I ಕಾರ್ಯನಿಮಿತ್ತ ಶಿವಮೊಗ್ಗಕ್ಕೆ ಆಗಮಿಸಿದ್ದ ಪ್ರಮೋದ್ ಮುತಾಲಿಕ್ ಜೀ ಅವರ ಬೇಟಿ I
ಶಿವಮೊಗ್ಗ : ಕಾರ್ಯನಿಮಿತ್ತ ಶಿವಮೊಗ್ಗ ನಗರಕ್ಕೆ ಆಗಮಿಸಿದ್ದ ಶ್ರೀರಾಮ ಸೇನಾ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಪ್ರಖರ ವಾಗ್ಮಿಗಳಾದ ಪ್ರಮೋದ್ ಮುತಾಲಿಕ್ ಜೀ ಅವರನ್ನು ಬೇಟಿ ಮಾಡಲಾಯಿತು,
ಈ ಸಂದರ್ಭದಲ್ಲಿ ಸೂರ್ಯಗಗನ ಪತ್ರಿಕೆಗೆ ಮನದುಂಬಿ ಹಾರೈಸಿದರು, ಪತ್ರಿಕಾ ಬಳಗದ ಕುಶಲೋಪರಿ ವಿಚಾರಿಸಿದರು, ಸಂಘಟನೆಯಿಂದ ಬಂದು ಸಾಮಾಜಿಕವಾಗಿ ಪತ್ರಿಕಾ ಹಾದಿಯಲ್ಲಿ ಎರಡು ದಶಕಗಳ ಹೆಜ್ಜೆಗೆ ಶ್ಲಾಘನೆ ವ್ಯಕ್ತಪಡಿಸಿದರು, ಸೂರ್ಯಗಗನ ಎಂಬುದು ನಿನ್ನ ಜೀವನದ ಅಕ್ಷರದ ದೀವಿಗೆ ಅದನ್ನೆಂದಿಗೂ ತೊರೆಯದಿರು, ಬದಲಾದ ಆವೃತ್ತಿಯ ಹಾದಿಗೆ ಯಶಸ್ಸು ಸಿಗಲಿ ಎಂದು ಹೇಳಿದರು, ಓರ್ವ ಸಂಘಟಿತ ಗುರುವಾಗಿ ಹಾರೈಸಿದ್ದಕ್ಕೆ ಗೌರವ ವಂದನೆಗಳನ್ನು ಪತ್ರಿಕೆಯಿಂದ ತಿಳಿಸಲಾಯಿತು,
ಬೇಟಿಯಲ್ಲಿ ವರದಿಗಾರರು ಹಾಗೂ ಹಿತೈಷಿಗಳಾದ ಅನಿಲ್ ಕುಮಾರ್ ಹೆಚ್.ಎಲ್ ಹಾಗೂ ಅರವಿಂದ ಸೇರಿದಂತೆ ಮತ್ತಿತರರು ಹಾಜರಿದ್ದರು

