- I ಮೆ.9 ರಂದು ನಗರದಲ್ಲಿ I ಭಗೀರಥ ಕಪ್ ಕ್ರಿಕೆಟ್ I
ಶಿವಮೊಗ್ಗ : ಭಗೀರಥ ಒಬ್ಬ ಮಹಾನ್ ಪುರುಷ ಗಂಗೆಯನ್ನು ಧರೆಗಿಳಿಸಿದಂತಹ ಭಗೀರಥ. ಭೂಮಂಡಲದಲ್ಲಿ ಇರುವಂತಹ ಎಲ್ಲಾ ಜೀವಿಗಳಿಗೆ ನೀರು ಉಣಿಸಿದಂತಹ ಮಹಾನ್ ಪುರುಷ.. ಭಗೀರಥ ಜಯಂತೋತ್ಸವದ ಅಂಗವಾಗಿ ” ಭಗೀರಥ ಕಪ್ ” ಶಿವಮೊಗ್ಗದ ಎನ್ ಇ ಎಸ್ ಮೈದಾನದಲ್ಲಿ ಮೆ.9 ರಿಂದ 10ರವರೆಗೆ ಆಯೋಜಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ,
ಪರಮಪೂಜ್ಯ ಶ್ರೀ ಪುರುಷೋತ್ತಮ ಪುರಿ ಮಹಾಸ್ವಾಮಿಗಳ ಆಶೀರ್ವಾದ ಅಡಿಯಲಿ 4ನೇ ವರ್ಷದ ಅದ್ದೂರಿ ಭಗೀರಥ ಕಪ್ 2 ದಿನಗಳ ಕಾಲ ನಡೆಯಲಿದ್ದು ಶಿವಮೊಗ್ಗ ಜಿಲ್ಲೆಗಳಿಂದ 13 ತಂಡಗಳು ಆಗಮಿಸಲಿದ್ದು ನಾಳೆ ಬೆಳಗ್ಗೆ 7:30ಕ್ಕೆ ಪ್ರಾರಂಭವಾಗಲಿದೆ. ಸಮಾಜದ ಜಿಲ್ಲಾಧ್ಯಕ್ಷರು ಚಾಲನೆ ನೀಡಲಿದ್ದಾರೆ.. ಜೊತೆಗೆ ಉಪ್ಪಾರ ನಿಗಮ ಅಧ್ಯಕ್ಷರು, ಜನ ಪ್ರತಿನಿಧಿಗಳು, ಮಾಜಿ ಮಹಾಪೌರರು, ಕಾರ್ಪೊರೇಟರ್, ಸಮಾಜದ ಸರ್ಕಾರಿ ನೌಕರರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷರುಗಳು, ಪದಾಧಿಕಾರಿಗಳು ಶಿವಮೊಗ್ಗ ಜಿಲ್ಲೆಯಲ್ಲಿರುವಂತಹ ಸಮಸ್ತರಿಗೆ ಆಹ್ವಾನ ನೀಡಲಾಗಿದೆ,
ಎಲ್ಲರೂ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಈ ಮೂಲಕ ಸ್ಪೋರ್ಟ್ಸ ಅಕಾಡೆಮಿಯ ಅಧ್ಯಕ್ಷರಾದ ಮುರಳಿ ಹೆಚ್ ಸಣ್ಣಕ್ಕಿರವರು ತಿಳಿಸಿದ್ದಾರೆ,

