Monday, August 3, 2026
Homeಸೂರ್ಯಗಗನI "ರಾಷ್ಟ್ರೀಯ ಯುನೆಸ್ಕೋ ವರದಿ, 1600 ಪತ್ರಕರ್ತರ ಹತ್ಯೆ I ರಾಜ್ಯದಲ್ಲಿ ಸ್ಥಳೀಯ ಪತ್ರಿಕೆ, ಪತ್ರಕರ್ತರ...

I “ರಾಷ್ಟ್ರೀಯ ಯುನೆಸ್ಕೋ ವರದಿ, 1600 ಪತ್ರಕರ್ತರ ಹತ್ಯೆ I ರಾಜ್ಯದಲ್ಲಿ ಸ್ಥಳೀಯ ಪತ್ರಿಕೆ, ಪತ್ರಕರ್ತರ ಮೇಲಿನ ಧಮನಕಾರಿ ನೀತಿ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I “ರಾಷ್ಟ್ರೀಯ ಯುನೆಸ್ಕೋ ವರದಿ, 1600 ಪತ್ರಕರ್ತರ ಹತ್ಯೆ I ರಾಜ್ಯದಲ್ಲಿ ಸ್ಥಳೀಯ ಪತ್ರಿಕೆ, ಪತ್ರಕರ್ತರ ಮೇಲಿನ ಧಮನಕಾರಿ ನೀತಿ I

ಹೀಗೊಂದು ಸುದ್ದಿ ಮಾಡುವ ಪತ್ರಕರ್ತರು ಸುದ್ದಿಯಾಗಿ ಸಮಾಧಿಯಾಗುವ ಅತೀ ಹೆಚ್ಚು ಪ್ರಕರಣಗಳು ರಾರಾಜಿಸುತ್ತಿದ್ದರು, ಪತ್ರಿಕಾ ಸಂಘಟನೆಗಳು ಆಯಾ ಸರ್ಕಾರಗಳ ಪ್ರತಿನಿಧಿಗಳನ್ನು ಸನ್ಮಾನಿಸಿ, ಸಂವಾದಿಸುವ ಹೈ ಪ್ರೋಪೈಲ್ ರಾಜಕಾರಣ ಮಾಡುತ್ತಿರುವುದು ದುರಂತದ ಪರಮಾವಧಿಯಾಗಿದೆ,

ಇನ್ನೂ ಪತ್ರಕರ್ತರು, ಪತ್ರಿಕೆಗಳ ಬದುಕುಗಳನ್ನು ಟಾರ್ಗೆಟ್ ಮಾಡಿಕೊಂಡವರಿಂದಲೇ “ಡಿಜಿಟಲ್ ಪೋಸ್ಟರ್” ನೋಡಿ ಒಮ್ಮೆಲೆ ಮುಜುಗರ ಆಗುತ್ತದೆ, ಅಕ್ಷರಗಳ ದೀವಿಗೆಗಳು ಬೆಳಕು ಬಿತ್ತುತ್ತದೆ, ಆದರೆ ಬೆಳಕು ಮಾತ್ರ ಎಂದು ದೀವಿಗೆಯ ಉರಿ ಬೆಳಕು ಹಿಡಿಯಲು ಯತ್ನಿಸಿದರೆ ಅದು ಸುಡುತ್ತದೆ, ದಾಳಿ ಮಾಡಿದೊಡೆ ಅದರ ಕಿಡಿ ಸಿಡಿದು ನೂರಾರು ಕಡೆ ಅದರ ಕಾವು ಕಾಪಿಟ್ಟು ಗಾಳಿಯ ಸಾಂಗತ್ಯದೊಂದಿಗೆ ಕಾಡ್ಗಿಚ್ವಿನಂತೆ ಗುರಿ ಮಾಡಿದವರನ್ನು ಸುಡುತ್ತದೆ, ಇದು ಬಹುಷ್ಯಃ ಅಕ್ಷರ ದೀವಿಗೆಯ ಹಿಡಿದವನ ಅಭಿವ್ಯಕ್ತಿಯ ಸಾಮರ್ಥ್ಯ, ಸ್ವಾತಂತ್ರ್ಯ, ಗೊತ್ತು ಮಾಡಿಕೊಳ್ಳದ ಅಧಮತೆ ಪರಮಾಲೋಚನೆಯ ಅರಿವು ಇಲ್ಲದವರು ಎಂದಿಲ್ಲಿ ಲಗತ್ತಿಸುತ್ತೇನೆ,

ಇಂತಹ ಬಿಡಾಡಿ ಮನಸ್ಥಿತಿಗಳಿಟ್ಟುಕೊಂಡು ಪತ್ರಕರ್ತರು ಹಾಗೂ ಪತ್ರಿಕೆಗಳಿಗೆ ಯಾವ ಕೊಳೆತ ಕೂಪದ ಅಂಡು ಕಟ್ಟಿಕೊಂಡು “ರಾಷ್ಟ್ರೀಯ ಪತ್ರಿಕಾ’ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಎಂದು ಡಿಜಿಟಲ್ ಪೋಸ್ಟರ್ ನ್ನು ಅತಿರಂಜಿತವಾಗಿ ಚಿತ್ರಿಸಿದ್ದಲ್ಲದೆ ಅಲ್ಲೊಂದು ಪೋಟೋ ಹುದ್ದೆಗಳ ಕೆಟಗರಿಗಳ ಹಾಕಿಕೊಂಡು ಸಾಮಾಜಿಕ ಜಾಲತಾಣದ ಗೋಡೆಗಳಲ್ಲಿ ಅಂಟಿಸಿ ಬಿಡುವ ಮುನ್ನದಿ ತಾವೇ ಅವಲೋಕಿಸಿ ಪತ್ರಿಕಾ ಬದುಕುಗಳ ಕುರಿತು ತಾವೇನು ನಿಲುವು ತಳೆದಿದ್ದೀರಿ..? ಹೀಗಾಗಿ ನೋಡುಗರಿಗೆ, ಓದುಗರಿಗೆ ತಿಳಿಸುವ ಇಂತಹ ಪೋಸ್ಟರ್ ಗಳನ್ನು ಹಾಕಿಕೊಂಡು ಸಾಂವಿಧಾನಿಕ ಅಭಿವ್ಯಕ್ತಿಯನ್ನು ಅಪಹಾಸ್ಯಗೊಳಿಸದಿರಿ ಎನ್ನುವುದು ಸಮಂಜಸ,

