I ಸಿರಿಗನ್ನಡ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ I ಕವಿಗೋಷ್ಠಿ,ಬಹುಮಾನ ವಿತರಣೆ I
ಶಿವಮೊಗ್ಗ: ಜಿಲ್ಲೆಯ ಸಿರಿಗನ್ನಡ ವೇದಿಕೆ, ಸಿರಿಗನ್ನಡ ಮಹಿಳಾ ವತಿಯಿಂದ ಇತ್ತೀಚಿಗೆ ಪೊಲೀಸ್ ಚೌಕಿ ಹತ್ತಿರ ಚೇತನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ ನಡೆಯಿತು.
ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಸುಂದರ್ ರಾಜ್ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಕವಯಿತ್ರಿ ಮಾನಸ ಶಿವರಾಮ ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಹಾಗೂ ಮಹಿಳಾ ಸಿರಿಗನ್ನಡ ವೇದಿಕೆ, ಶಿವಮೊಗ್ಗ ತಾಲೂಕು ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿ ದೈವಾಧೀನರಾದ ಡಾ. ನಾಗರತ್ನಮ್ಮ ಇವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ವೇದಿಕೆಯ ಜಿಲ್ಲಾ ಘಟಕ ಅಧ್ಯಕ್ಷರಾದ ನಂದಾ ಪ್ರೇಮಕುಮಾರ್ ನಿರಂಜನ್ ಕುಮಾರ್ ಮಾತನಾಡಿದರು.
ಪ್ರಮುಖರಾದ ಗಂಗಾಧರ್ ಪಿ ಬನ್ನಿಹಟ್ಟಿ ಪ್ರಾರ್ಥಿಸಿದರು. ವಾಗೇಶ್, ಲಕ್ಷ್ಮೀನಾರಾಯಣ, ಹು. ಮ. ಸತೀಶ, ವಕೀಲರಾದ ಡಿ.ಬಿ. ಚಂದ್ರಕುಮಾರ್, ಸರಳ ಕಿರಣ ಕುಮಾರ್, ಬಿ.ಆರ್. ಜಗನ್ನಾಥ್ ಇನ್ನಿತರರಿದ್ದರು.
ಕಾರ್ಯಕ್ರಮದಲ್ಲಿ ಆಹ್ವಾನಿತ ಕವಿಗಳಿಂದ ಕವಿಗೋಷ್ಠಿ, ಹಾಗೂ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ, ಹಾಗೂ “ಮಕ್ಕಳ ದಿನಾಚರಣೆ”ಯ ಪ್ರಯುಕ್ತ ಏರ್ಪಡಿಸಲಾಗಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆಮಾಡಲಾಯಿತು.

