I ಹಿಂದೂ ದೇವತೆಗಳ ಕುರಿತಾಗಿ ಅವಹೇಳನಕಾರಿ ಹೇಳಿಕೆ I ಭಗವಾನ್ ವಿರುದ್ದ ಕಾನೂನು ಕ್ರಮಕ್ಕೆ I ಹಿಂದೂ ಜನಜಾಗೃತಿ ಸಮಿತಿ ಆಗ್ರಹ I
ಶಿವಮೊಗ್ಗ : ಅಸಂಖ್ಯಾತ ಹಿಂದೂಗಳ ಆರಾಧ್ಯ ದೈವ ಮರ್ಯಾದಾ ಪುರುಷೋತ್ತಮ “ಶ್ರೀ ರಾಮ”ನ ಬಗ್ಗೆ ಅವಹೇಳನಕಾರಿ, ಪ್ರಚೋದನಾಕಾರಿ, ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಹೇಳಿಕೆ ನೀಡಿರುವ ಪ್ರೊ. ಕೆ.ಎಸ್. ಭಗವಾನ್ ರವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಕುರಿತು ಇಂದು ಜಿಲ್ಲಾಧಿಕಾರಿಗಳಿಗೆ ಹಿಂದೂ ಜನ ಜಾಗೃತಿ ಸಮಿತಿಯಿಂದ ಮನವಿ ನೀಡಲಾಯಿತು,
ಮನವಿ ಕುರಿತಾಗಿ ಮಾತಾಡಿರುವ ನಟರಾಜ್ ಅವರು ಹಿಂದೂ ಧರ್ಮ ಶ್ರೀರಾಮ ಹಾಗೂ ಹಿಂದೂ ದೇವತೆಗಳ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಪ್ರೊ. ಕೆ.ಎಸ್ ಭಗವಾನ್ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ತಿಳಿಸಿದರು,
ಕೇವಲ ಪಂಥೀಯ ವಾದಗಳಿಗೆ ಮಹತ್ವೀಕರಿಸುವ ಭಗವಾನ್ ಅವರು ಈ ಹಿಂದೆಯಿಂದಲೂ ದೇಶದ ಪರಂಪರೆ, ಸಾಂಸ್ಕೃತಿಕ, ಆಚರಣೆ ಕುರಿತು ವಿರೋಧಬಾಸವಾಗಿಯೇ ಮಾತನಾಡಿಕೊಂಡು ಬರುತ್ತಿದ್ದಾರೆ, ಇಂತಿವರ ಮೇಲೆ ಕಾನೂನಿನ್ವಯ ಶಿಸ್ತು ಕ್ರಮ ಜರುಗಿಸದೇ ಇರುವುದೇ ಇದಕ್ಕೆ ಕಾರಣವಾಗಿದೆ, ಹೀಗಾಗಿ ಭಗವಾನ್ ಅವರು ದೇಶಕ್ಕೆ ಮಾರಕ ಎಂದರು,
ಮನವಿಯ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿ ಮತ್ತು ವಿಶ್ವ ಹಿಂದೂ ಪರಿಷತ್ತಿನ ನಟರಾಜ್. ಬಜರಂಗದಳದ ಜಗದೀಶ್. ಮರಾಠ ಸಮಾಜದ ಮುಖಂಡರಾದ ಸುದೇವರಾವ್. ಆಟೋ ಚಾಲಕ ಸಂಘದ ಪವನ್. ನಾಗಣ್ಣ.ಪ್ರಫುಲ್ಲ ಚಂದ್ರ ಹೆಚ್. ಕರ್ನಾಟಕ ನಾಡು ರಕ್ಷಣಾ ವೇದಿಕೆ ಆಟೋ ಘಟಕ ನಗರ ಅಧ್ಯಕ್ಷರು.ಗೋ ರಕ್ಷಕ ದಳ ಶ್ರೀಪಾದ್ ರೇವಣಕರ್. ವಕೀಲರುಗಳಾದ. ವಾಗೀಶ್. ರೇಕೇಶ್ ಮಾನೆ. ವಿಶ್ವನಾಥ್. ಚಿದಾನಂದ. ಕೌಶಿಕ್ ಸತ್ಯ ಸ್ವರೂಪ ಅಯ್ಯಪ್ಪ ಬಳಗದ ಪ್ರವೀಣ್ ಇನ್ನು ಹಲವಾರು ಹಿಂದೂ ಸಂಘಟನೆಗಳ ಪ್ರಮುಖರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು,

