Saturday, August 1, 2026
Homeಸೂರ್ಯಗಗನI ವಿಭಿನ್ನತೆಯ ಹೋರಾಟವನ್ನು ಕಟ್ಟಿದವರು ಹಿರಿಯ ಪತ್ರಕರ್ತ ಕಾಮ್ರೆಡ್ ಎಂ ಲಿಂಗಪ್ಪ I ಗಣ್ಯರು ಹಾಗೂ...

I ವಿಭಿನ್ನತೆಯ ಹೋರಾಟವನ್ನು ಕಟ್ಟಿದವರು ಹಿರಿಯ ಪತ್ರಕರ್ತ ಕಾಮ್ರೆಡ್ ಎಂ ಲಿಂಗಪ್ಪ I ಗಣ್ಯರು ಹಾಗೂ ಪ್ರಶಸ್ತಿ ಪುರಸ್ಕೃತರ ಅಭಿಮತ I

I ವಿಭಿನ್ನತೆಯ ಹೋರಾಟವನ್ನು ಕಟ್ಟಿದವರು ಹಿರಿಯ ಪತ್ರಕರ್ತ ಕಾಮ್ರೆಡ್ ಎಂ ಲಿಂಗಪ್ಪ I ಗಣ್ಯರು ಹಾಗೂ ಪ್ರಶಸ್ತಿ ಪುರಸ್ಕೃತರ ಅಭಿಮತ I

ಶಿವಮೊಗ್ಗ : ನಾಡು ಕಂಡಂತಹ ಹಿರಿಯ ದಣಿವರಿಯದ ಅಕ್ಷರದ ದನಿ ಕಾಮ್ರೇಡ್ ಎಂ ಲಿಂಗಪ್ಪರವರು ಸಾಮಾಜಿಕ ಕಳಕಳಿ, ಸಾಮಾಜಿಕ ನ್ಯಾಯ, ಅಸಹಾಯಕರ, ದುರ್ಬಲ ಜನತೆಯ ಪರವಾಗಿ ಪ್ರತಿಧ್ವನಿಸಿದ್ದ ವಿಶೇಷ ವ್ಯಕ್ತಿತ್ವದ ರಾಜಿರಹಿತ ಪತ್ರಕರ್ತರಾಗಿದ್ದರು’ ಎಂದು ತಿಳಿದುಕೊಂಡಿದ್ದೆ, ಅವರನ್ನು ನಗರದ ವಿವಿದೆಡೆ ದರ್ಶಿಸಿಯು ಇದ್ದೆ, ಅವರ ಕೆಂಪು ಪೋಷಾಕು, ಟೋಪಿ, ಹೆಗಲಿಗೆ ಮೈಕ್ ಹಾಕಿಕೊಂಡು, ಕೈಯಲ್ಲಿ ಪತ್ರಿಕೆ ಇಟ್ಟುಕೊಂಡು ಸಾರ್ವಜನಿಕರ ಗಮನ ಸೆಳೆದಿದ್ದರು, ಈ ಮೂಲಕ ಆಡಳಿತ ವ್ಯವಸ್ಥೆಯನ್ನು ಎಚ್ಚರಿಸುತ್ತಿದ್ದು ಇಂದಿಗೂ ಯಾರು ಮಾಡಲಾಗದ ಹೋರಾಟದ ಗಣಿಯಾಗಿದ್ದರು ಎಂದು ಶಿಕಾರಿಪುರದ “ಅಕ್ಷರ ಎಜುಕೇಷನ್ ಟ್ರಸ್ಟ್ ” ಸಂಸ್ಥಾಪಕರಾದ ಡಿ ರವಿಕುಮಾರ್ ಅಭಿಪ್ರಾಯಪಟ್ಟರು,

ಅವರು ಶಿವಮೊಗ್ಗ ನಗರದ ಆರ್’ಟಿಓ ಕಚೇರಿ ರಸ್ತೆಯಲ್ಲಿರುವ ಶ್ರೀ ಕಲಾ ಕೌಶಲ್ಯ ಅಭಿವೃದ್ದಿ ಕೇಂದ್ರ ಆವರಣದಲ್ಲಿ ಏಪ್ರಿಲ್ 09 ರ ಸಂಜೆ ‘ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ’ ಸಂಘಟನೆವತಿಯಿಂದ ಆಯೋಜಿಸಿದ್ದ ದಿವಂಗತರಾದ ಹಿರಿಯ ಪತ್ರಕರ್ತ ‘ಕಾಮ್ರೇಡ್ ಎಂ ಲಿಂಗಪ್ಪ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಬರಪೂರತೆಯಿಂದ ಮಾತನಾಡಿದರು.

