I ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ I ಮತದಾರರ ಸಾಕ್ಷರತಾ ಕ್ಲಬ್ ನಿಂದ I ಎಸ್ ಐಆರ್ ಜಾಗೃತಿ ಜಾಥಾ I
ಶಿವಮೊಗ್ಗ: ರಾಜ್ಯದಲ್ಲಿ ವಿಶೇಷ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಚುರುಕುಗೊಂಡಿರುವ ಹಿನ್ನಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದ ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ಮತದಾರರ ಸಾಕ್ಷರತಾ ಕ್ಲಬ್ ನಿಂದ ಮುಖ್ಯರಸ್ತೆ ಮತ್ತು ಸಾರ್ವಜನಿಕ ಪ್ರದೇಶದಲ್ಲಿ ವಿದ್ಯಾರ್ಥಿಗಳ ಜಾಥಾ ನಡೆಸಲಾಯಿತು.ಅರ್ಹ ಮತದಾರರು ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಸಕ್ರೀಯವಾಗಿ ಭಾಗವಹಿಸುವಂತೆ ಜಾಗೃತಿ ಮೂಡಿಸಲಾಯಿತು.
ಪ್ರಾಂಶುಪಾಲರಾದ ವೆಂಕಟೇಶ, ಇಎಲ್ ಸಿ ಸಂಚಾಲಕ ಎ.ನಾರಾಯಣ, ಉಪನ್ಯಾಸಕರಾದ ಜೀವನ್, ಎ.ಟಿ.ಚೇತನ್, ಎಂ.ಎಲ್. ಗಣೇಶ್ ಕುಮಾರ್ ಇದ್ದರು.

