I ಜಿಬಿಎ ಚುನಾವಣೆಗೆ ನಿರ್ಧಾರ I ಕಾವೇರಿಪುರ ವಾರ್ಡಿನ ಕಾಂಗೈ ಅಭ್ಯರ್ಥಿಯಾಗಿ I ಶಿವಮೊಗ್ಗದ ಕಾಂತಯ್ಯ I
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಗಳನ್ನು 2026ರ ಜೂನ್ 14 ರಿಂದ ಜೂನ್ 24ರ ನಡುವೆ ನಡೆಸಲು ರಾಜ್ಯ ಚುನಾವಣಾ ಆಯೋಗವು ನಿರ್ಧರಿಸಿದೆ.
ಈ ಹಿನ್ನಲೆಯಲ್ಲಿ ಕಳೆದ ಹತ್ತು ವರುಷಗಳಿಂದ ಬಿಬಿಎಂಪಿ ಚುನಾವಣೆಯ ಜರುಗದೆ ನೆನೆಗುದಿಗೆ ಬಿದ್ದಿದ್ದ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಇದೀಗ ಗ್ರೇಟರ್ ಬೆಂಗಳೂರಿನ ಹೆಸರಿನಲಿ ಪರಿವರ್ತಿತವಾಗಿದೆ, ಸಾಂವಿಧಾನಿಕವಾಗಿ ಚುನಾವಣೆ ನಡೆಸಬೇಕಾಗಿದ್ದ ರಾಜ್ಯ ಸರ್ಕಾರಗಳು ಅದಕ್ಕೆ ಪೂರಕವಾಗಿ ನಡೆದುಕೊಳ್ಳದೆ ತಾತ್ಸಾರತೆ ಮೆರೆದಿತ್ತು, ರಾಜ್ಯ ಉಚ್ಚನ್ಯಾಯಾಲಯದ ಆದೇಶ ಹಾಗೂ ಸುಪ್ರಿಂ ಕೋರ್ಟ್ ನೀಡಿರುವ ಗಡುವಿನಂತೆ ಅನ್ಯದಾರಿಗಾಣದೆ ಚುನಾವಣೆಗೆ ರಾಜ್ಯ ಸರ್ಕಾರ ಮುಂದಾಗಿದೆ
ಆಯೋಗವು ಶತಾಯ-ಗತಾಯ ಚುನಾವಣೆಯ ಸಿದ್ದತೆ ಮಾಡಿಕೊಂಡಿದ್ದು ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ತಾಕೀತು ಮಾಡಿದೆ ಈ ಎಲ್ಲಾ ಹಿನ್ನಲೆಯಲ್ಲಿ ಶೀಘ್ರದಲ್ಲೇ ಅಂತಿಮ ಚುನಾವಣಾ ದಿನಾಂಕ ಘೋಷಣೆಯಾಗಲಿದೆ.
ಈ ಬೆಳವಣಿಗೆಯಿಂದ ಆಯಾ ಪಕ್ಷಗಳು ಗ್ರೇಟರ್ ಬೆಂಗಳೂರಿನ ಐದು ಪಾಲಿಕೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಸಿದ್ದತೆಗೆ ಮುಂದಾಗಿದೆ, ಈ ಪಟ್ಟಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಪೋರೆಟ್ ಅಭ್ಯರ್ಥಿಯಾಗಲು ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ “ಕಾವೇರಿ ಪುರ” ಅಥವಾ ಮೂಡಲಪಾಳ್ಯ ವಾರ್ಡಿನಿಂದ ಶಿವಮೊಗ್ಗದಲ್ಲಿ ಮೂರು ಭಾರಿ ಅಸೆಂಬ್ಲಿ ಸ್ಥಾನದಿಂದ ಸ್ಪರ್ಧಿಸಿದ್ದ ಎಂ.ಕಾಂತಯ್ಯ ಅವರು ಅಕಾಂಕ್ಷಿಯಾಗಿದ್ದು ಇದನ್ನು ತಮ್ಮ ಕಾಂಗ್ರೆಸ್ ಪಕ್ಷದ ವರಿಷ್ಠರಲ್ಲಿ ಯಾಚಿಸಿಕೊಂಡಿದ್ದಾರೆ, ಇದಕ್ಕೆ ಒಪ್ಪಿಗೆಯು ಸೂಚಿಸಿರುವ ಹಿನ್ನಲೆಯಲ್ಲಿ ಎಂ.ಕಾಂತಯ್ಯ ಪಾಲಿಕೆ ಅಭ್ಯರ್ಥಿಯಾಗಿ ಸ್ಪರ್ಧೆಗೆ ಬಹುತೇಕ ನಿರ್ಧರಿಸಿ ಈಗಾಗಲೇ ಅಖಾಡದಲ್ಲಿದ್ದಾರೆ ಎನ್ನುವ ಮಾತಿದೆ, ಆದರೆ ಈ ಕುರಿತಂತೆ ಅವರ ನಿರ್ಧರಿತ ಹೇಳಿಕೆಗಳು ಇನ್ನಷ್ಟೆ ಹೊರಬೀಳಬೇಕಿದೆ, ಅಲ್ಲಿಯವರೆಗೂ ಈ ಇದು ರಾಜಕೀಯ ಬೆಳವಣಿಗೆಯ ಭಾಗವೆಂದು ಭಾವಿಸಬೇಕಾಗಿದೆ,
ಒಟ್ಟಿನಲ್ಲಿ ಮೇ ತಿಂಗಳು ಮುಗಿಯುವ ಹೊತ್ತಿಗೆ ಯಾವ ಅಭ್ಯರ್ಥಿ ಎಲ್ಲಿ ಸ್ಪರ್ಧಿಸುತ್ತಾರೆ ಎನ್ನುವ ಎಲ್ಲಾ ನಿಖರತೆಯ ಪಟ್ಟಿಗಳು ಬಹಿರಂಗವಾಗಲಿದೆ.