ಹಿಂದುಳಿದ ಜನಜಾಗೃತಿ ಸಮಿತಿ ಸಂಚಾಲಕರಾದ ಆರ್ ಟಿ ನಟರಾಜ್ ಅವರು ಮಾತನಾಡಿ, ‘ಕಾಮ್ರೇಡ್ ಎಂ ಲಿಂಗಪ್ಪರೊಂದಿಗೆ ತಮಗೆ ಹಲವು ದಶಕಗಳ ಒಡನಾಟವಿತ್ತು. ಯಾವುದೇ ಮರ್ಜಿ – ಮುಲಾಜಿಗೂ ಒಳಗಾಗುತ್ತಿರಲಿಲ್ಲ. ನೊಂದವರಿಗೆ ನ್ಯಾಯ ಕೊಡಿಸುತ್ತಿದ್ದರು. ಹೋರಾಟದ ದೊಡ್ಡ ಧ್ವನಿಯಾಗಿದ್ದರು’ ಎಂದು ತಿಳಿಸಿದರು.

ಶಿವಮೊಗ್ಗ ಮಹಾನಗರ ಪಾಲಿಕೆ ಮಾಜಿ ಕಾರ್ಪೋರೇಟರ್ ಐಡಿಯಲ್ ಗೋಪಿ, ( ಜಿ ಗೋಪಾಲಕೃಷ್ಣ ) ಅವರು ಮಾತನಾಡಿ, ತಾವೊಬ್ಬ ರಾಜಕಾರಣಿಯಾಗಲು ಕಾಮ್ರೇಡ್ ಅವರು ಕಾರಣಕರ್ತರಾಗಿದ್ದಾರೆ. ಅವರ ಹೋರಾಟದ ಸ್ಪೂರ್ತಿಯೇ ಪಾಲಿಕೆಯ ಜವಾಬ್ದಾರಿಯನ್ನು ನಿರ್ವಹಿಸಲು ಸಾಧ್ಯವಾಗಿದೆ, ದುರ್ಗಿಗುಡಿ ರಸ್ತೆಯ ತಮ್ಮ ಮನೆಯ ಬಳಿಯೇ ಅವರ ಮನೆಯಿತ್ತು. ಬಾಲ್ಯದಿಂದಲೇ ತಮ್ಮಲ್ಲಿ ನಾಯಕತ್ವ ಗುಣ ಬೆಳೆಸಿದ್ದರು. ಅವರು ಚುನಾವಣೆಗೆ ನಿಂತಾಗ ತಾವು ಅವರೊಂದಿಗೆ ಪ್ರಚಾರಕ್ಕೆ ತೆರಳುತ್ತಿದ್ದೆ. ಅವರಂತಹ ಕೆಚ್ಚೆದೆಯ ಹೋರಾಟಗಾರರನ್ನು ತಾವು ನೋಡಿಲ್ಲ’ ಎಂದು ಅವರ ವ್ಯಕ್ತಿತ್ವದ ಗುಣಗಾನ ಮಾಡಿದರು.

ವಕೀಲರಾದ ಗೀತಾ ಮಾನೆ ಅವರು ಮಾತನಾಡಿ, ‘ಕಾಮ್ರೇಡ್ ಅವರ ಹೆಸರಿನಲ್ಲಿ ಸಮಾಜದ ವಿವಿಧ ವರ್ಗಗಳ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ನಿಜಕ್ಕೂ ಅಭಿನಂದನೀಯ, ಮಾದರಿಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಹೊತ್ತಿನ ತಲೆಮಾರಿನ ಯುವ ಸಮುದಾಯಕ್ಕೆ ಮಾದರಿ ಎಂದು ತಿಳಿಸಿದರು,

