I ಮಕ್ಕಳಿಗೆ ಹಣ್ಣುಗಳ ಸೇವನೆ ಬಗ್ಗೆ ಅರಿವು ಮೂಡಿಸಿ I ಉದ್ಯಮಿ ಉದಯ್ ಕಡಂಬ I
ಶಿವಮೊಗ್ಗ: ಮಕ್ಕಳಿಗೆ ಹಣ್ಣುಗಳ ಸೇವನೆಯ ಮಹತ್ವವನ್ನು ಪರಿಚಯಿಸಬೇಕು ಎಂದು ಉದ್ಯಮಿ ಉದಯ್ ಕಡಂಬ ಹೇಳಿದರು. ಜೆಸಿಐ ಶಿವಮೊಗ್ಗ ವಿವೇಕ್ ಮತ್ತು ಭಾವಸಾರ ವಿಷನ್ ಇಂಡಿಯಾ ಸಹಯೋಗದಲ್ಲಿ ಶುಭಂ ಹೋಟೆಲ್ನಲ್ಲಿ ಆಯೋಜಿಸಿದ್ದ ಮಾವಿನ ವೈವಿಧ್ಯಮಯ ಹಣ್ಣಿನ ಖಾದ್ಯಗಳ ಸ್ಪರ್ಧೆಯಲ್ಲಿ ಮಾತನಾಡಿದರು.
ಬಾಲ್ಯದಲ್ಲಿ ಮಾವಿನ ಹಣ್ಣನ್ನು ಅತ್ಯಂತ ಸಡಗರ ಹಾಗೂ ಖುಷಿಯಿಂದ ಸವಿಯುತ್ತಿದ್ದೆವು. ಆದರೆ ಇಂದಿನ ತಲೆಮಾರಿನ ಮಕ್ಕಳಿಗೆ ಹಣ್ಣುಗಳ ನೈಸರ್ಗಿಕ ಸವಿಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ. ಕೇವಲ ಮಾವು ಮಾತ್ರವಲ್ಲದೆ, ಆಯಾ ಸೀಸನ್ನಲ್ಲಿ ಸಿಗುವ ಎಲ್ಲಾ ಸ್ಥಳೀಯ ಹಣ್ಣುಗಳ ವಿಶೇಷತೆಯನ್ನು ಪೋಷಕರು ಮಕ್ಕಳಿಗೆ ತಿಳಿಸಬೇಕು ಎಂದರು.
ಮಾವಿನ ಹಣ್ಣಿನಿಂದ ತಯಾರಿಸಿದ ವೈವಿಧ್ಯಮಯ ಖಾದ್ಯಗಳು ಹಾಗೂ ಡೆಸರ್ಟ್ಗಳ ಸ್ಪರ್ಧೆಗೆ ರಾಯಲ್ ಆರ್ಕಿಡ್ನ ಮುಖ್ಯ ಬಾಣಸಿಗ ಕೆ.ವಿ.ಪ್ರಭು ತೀರ್ಪುಗಾರರಾಗಿ ಆಗಮಿಸಿದ್ದರು.
ಪ್ರಥಮ ಬಹುಮಾನ: ಅನಿಶಾ ಸತೀಶ್, ದ್ವಿತೀಯ ಬಹುಮಾನ: ಸ್ಮಿತಾ ಸಾತ್ವಿಕ್, ತೃತೀಯ ಬಹುಮಾನ: ಶಿಲ್ಪ ಸಾಕ್ರೆ, ನಾಲ್ಕು ಮತ್ತು ಐದನೇ ಬಹುಮಾನ: ನಿವೇದಿತಾ ನಟರಾಜ್, ಸ್ವಪ್ನ ಹರೀಶ್ ಪಡೆದುಕೊಂಡರು.
ಜೆಸಿಐ ಶಿವಮೊಗ್ಗ ವಿವೇಕ್ ಸಂಸ್ಥೆಯ 2026ರ ಸಾಲಿನ ಅಧ್ಯಕ್ಷೆ ವಿಜಯಲಕ್ಷ್ಮೀ ಉದಯ್ ಕಡಂಬ, ಉದ್ಯಮಿ ಸೆಂಥಿಲ್ ವೇಲನ್, ಭಾವಸಾರ ವಿಷನ್ ಇಂಡಿಯಾ ಅಧ್ಯಕ್ಷ ಡಿ.ಪಿ. ಕಮಲಾಕರ್, ಕಾರ್ಯದರ್ಶಿ ಚೇತನ್, ಜೆಸಿಐ ಶಿವಮೊಗ್ಗ ವಿವೇಕ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಾಲರಾಜ್, ಪೂರ್ವಾಧ್ಯಕ್ಷ ಚಂದ್ರಹಾಸ್ ಹಾಗೂ ಕಾರ್ಯದರ್ಶಿ ಶ್ವೇತಾ ಸಚಿನ್ ಉಪಸ್ಥಿತರಿದ್ದರು.

