Saturday, August 1, 2026
Homeಸೂರ್ಯಗಗನI ಹಿಂದೂ ದೇವತೆಗಳ ಕುರಿತಾಗಿ ಅವಹೇಳನಕಾರಿ ಹೇಳಿಕೆ I ಭಗವಾನ್ ವಿರುದ್ದ ಕಾನೂನು ಕ್ರಮಕ್ಕೆ I...

I ಹಿಂದೂ ದೇವತೆಗಳ ಕುರಿತಾಗಿ ಅವಹೇಳನಕಾರಿ ಹೇಳಿಕೆ I ಭಗವಾನ್ ವಿರುದ್ದ ಕಾನೂನು ಕ್ರಮಕ್ಕೆ I ಹಿಂದೂ ಜನಜಾಗೃತಿ ಸಮಿತಿ ಆಗ್ರಹ I

I ಹಿಂದೂ ದೇವತೆಗಳ ಕುರಿತಾಗಿ ಅವಹೇಳನಕಾರಿ ಹೇಳಿಕೆ I ಭಗವಾನ್ ವಿರುದ್ದ ಕಾನೂನು ಕ್ರಮಕ್ಕೆ I ಹಿಂದೂ ಜನಜಾಗೃತಿ ಸಮಿತಿ ಆಗ್ರಹ I

ಶಿವಮೊಗ್ಗ : ಅಸಂಖ್ಯಾತ ಹಿಂದೂಗಳ ಆರಾಧ್ಯ ದೈವ ಮರ್ಯಾದಾ ಪುರುಷೋತ್ತಮ “ಶ್ರೀ ರಾಮ”ನ ಬಗ್ಗೆ ಅವಹೇಳನಕಾರಿ, ಪ್ರಚೋದನಾಕಾರಿ, ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಹೇಳಿಕೆ ನೀಡಿರುವ ಪ್ರೊ. ಕೆ.ಎಸ್. ಭಗವಾನ್ ರವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಕುರಿತು ಇಂದು ಜಿಲ್ಲಾಧಿಕಾರಿಗಳಿಗೆ ಹಿಂದೂ ಜನ ಜಾಗೃತಿ ಸಮಿತಿಯಿಂದ ಮನವಿ ನೀಡಲಾಯಿತು,

ಮನವಿ ಕುರಿತಾಗಿ ಮಾತಾಡಿರುವ ನಟರಾಜ್ ಅವರು ಹಿಂದೂ ಧರ್ಮ ಶ್ರೀರಾಮ ಹಾಗೂ ಹಿಂದೂ ದೇವತೆಗಳ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಪ್ರೊ. ಕೆ.ಎಸ್ ಭಗವಾನ್ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ತಿಳಿಸಿದರು,

ಕೇವಲ ಪಂಥೀಯ ವಾದಗಳಿಗೆ ಮಹತ್ವೀಕರಿಸುವ ಭಗವಾನ್ ಅವರು ಈ ಹಿಂದೆಯಿಂದಲೂ ದೇಶದ ಪರಂಪರೆ, ಸಾಂಸ್ಕೃತಿಕ, ಆಚರಣೆ ಕುರಿತು ವಿರೋಧಬಾಸವಾಗಿಯೇ ಮಾತನಾಡಿಕೊಂಡು ಬರುತ್ತಿದ್ದಾರೆ, ಇಂತಿವರ ಮೇಲೆ ಕಾನೂನಿನ್ವಯ ಶಿಸ್ತು ಕ್ರಮ ಜರುಗಿಸದೇ ಇರುವುದೇ ಇದಕ್ಕೆ ಕಾರಣವಾಗಿದೆ, ಹೀಗಾಗಿ ಭಗವಾನ್ ಅವರು ದೇಶಕ್ಕೆ ಮಾರಕ ಎಂದರು,

ಮನವಿಯ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿ ಮತ್ತು ವಿಶ್ವ ಹಿಂದೂ ಪರಿಷತ್ತಿನ ನಟರಾಜ್. ಬಜರಂಗದಳದ ಜಗದೀಶ್. ಮರಾಠ ಸಮಾಜದ ಮುಖಂಡರಾದ ಸುದೇವರಾವ್. ಆಟೋ ಚಾಲಕ ಸಂಘದ ಪವನ್. ನಾಗಣ್ಣ.ಪ್ರಫುಲ್ಲ ಚಂದ್ರ ಹೆಚ್. ಕರ್ನಾಟಕ ನಾಡು ರಕ್ಷಣಾ ವೇದಿಕೆ ಆಟೋ ಘಟಕ ನಗರ ಅಧ್ಯಕ್ಷರು.ಗೋ ರಕ್ಷಕ ದಳ ಶ್ರೀಪಾದ್ ರೇವಣಕರ್. ವಕೀಲರುಗಳಾದ. ವಾಗೀಶ್. ರೇಕೇಶ್ ಮಾನೆ. ವಿಶ್ವನಾಥ್. ಚಿದಾನಂದ. ಕೌಶಿಕ್ ಸತ್ಯ ಸ್ವರೂಪ ಅಯ್ಯಪ್ಪ ಬಳಗದ  ಪ್ರವೀಣ್ ಇನ್ನು ಹಲವಾರು ಹಿಂದೂ ಸಂಘಟನೆಗಳ ಪ್ರಮುಖರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು,

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I