ಸಂಘಟನೆಯ ಅಧ್ಯಕ್ಷ ಗಾರಾ ಶ್ರೀನಿವಾಸ್ ಅವರು ಮಾತನಾಡಿ ‘ಕಾಮ್ರೇಡ್ ದೈಹಿಕವಾಗಿ ದೂರವಾಗಿರಬಹುದು. ಆದರೆ ಅವರ ಹೋರಾಟದ ಜೀವನ ಅವಿಸ್ಮರಣೀಯ. ಅವರ ನೆನಪು ಸದಾ ಕಾಲವಿರಬೇಕೆಂಬ ಉದ್ದೇಶದಿಂದ ಅವರ ಹೆಸರಿನಲ್ಲಿ ಪ್ರತಿ ವರ್ಷ ಸಮಾಜದ ವಿವಿಧ ವರ್ಗಗಳ  ಸಾಧಕರನ್ನು ಗುರುತಿಸಿ ಸಂಘಟನೆಯಿಂದ ಗೌರವಿಸ ಲಾಗುವುದು’ ಎಂದು ತಿಳಿಸಿದರು.

ಜೆಎನ್’ಎನ್’ಸಿಇ ಉಪನ್ಯಾಸಕ ಸುರೇಶ್ ಹೆಚ್ ಬಿ ಅವರು ಕಾಮ್ರೇಡ್ ಒಡನಾಟದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ದಯಾನಂದ್, ಕಾಮ್ರೇಡ್ ಅವರ ಮೊಮ್ಮಗ ಅಶೋಕ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಪರಮೇಶ್, ಪ್ರಧಾನ ಕಾರ್ಯದರ್ಶಿ ನವೀನ್ ತಲಾರಿ, ನಿರ್ದೇಶಕರಾದ ಚಿರಂಜೀವಿ ಬಾಬು, ಶೃತಿ ಶೇಟ್, ಅನಿಲ್ ಕುಮಾರ್, ಎಂ ಎನ್ ಸಿಗ್ಬತ್ ಉಲ್ಲಾ, ಕರವೇ ಕಿರಣ್ ಕುಮಾರ್, ಪತ್ರಿಕಾ ವಿತರಕ ಸಂಘದ ಮುಖಂಡ ಮಾಲತೇಶ್ ಸೇರಿದಂತೆ ಮೊದಲಾದವರಿದ್ದರು.

ಸಿನಿಮಾ ನಟ, ಪತ್ರಕರ್ತ, ಬರಹಗಾರ, ವಕೀಲರಿಗೆ ಪ್ರಶಸ್ತಿ ಪ್ರದಾನ :

ಸಿನಿಮಾ ನಟ ರಘುರಾಜ್ ಮಲ್ನಾಡ್, ಪತ್ರಕರ್ತ ಬಿ ರೇಣುಕೇಶ್, ಸಾಹಿತಿ ಖಲಂದರ್ ರಜ್ಜಿ ಬೆಜ್ಜವಳ್ಳಿ, ಯುವ ವಕೀಲರಾದ ರೇಖೇಶ್ ಮಾನೆ ಅವರಿಗೆ ‘ಕಾಮ್ರೇಡ್ ಎಂ ಲಿಂಗಪ್ಪ’ ಪ್ರಶಸ್ತಿ ನೀಡಿ ಆತ್ಮೀಯವಾಗಿ ಅಭಿನಂದಿಸಲಾಯಿತು. ಪ್ರಶಸ್ತಿ ಪುರಸ್ಕೃತರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಪತ್ರಕರ್ತ ಬಿ ರೇಣುಕೇಶ್ ಅವರು ಮಾತನಾಡಿ, ‘ಕಾಮ್ರೇಡ್ ಅವರು ತಮ್ಮ ಪತ್ರಿಕೋದ್ಯಮದ ಗುರುಗಳಾಗಿದ್ದಾರೆ. ಶೋಷಿತರು, ಬಡವರು, ನೊಂದವರ ಧ್ವನಿಯಾಗಿದ್ದರು. ತಾವು ನಂಬಿದ ತತ್ವ – ಸಿದ್ದಾಂತಗಳಿಗೆ ಬದ್ದರಾಗಿ ಜೀವನ ನಡೆಸಿದ ಅಪರೂಪದ ಪತ್ರಕರ್ತರಾಗಿದ್ದರು’ ಎಂದು ಅವರೊಂದಿಗಿನ ಒಡನಾಟ ಮೆಲುಕು ಹಾಕಿದರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I