Saturday, 19 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I
ಸೂರ್ಯಗಗನ

I 80 ಕೋಟಿ ಮೌಲ್ಯದ ಪೊಲೀಸ್ ಕ್ವಾರ್ಟರ್‍ಸ್ I ಜಾಗವನ್ನೇ ಗುಳುಂ I ಮಾಡಲೊರಟಿದ್ದ I ಶ್ರೀನಾಥ್ ನಗರಗದ್ದೆ ಮಲ್ಲೇಶ್ವರಂ ಪೊಲೀಸರ ಬಂಧನದಲ್ಲಿ I

I 80 ಕೋಟಿ ಮೌಲ್ಯದ ಪೊಲೀಸ್ ಕ್ವಾರ್ಟರ್‍ಸ್ I ಜಾಗವನ್ನೇ ಗುಳುಂ I ಮಾಡಲೊರಟಿದ್ದ I ಶ್ರೀನಾಥ್ ನಗರಗದ್ದೆ ಮಲ್ಲೇಶ್ವರಂ ಪೊಲೀಸರ ಬಂಧನದಲ್ಲಿ I ಬೆಂಗಳೂರು/ಶಿವಮೊಗ್ಗ : ಭೂ ಮಾಫಿಯಾದ ಅನಾಹುತಕಾರಿ ಹೆಜ್ಜೆಗಳ ಕುರಿತಾಗಿ ಸೂರ್ಯಗಗನ ಹಾಗೂ ಇತ್ಯಾದಿ ಪತ್ರಿಕೆಯಲ್ಲಿ ದಾಖಲೆಗಳ…

I 80 ಕೋಟಿ ಮೌಲ್ಯದ ಪೊಲೀಸ್ ಕ್ವಾರ್ಟರ್‍ಸ್ I ಜಾಗವನ್ನೇ ಗುಳುಂ I ಮಾಡಲೊರಟಿದ್ದ I ಶ್ರೀನಾಥ್ ನಗರಗದ್ದೆ ಮಲ್ಲೇಶ್ವರಂ ಪೊಲೀಸರ ಬಂಧನದಲ್ಲಿ I

ಬೆಂಗಳೂರು/ಶಿವಮೊಗ್ಗ : ಭೂ ಮಾಫಿಯಾದ ಅನಾಹುತಕಾರಿ ಹೆಜ್ಜೆಗಳ ಕುರಿತಾಗಿ ಸೂರ್ಯಗಗನ ಹಾಗೂ ಇತ್ಯಾದಿ ಪತ್ರಿಕೆಯಲ್ಲಿ ದಾಖಲೆಗಳ ಸಹಿತ ಬಿತ್ತರಿಸಿ ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಂದಿದ್ದರೂ ಶಿವಮೊಗ್ಗದಲ್ಲಿನ ತಹಶಿಲ್ದಾರ್ ಕಛೇರಿ ಪೊಲೀಸ್ ಇಲಾಖೆ, ಸರ್ವೇ ಇಲಾಖೆ ಹಾಗೂ ಜಿಲ್ಲಾಡಳಿತ ಸಂಪೂರ್ಣವಾಗಿ ಕರ್ತವ್ಯ ನಿರ್ಲಜ್ಜತನ ತೋರಿ ಗುಮ್ಮನೆ ಕಾಸು ಹೆಕ್ಕಿಕೊಂಡು ರಾಜಕೀಯ ಒತ್ತಡಕ್ಕೆ ಮಣಿದು ಭೂ ಮಾಫಿಯಾದ ಕರಾಳತೆಗೆ ಬೆಂಬಲಿಸುತ್ತಿದೆ ಇದು ಶಿವಮೊಗ್ಗದಲ್ಲಿ ಸಾಮಾನ್ಯವಾಗಿದ್ದರು, ಬೆಂಗಳೂರಿನಲ್ಲಿ ಪೊಲೀಸರು ಭೂಕಬಳಿಕೆ ವಿರುದ್ದ ನಡೆಸಿದ ಪ್ರಮುಖ ಕಾರ್ಯಾಚರಣೆಯಲ್ಲಿ ಬಿಜೆಪಿಯ ಶ್ರೀನಾಥ್ ನಗರಗದ್ದೆ ಸಿಕ್ಕಿ ಹಾಕಿಕೊಂಡಿದ್ದಾನೆ, ಅಲ್ಲದೆ ಪ್ರಾಥಮಿಕ ಹಂತದ ತನಿಖೆಯಲ್ಲಿ ಇಂತಹುದೇ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಪ್ರಕರಣಗಳನ್ನು ತಿಳಿಸಿದ್ದಾನೆ ಎನ್ನುವ ವರಾತಗಳಲ್ಲಿ ಭೂ ಕಬಳಿಕೆ ವಿರುದ್ದದ ಕಾರ್ಯಾಚರಣೆ ಶಿವಮೊಗ್ಗದಲ್ಲಿ ಯಾವಾಗ..? ಎನ್ನುವ ಪ್ರಶ್ನಾರ್ಹದೊಂದಿಗೆ ಸರಿ ಸುಮಾರು ೮೦ ಕೋಟಿ ಮೌಲ್ಯದ ಪೊಲೀಸ್ ಕ್ವಾರ್ಟರ್‍ಸ್ ಜಾಗವನ್ನು ಪೋರ್ಜರಿ ದಾಖಲೆಗಳಿಂದ ಗುಳುಂ ಮಾಡಲೊರಟ ಪ್ರಕರಣವನ್ನು ವಿಸ್ತೃತವಾಗಿ ಚಿತ್ತವರಿಸಬೇಕಿದೆ.

