I 8ನೇ ವರ್ಷದ ರಾಜ್ಯಮಟ್ಟದ ಟಗರು ಕಾಳಗ ಉದ್ಘಾಟಿಸಿದ I ಶಾಸಕ ಚೆನ್ನಬಸಪ್ಪ I
ಶಿವಮೊಗ್ಗ : ಐತಿಹಾಸಿಕ ಕೋಟೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ, ಟಗರು ಕಾಳಗ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ “8ನೇ ವರ್ಷದ ರಾಜ್ಯಮಟ್ಟದ ಟಗರು ಕಾಳಗ”ವನ್ನು ಇಂದು ಶಾಸಕ ಚೆನ್ನಬಸಪ್ಪನವರು ಉದ್ಘಾಟಿಸಿದರು,
ನಮ್ಮ ಮಣ್ಣಿನ ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಹಾಗೂ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಕ್ರೀಡಾಕೂಟಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಉದ್ಘಾಟನಾ ಮಾತಿನಲ್ಲಿ ತಿಳಿಸಿದರು,
ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿರುವ ಕ್ರೀಡಾಪಟುಗಳು ಮತ್ತು ಉತ್ಸಾಹಿ ಪ್ರೇಕ್ಷಕರ ಸಮ್ಮುಖದಲ್ಲಿ ಈ ಸಮಾರಂಭವು ಅತ್ಯಂತ ಸಂಭ್ರಮದಿಂದ ಜರುಗಿತು.
ಈ ಸಂದರ್ಭದಲ್ಲಿ ಪ್ರಮುಖರು, ಆಯೋಜಕರು ಉಪಸ್ಥಿತರಿದ್ದರು



