪ್ಪನವರ ವಿವೇಚನಾ ನಿಧಿ ಹಾಗೂ ಕಳೆದ ಶಿವಮೊಗ್ಗ ಮಹಾನಗರ ಪಾಲಿಕೆಯ ಬಜೆಟ್‌ನಲ್ಲಿ ಮೀಸಲಿರಿಸಿರುವ ಪತ್ರಕರ್ತರ ಕ್ಷೇಮನಿಧಿಯಿಂದ ಈ ಕೂಡಲೇ ಮೃತ ಪತ್ರಕರ್ತನ ಕುಟುಂಬಕ್ಕೆ ಆರ್ಥಿಕ ನೆರವು ಬಿಡುಗಡೆಯಾಗಲಿ ಎಂದು ಕರವೇ ಸ್ವಾಭಿಮಾನಿ ಬಣದಿಂದ ತಿಳಿಸುತ್ತೇವೆ ಎಂದು ಹೇಳಿದ್ದಾರೆ,

ಸಾಮಾಜಿಕ ನ್ಯಾಯದ ದಿಸೆಯಲ್ಲಿ ಆರ್ಥಿಕ ನೆರವು ಅಗತ್ಯ…

ಕಳೆದ ಇಪ್ಪತ್ತು ವರುಷದಿಂದ ಶಿವಮೊಗ್ಗದ ‘ವಾಯ್ಸ್ ಆಫ್ ಶಿವಮೊಗ್ಗ’ ದಿನಪತ್ರಿಕೆಯ ಮೂಲಕ ವೃತ್ತಿಜೀವನ ಆರಂಭಿಸಿದ್ದ ಅನಿಲ್ ನಾಯ್ಕ ಟಿವಿ.9 ಚಿಕ್ಕಮಗಳೂರು ಜಿಲ್ಲಾ ಕ್ಯಾಮೆರಾಮನ್ ಆಗಿ ಸೇವೆ ಸಲ್ಲಿಸಿ ನಂತರ ಬಿಟಿವಿ ಶಿವಮೊಗ್ಗದ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು ಆದರೆ ದುರಂತದ ಅಪಘಾತದಲ್ಲಿ ಮೃತರಾಗಿರುವ ಇವರ ಕುಟುಂಬದಲ್ಲಿ ಇದೀಗ ಯಾವ ಜೀವನ ಭದ್ರತೆಯು ಇಲ್ಲವಾಗಿದೆ ಹೀಗಾಗಿ ಬಿ.ಟಿವಿ ವರದಿಗಾರ ಅನಿಲ್ ಕುಟುಂಬಕ್ಕೆ ಸಾಮಾಜಿಕ ನ್ಯಾಯದ ದಿಸೆಯಲ್ಲಿ ಆರ್ಥಿಕ ನೆರವು ಅಗತ್ಯವಾಗಿದೆ ಎಂದು ಕರವೇ ಸ್ವಾಭಿಮಾನಿ ಬಣ ಈ ಮೂಲಕ ಮನವಿ ಮಾಡಿದೆ, ಮನವಿ ಸಂದರ್ಭದಲ್ಲಿ ಕರವೇ ಸ್ವಾಭಿಮನಿ ಬಣದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Gara Srinivas

Gara Srinivas

Leave a comment

error: Content is protected !!