ಭೂಕಬಳಿಕೆ ವಿರುದ್ಧದ ಪ್ರಮುಖ ಕಾರ್ಯಾಚರಣೆಯಲ್ಲಿ, ಮಲ್ಲೇಶ್ವರಂನಲ್ಲಿರುವ ಸರ್ಕಾರಿ ಸ್ವಾಮ್ಯದ ಪೊಲೀಸ್ ಕ್ವಾರ್ಟರ್ಸ್ ಭೂಮಿಯನ್ನು ಅತಿಕ್ರಮಿಸಲು ಮುಂದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ ಮೇಲೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇಂತಿವ ಆರೋಪಿಗಳು ೨೫,೦೦೦ ಚದರ ಅಡಿ ವಿಸ್ತೀರ್ಣದ ಆಸ್ತಿಯನ್ನು ಅಕ್ರಮವಾಗಿ ಕಬಳಿಸಲು ವಿವರವಾದ ಯೋಜನೆಯನ್ನು ರೂಪಿಸಿದ್ದರು ಮತ್ತು ತಮ್ಮ ಹಕ್ಕನ್ನು ಸಮರ್ಥಿಸಿಕೊಳ್ಳಲು ನಕಲಿ ದಾಖಲೆಗಳನ್ನು ಸಹ ಸಿದ್ಧಪಡಿಸಿದ್ದರು ಎಂದು ವರದಿಯಾಗಿದೆ.

ಬಂಧಿತ ವ್ಯಕ್ತಿಗಳನ್ನು ಶ್ರೀನಾಥ್ ನಗರಗದ್ದೆ, ಕೃಷ್ಣಮೂರ್ತಿ, ಮತ್ತು ಕೃಷ್ಣ ಎಂದು ಗುರುತಿಸಲಾಗಿದೆ. ವಿಚಾರಣೆಯ ಸಮಯದಲ್ಲಿ, ಆರೋಪಿಗಳು ಬೆಂಗಳೂರಿನ ವಿವಿಧ ಭಾಗಗಳಲ್ಲಿ ಇದೇ ರೀತಿಯ ಭೂಕಬಳಿಕೆ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ, ಇದು ವ್ಯಾಪಕ ಜಾಲದ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ ಅಲ್ಲದೆ ಇದರ ಹಿಂದೆ ರಾಜಕೀಯ ಪ್ರಭಾವಿಗಳು ಇದ್ದಾರೆ ಎನ್ನುವುದು ಇದೀಗ ಪೊಲೀಸರು ಗೊತ್ತು ಮಾಡಿಕೊಂಡಿದ್ದಾರೆ.

ಅಧಿಕೃತವಾಗಿ ಪೊಲೀಸ್ ಕ್ವಾರ್ಟರ್ಸ್ ಎಂದು ಗೊತ್ತುಪಡಿಸಲಾದ ಆಸ್ತಿಗೆ ಖಾಸಗಿ ವ್ಯಕ್ತಿ ಮಹಾಲಕ್ಷ್ಮಿ ಹೆಸರಿನಲ್ಲಿ ನೀಡಲಾದ ಅನುಮಾನಾಸ್ಪದ ವಿದ್ಯುತ್ ಬಿಲ್ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಲೋಕಾಯುಕ್ತ ಇನ್ಸ್‌ಪೆಕ್ಟರ್ ನಿವಾಸದಲ್ಲಿ ಬಿಲ್ ಸ್ವೀಕರಿಸಲಾಗಿದೆ ಎಂದು ವರದಿಯಾಗಿದೆ, ಇದು ಅನುಮಾನಕ್ಕೆ ಕಾರಣವಾಗಿದೆ.

ಹಳೆಯ ಮಲ್ಲೇಶ್ವರಂ ಪೊಲೀಸ್ ಠಾಣೆ ಮತ್ತು ಪೊಲೀಸ್ ವಸತಿ ಕ್ವಾರ್ಟರ್ಸ್ ಹೊಂದಿರುವ ಭೂಮಿ ಐತಿಹಾಸಿಕ ಮಹತ್ವವನ್ನು ಹೊಂದಿದೆ ಎಂದು ಹೆಚ್ಚಿನ ತನಿಖೆಯಲ್ಲಿ ತಿಳಿದುಬಂದಿದೆ. ೧೯೧೩ ರ ಹಿಂದಿನ ದಾಖಲೆಗಳು ಆಸ್ತಿಯನ್ನು ಪೊಲೀಸ್ ವಸತಿ ಎಂದು ಸ್ಪಷ್ಟವಾಗಿ ಗುರುತಿಸುತ್ತವೆ. ಪ್ರಸ್ತುತ, ನಾಲ್ಕು ಪೊಲೀಸ್ ಇನ್ಸ್‌ಪೆಕ್ಟರ್‌ಗಳ ಕುಟುಂಬಗಳು ಈ ಆವರಣದಲ್ಲಿ ವಾಸಿಸುತ್ತಿವೆ.