ಟೀಕೆಗಳು ಹರಿತವಾಗಿರುತ್ತದೆ ಎನ್ನುವ ಕಾರಣಕ್ಕಾಗಿ ಪತ್ರರ್ತರ ಧಮನಕಾರಿ ನೀತಿ ತಳೆವ ಧ್ವಿಮುಖಿ ನೀತಿಯಿಂದಲೇ ರಾಷ್ಟ್ರೀಯ ಯುನೆಸ್ಕೋ ಅಂಕಿ-ಅಂಶಗಳ ಪ್ರಕಾರ 1600 ಪತ್ರಕರ್ತರನ್ನು ಹತ್ಯೆ ಮಾಡಲಾಗಿದೆ, ಸಾವಿರಾರು ಬದುಕುಗಳಿಗೆ ಸುಡು ಬೆಂಕಿ ಹಚ್ಚಲಾಗಿದೆ, ಇಂತಹ ಕಟು ಸತ್ಯ ವಾಸ್ತವವನ್ನು ಗೊತ್ತು ಮಾಡಿಕೊಂಡು ಪತ್ರಿಕಾ ಜಗತ್ತನ್ನು ಜಾಗೃತಗೊಳಿಸ ಬೇಕಾಗಿರುವುದು, ಸಂಘಟಿತವಾಗಿ ಬಲವರ್ಧಿತವಾಗಿ ಸಬೇಕಾಗಿರುವ ಕರ್ತವ್ಯ ಯಾರದ್ದಾಗಿದೆ..?! ಎನ್ನುವುದು ಈ ಹೊತ್ತಿನ ಮಿಲಿಯನ್ ಪ್ರಶ್ನಾರ್ಹ ಆಗಿದೆ,

ಇದು ಮುಂದುವರೆದಂತೆ ರಾಜ್ಯ ಸರ್ಕಾರದ ಪ್ರತಿನಿಧಿಗಳನ್ನು ಸಂವಾದಿಸುವ ಹೈ ಪ್ರೋಪೈಲ್ ಮಾನಸೀಕತೆಗಳನ್ನು, ಹಾಗೂ ಇದನ್ನು ತೊಳೆದು ಹಾಕಬೇಕಾದ ಸಾಂದರ್ಭಿಕತೆಗಳನ್ನು ತಳೆಯದೇ ಅವರನ್ನೇ ಸನ್ಮಾನಿಸಿ, ಗುಣಗಾನಿಸುವ ದುರಂತದ ಮಾತ್ರದಿಂದಲೇ ಇಂದು ಸ್ಥಳೀಯ ಪತ್ರಿಕೆಗಳು ಹಾಗೂ ಪತ್ರಕರ್ತರ ಮೇಲೆ ನಿರಂತರವಾದ ಅಸಾಂವಿಧಾನಿಕ ದಾಳಿ, ಶಾಶ್ವತಕರಿಸಿಕೊಂಡಿದೆ, ಹೀಗಿದ್ದರೂ ಸ್ಥಳೀಯ ಪತ್ರಕರ್ತರು ಆಯಾ ಕೆಲ ಜನಪ್ರತಿನಿಧಿಗಳನ್ನು ಸಂವಾದಿಸಬೇಕು, ಗುಣಗಾನಿಸಬೇಕು, ಅವರೊಂದಿಗೆ ಚಹಾ ಕೂಟ, ಬ್ಲಾಕ್ ಪಾನಿಯ ಮೇಜಿನಲ್ಲಿ ಹೊಂದಾಣಿಕೆಯಾಗಬೇಕು, ಥೇಟ್ ರಾಜಕಾರಣದ ರೀತಿಯೇ ವರ್ತಿಸುವ ಅವಕಾಶವಾದಿ ಸಂಘಟಿತ ಪತ್ರಕರ್ತರು ಬದಲಾಗುವ ತನಕ ಯಾವುದೇ ಕಾರಣಕ್ಕೂ ಪತ್ರಿಕಾ ನ್ಯಾಯ ಮರಿಚಿಕೆಯಾಗಿಯೇ ಉಳಿಯುತ್ತದೆ, ಏಕೆಂದರೆ ಅವಕಾಶವಾದಿಗಳು ಬದಲಾಗುವುದಿಲ್ಲ, ಪತ್ರಕರ್ತರು ಪ್ರತ್ಯೇಕವಾಗಿ ಪ್ರಶ್ನಿಸುವುದಿಲ್ಲ ಈ ಕಾರಣಕ್ಕಾಗಿ ಈ ಹೊತ್ತಿನಲಿ ಪತ್ರಕರ್ತರು ಹಾಗೂ ಪತ್ರಿಕೆಗಳ ಮೇಲಿನ ದಾಳಿ ಖಾಯಂ ಆಗಿ ಪ್ರಕರಣಗಳು ಉಲ್ಬಣಿಸಿವೆ‌

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I