I ಭದ್ರಾತೀರದಲ್ಲಿ ಹಾಡುಹಗಲೇ ರೌಡಿಶೀಟರ್ ವಿಶ್ವ ಯಾನೆ ಮುದ್ದೆ ಮೇಲೆ ಅಟ್ಯಾಕ್ I ಮಾರಣಾಂತಿಕ ಹಲ್ಲೆ I
ಭದ್ರಾವತಿ : ಭದ್ರಾತೀರದಲ್ಲಿ ನಿಲ್ಲದ ದುಂಡಾವರ್ತನೆಗಳು, ಅಕ್ರಮ ಚಟುವಟಿಕೆಗಳು, ಇಂದು ಕೂಡ ಬೆಳಿಗ್ಗೆ ಎದ್ದು ಜಳಕಾದಿಗಳ ಮುಗಿಸಿ ನಾಗತಿಬೆಳಗಲಿನ ನಂಜುಂಡೇಶ್ವರನ ದರ್ಶನ ಮಾಡಿ ಬರುತ್ತಿದ್ದ ಮುದ್ದೆ, ಯಾಕೋ ದೇವಳಕ್ಕೆ ಹೋಗದೆ ಸೀಗೆಬಾಗಿಯ ಟೀ ಸೆಂಟರ್ ನಲ್ಲಿ ನಿಂತು ಚಹಾ ಕುಡಿದು ಮೊಬೈಲ್ ನಲ್ಲಿ ಮಾತಾಡುತ್ತಿದ್ದವನಿಗೆ ಜವರಾಯನ ನೆರಳು ಸುಳಿದು ಸರಿಯುತ್ತದೆ, ಮಾರಣಾಂತಿಕ ಹಲ್ಲೆ ನಡೆಯುತ್ತದೆ ಎನ್ನುವ ಸಣ್ಣದೊಂದು ಸುಳಿವು ಕೂಡ ಇರದೆ ಬುಲೆಟ್ ನಲ್ಲಿ ಸದ್ದು ಮಾಡಿ ಬಂದವ ಇಂದು ಹಲ್ಲೆಗೊಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ,
ಇತ್ತಕಡೆ ತನ್ನ ಶಿಷ್ಯೋತ್ತಮ ಬಲಗೈ ಬಂಟ ವಿಶ್ವ ಯಾನೇ ಮುದ್ದೆ ಮೇಲೆ ಅಟ್ಯಾಕ್ ಆಗಿ ಹ್ಯಾಂಡ್ ಲ್ಯಾಪ್ಸ್ ಆಗುತ್ತದೆ ಎನ್ನುವ ತುಸು ಚಿಂತೆಯಲ್ಲಿದೇ ಕೂತಿದ್ದ ಬಸವೇಶನಿಗೆ ಅಚಾನಕ್ ರೊಚ್ಚಿಗೇಳಿಸುವಂತೆ ಮಾಡಿದೆ, ಮುದ್ದೆ ಕಾಂಗ್ರೆಸ್ ಲೀಡರ್ ಎಂದಿದ್ದಾನೆ, ಅಲ್ಲದೆ ಆತನ ಏಳಿಗೆ ಸಹಿಸದೆ ಜೆಡಿಎಸ್ ಕಡೆಯವರು ಈ ಹಲ್ಲೆಗೆ ಕಾರಣರು ಎಂದು ಆಕ್ರೋಶವ್ಯಕ್ತಪಡಿಸಿದ್ದಾನೆ,
ಭದ್ರಾತೀರದ ಈ ಅಕ್ರಮ ಚಟುವಟಿಕೆಗಳು ಇಂದು ಕ್ತೈಂ ಚಟುವಟಿಕೆಗಳನ್ನು ಮರುಕಳಿಸುತ್ತಿದೆ, ಈ ಹೊತ್ತಿನ ಘಟನೆಗೆ ಸಿಐಡಿ ತನಿಖೆ ನಡೆಸಲು ತಿಳಿಸುತ್ತೇನೆ ಎಂದೇಳುವ ಬಸವೇಶ ನಿಜಕ್ಕೂ ಶಾಸಕನಾ..? ಅಥವಾ ಸರ್ಕಾರನಾ…? ಎನ್ನುವುದು ಪ್ರಶ್ನಾರ್ಥಕವಾದರು, ಇಲ್ಲಿ ದಶಕಗಳಿಂದ ನಡೆಯುತ್ತಿರುವ ರಿಪಬ್ಲಿಕ್ ಮೂಮ್ಹೆಂಟ್ ಗಳ ತನಿಖೆಗೆ ಹಾಗೂ ಕಡಿವಾಣಕ್ಕೆ ಭಾರತದ ರಕ್ಷಣಾ ತಂಡವೇ ಬರಬೇಕಾಗಿದೆ ಒಂದೆರೆಡು ಎನ್ಕೌಂಟರ್, ವೈಟ್ ಕಾಲರ್ ಗೋಡೆಗಳನ್ನು ಕೆಡವಿ ಜೈಲಿಗಟ್ಟಬೇಕಾದ ಜರೂರತ್ತಿದೆ,
ಇನ್ನೂ ಸುಳಿವಿಲ್ಲದೆ ಚಹಾ ಕುಡಿಯುತ್ತಿದ್ದ ಮುದ್ದೆ ರಕ್ತದ ಮಡುವಿನಲ್ಲಿ ಬಿದ್ದಿದ್ದವನನ್ನು ಆಟೋದಲ್ಲಿ ಭದ್ರಾವತಿ ತಾಲೂಕು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಕರಣ ದಾಖಲಿಸಿಕೊಂಡ ಸ್ಥಳೀಯ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ, ಹಾಗೂ ಹಲ್ಲೆ ಮಾಡಿದವರ ಬಂಧನಕ್ಕೆ ಜಾಲ ಬೀಸಿದ್ದಾರೆ.