ಆದಾಗ್ಯೂ, ಆರೋಪಿಗಳು ಆಸ್ತಿಯನ್ನು ಮಹಾಲಕ್ಷ್ಮಿ ಹೆಸರಿಗೆ ವರ್ಗಾಯಿಸಲು ಅಧಿಕೃತ ದಾಖಲೆಗಳನ್ನು ತಿರುಚಿದ್ದಾರೆ ಎಂದು ಆರೋಪಿಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೂಲಕ ಅಕ್ರಮ ಇ-ಖಾತಾವನ್ನು ರಚಿಸಲಾಗಿದೆ ಮತ್ತು ಆರೋಪಿಗಳಲ್ಲಿ ಒಬ್ಬರಾದ ಕೃಷ್ಣಮೂರ್ತಿಗೆ ಮಾಲೀಕತ್ವವನ್ನು ವರ್ಗಾಯಿಸಲು ಮಾರಾಟ ಒಪ್ಪಂದವನ್ನು ರೂಪಿಸಲಾಗಿದೆ ಎಂದು ತನಿಖೆಗಳು ಬಹಿರಂಗಪಡಿಸಿವೆ.

ಆಘಾತಕಾರಿ ಸಂಗತಿಯೆಂದರೆ, ಆರೋಪಿಗಳ ಸಹಚರರು ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಪೊಲೀಸ್ ಸಿಬ್ಬಂದಿಯ ಕುಟುಂಬಗಳಿಗೆ ಬೆದರಿಕೆ ಹಾಕಲು ಭೂ ಮಾಫಿಯಾದ ವ್ಯಕ್ತಿಗಳ ಜಾಲದಿಂದ ಪ್ರಯತ್ನಿಸಿದರು ಮತ್ತು ಆವರಣವನ್ನು ಖಾಲಿ ಮಾಡುವಂತೆ ಎಚ್ಚರಿಸಿದರು ಎಂಬುವ ನಿಖರ ಮಾಹಿತಿಗಳು ಹೊರ ಬಿದ್ದಿವೆ

ಲೋಕಾಯುಕ್ತ ಇನ್ಸ್‌ಪೆಕ್ಟರ್ ಕುಮಾರ್ ಸಲ್ಲಿಸಿದ ದೂರಿನ ಆಧಾರದ ಮೇಲೆ, ಪ್ರಕರಣ ದಾಖಲಿಸಲಾಯಿತು ಮತ್ತು ವಿವರವಾದ ತನಿಖೆಯನ್ನು ಪ್ರಾರಂಭಿಸಲಾಯಿತು. ಆರೋಪಿಗಳನ್ನು ಬಂಧಿಸಲು ಮತ್ತು ಮುಂದಿನ ಅಕ್ರಮ ವಹಿವಾಟುಗಳನ್ನು ತಡೆಯಲು ಮಲ್ಲೇಶ್ವರಂ ಪೊಲೀಸರು ತ್ವರಿತವಾಗಿ ಕಾರ್ಯನಿರ್ವಹಿಸಿದರು.

ಈ ಘಟನೆಯು ನಕಲಿ ದಾಖಲೆಗಳು ಮತ್ತು ಆಡಳಿತ ವ್ಯವಸ್ಥೆಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು ಸರ್ಕಾರಿ ಆಸ್ತಿಗಳನ್ನು ಗುರಿಯಾಗಿಸಿಕೊಂಡು ಸಂಘಟಿತ ಭೂ ಮಾಫಿಯಾ ಬೆಳೆಯುತ್ತಿರುವ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳು ಈಗ ಈ ದಂಧೆಯ ವ್ಯಾಪ್ತಿ ಮತ್ತು ಇತರ ಅಧಿಕಾರಿಗಳು ಅಥವಾ ಮಧ್ಯವರ್ತಿಗಳ ಶಾಮೀಲು ಜಾಲದ ವ್ಯಾಪ್ತಿಯನ್ನು ಪರಿಶೀಲಿಸುತ್ತಿದ್ದಾರೆ.

ಇಂತಹ ಅನಾಹುತಕಾರಿ ಆರೋಪಿಗಳಿಂದ ಗುರಿಯಾಗಿರಬಹುದಾದ ಹೆಚ್ಚುವರಿ ಶ್ರೀ ಸಾಮಾನ್ಯರು ಹಾಗೂ ಆಸ್ತಿಗಳನ್ನು ಗುರುತಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

Gara Srinivas

Gara Srinivas

Leave a comment

error: Content is protected !!