I ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಬೇಂಚ್ ಸ್ಥಾಪನೆಗೆ I ಹಜರತ್ ಶಾಲೀಂ ದಿವಾನ್ ದರ್ಗಾ ಶಾಪಿಂಗ್ ಕಾಂಪ್ಲೆಕ್ಸ್ ಅಧ್ಯಕ್ಷರಾದ I ಕೇಬಲ್ ಪೈರೋಜ್ ಅವರಿಂದ ಆಗ್ರಹ I
ಶಿವಮೊಗ್ಗ : ಶಿವಮೊಗ್ಗಕ್ಕೆ ಹೈಕೋರ್ಟ್ ಸರ್ಕ್ಯೂಟ್ ಬೇಂಚ್ ಸ್ಥಾಪನೆಗೆ ಹಾಗೂ ಮಂಗಳೂರು ಪೀಠದ ವಿಷಯದಲ್ಲಿ ಮಧ್ಯ ಕರ್ನಾಟಕ ಹಾಗೂ ಶಿವಮೊಗ್ಗದ ಹೆಸರನ್ನು ಸೇರಿಸದಿರಿ ಎಂದು ಹಜರತ್ ಶಾಲೀಂ ದಿವಾನ್ ದರ್ಗಾ ಶಾಪಿಂಗ್ ಕಾಂಪ್ಲೆಕ್ಸ್ ಅಧ್ಯಕ್ಷರಾದ ಕೇಬಲ್ ಪೈರೋಜ್ ಆಗ್ರಹಿಸಿದ್ದಾರೆ,
ಅವರು ಕಳೆದ ಹದಿನಾಲ್ಕು ದಿನಗಳಿಂದ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿರುವ ಶಿವಮೊಗ್ಗ ಜಿಲ್ಲಾ ವಕೀಲರ ಸಂಘಕ್ಕೆ ಸಂಪೂರ್ಣ ಬೆಂಬಲವಿದೆ, ಯಾವುದೇ ಕಾರಣಕ್ಕೂ ಶಿವಮೊಗ್ಗದಲ್ಲಿಯೇ ಹೈಕೋರ್ಟ್ ಸರ್ಕ್ಯೂಟ್ ಬೇಂಚ್ ಸ್ಥಾಪಿಸಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ,
ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಬೇಂಚ್ ಎನ್ನುವ ಬೇಡಿಕೆ ನ್ಯಾಯಯುತವಾಗಿದ್ದು ಇದು ಕೇವಲ ವಕೀಲರ ಹೋರಾಟವಲ್ಲ ನಾಗರೀಕ ಹೋರಾಟವಾಗಿದ್ದು ಇದು ಎಲ್ಲಾ ಸಮುದಾಯಗಳಿಗೂ ಸಿಗುವ ಸಾಮಾಜಿಕ ನ್ಯಾಯವಾಗಿದೆ ಎಂದು ಕೇಬಲ್ ಪೈರೋಜ್ರವರು ಹೇಳಿದರು,
ಮೊನ್ನೆಯ ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ವಿವಿಧ ನಾಗರೀಕ ಸಂಸ್ಥೆಗಳಿಂದ ನಡೆದ ಜಾಥ ಇಡೀ ರಾಜ್ಯಕ್ಕೆ ನ್ಯಾಯದ ಸಂದೇಶ ರವಾನಿಸಿದಂತಾಗಿದೆ, ಶ್ರೀ ಸಾಮಾನ್ಯರ ಹಿತದೃಷ್ಠಿಯಿಂದ ಇದು ಸಮಂಜಸ ನ್ಯಾಯಯುತ ದನಿಯಾಗಿದ್ದು ಇದೊಂದು ಬಹುದೊಡ್ಡ ಚಳುವಳಿಯಾಗಲಿದೆ ಎಂದು ಕೇಬಲ್ ಫೈರೋಜ್ ಹೇಳಿದ್ದಾರೆ,
ಇನ್ನೂ ಮದ್ಯ ಕರ್ನಾಟಕದ ಭಾಗವಾಗಿರುವ ಈ ಪ್ರದೇಶಕ್ಕೆ ಬಹಳ ಹಿಂದಿನಿಂದಲೂ ಪರಿಸರ ವಿರೋಧಿ ಅನ್ಯಾಯಗಳು ಜರುಗುತ್ತಲೇ ಇದೆ. ಇಂತಹ ಅವೈಜ್ಞಾನಿಕ ದಾಳಿಗಳ ಪಟ್ಟಿಯಲ್ಲಿ ಮಂಗಳೂರು ಪೀಠ ಸ್ಥಾಪನೆಯ ಪ್ರಸ್ತಾವನೆಯಲ್ಲಿ ಏಕಾಎಕಿ ಅವೈಜ್ಞಾನಿಕವಾಗಿ, ದುರುದ್ದೇಶಪೂರಿತವಾಗಿ ಶಿವಮೊಗ್ಗದ ಹೆಸರನ್ನು ಸೇರ್ಪಡೆಗೊಳಿಸಿರುವುದು ಸೇರಿಕೊಂಡಿರುವುದು ಶಿವಮೊಗ್ಗದ ಜನತೆಗಾದ ಅವಮಾನಕರವಾಗಿದೆ, ಹೀಗಾಗಿ ಈ ಕೂಡಲೇ ರಾಜ್ಯ ಸರ್ಕಾರ ಮರುಪರೀಲಿಸಬೇಕು, ಎಲ್ಲಾ ಅನುಕೂಲತೆಗಳಿರುವ ಶಿವಮೊಗ್ಗಕ್ಕೆ ಹೈಕೋರ್ಟ್ ಸರ್ಕ್ಯೂಟ್ ಬೇಂಚ್ ಸ್ಥಾಪನೆಗೆ ಮುಂದಾಗಬೇಕೆಂದು ಹಜರತ್ ಶಾಲೀಂ ದಿವಾನ್ ದರ್ಗಾ ಶಾಪಿಂಗ್ ಕಾಂಪ್ಲೆಕ್ಸ್ ಅಧ್ಯಕ್ಷರಾದ ಕೇಬಲ್ ಪೈರೋಜ್ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

