Sunday, August 2, 2026
Homeಸೂರ್ಯಗಗನI ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ...

I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I

I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I

ಶಿವಮೊಗ್ಗ : ನಗರದ ಗೋಪಾಳದ ಆದಿ ರಂಗಮಾಥ ಸ್ವಾಮಿ ದೇವಳಕ್ಕೆ ಸೇರಿದ ಸರ್ವೇ ನಂಬರ್ 49/1B ರಲ್ಲಿನ 5 ಎಕರೆ 13 ಗುಂಟೆ ಖರಾಬು ಭೂ ಪ್ರದೇಶದ ಮೇಲೆ ನಕಲಿ ದಾಖಲೆಗಳ ಸೃಷ್ಟಿಸಿಕೊಂಡು ಲ್ಯಾಂಡ್ ಲಿಟಿಗೇಶನ್ ಪೋರ್ಜರಿಸ್ಟ್ ಜಾಲ ದಾಂಗುಡಿ ಇಕ್ಕಿರುವುದು, ಇಲ್ಲಿನ ಸ್ಥಳೀಯ ವಾಸಿಗಳ ಕೆಂಗಣ್ಣಿಗೆ ಗುರಿಯಾಗಿದೆ,

ಇದೊಂದು ವ್ಯವಸ್ಥಿತ ಜಾಲವಾಗಿದ್ದು ಗೋಪಾಳದ ಸುತ್ತ-ಮುತ್ತಲಿನಲಿ ಸುಮಾರು ನೂರು ಕೋಟಿ ಮೌಲ್ಯದ ಜಾಗವನ್ನು ಅಕ್ರಮವಾಗಿ ಬೇಲಿ ಸುತ್ತಿ ಕಬ್ಜಾ ಮಾಡಿಕೊಂಡಿರುವುದು, ಭೂ ಕಂದಾಯ ನಿಯಮಗಳನ್ನು ಹಾಗೂ ಜಿಲ್ಲಾಡಳಿತವನ್ನು ಅಣಕಿಸುವಂತೆ ಮಾಡಿದೆ, ಸುಳ್ಳು ನಕ್ಷೆಗಳು, ವರದಿಗಳು, ಇನ್ನೂ ಕೆಲವು ದಾಖಲೆಗಳನ್ನು “ಕೊರಲ್ ಡ್ರಾ” “ಪೋಟೋ ಶಾಪ್ ” ಎನ್ನುವ ಕಂಪ್ಯೂಟರ್ ಸಾಪ್ಟ್ ವೇರ್ ನಲ್ಲಿ ವಾರಸುದಾರಿಕೆ ಬದಲಾವಣೆ ಮಾಡಿಕೊಂಡು ಇದನ್ನೇ ಶಾಮೀಲಾಗಿರುವ ಅಧಿಕಾರಿಗಳ ಮೂಲಕ ದಾಖಲು ಮಾಡುವ ಪೋರ್ಜರಿಸ್ಟ್ ಗಳು ದಾಂಗುಡಿ ಹೆಚ್ಚಿದೆ,

ಅತೀ ಸೂಕ್ಷ್ಮ ಸಂಗತಿಯಾಗಿರುವ ಈ ಪ್ರಕರಣದಲ್ಲಿ ಲ್ಯಾಂಡ್ ಲಿಟಿಗೇಟರ್ ಹಾಗೂ ರೌಡಿ ಎಲಿಮೆಂಟರಿಗಳ ನಡುವೆ ಸ್ಥಳೀಯ ಯುವಕರ ಮಾರಾಮಾರಿ ಆಗುವ ಎಲ್ಲಾ ಲಕ್ಷಣಗಳಿದೆ, ಹೀಗಾಗಿ ಈ ವ್ಯಾಪ್ತಿಯ ಸರಹದ್ದಿನ ತುಂಗಾನಗರ ಪೊಲೀಸ್ ಠಾಣೆಯ ಟಪ್ ಕಾಪ್ ಪೊಲೀಸ್ ಅಧಿಕಾರಿ ಗುರುರಾಜ್ ಕರ್ಕಿ ಅವರು ಹಾಗೂ ಪೊಲೀಸ್ ತಂಡ ಪೆಟ್ರೋಲಿಂಗ್ ಮಾಡಿ ಈಗಾಗಲೇ ಎಂಟ್ರಿ ಕೊಟ್ಟಿರುವ ನಕಲಿ ವಾರಸುದಾರರಾದ ಪೋರ್ಜರಿಸ್ಟ್ ಗಳನ್ನು ಹಾಗೂ ಬೇಲಿ ಸುತ್ತುವ ಗುತ್ತಿಗೆ ಗ್ಯಾಂಗುಗಳನ್ನು ಎಡಮುರಿ ಕಟ್ಟಿದರೆ ಮುಂದಾಗುವ ಅನಾಹುತ ತಪ್ಪಿಸಬಹುದಾಗಿದೆ, ಹಾಗೂ ಆದಿ ರಂಗನಾಥ ಸ್ವಾಮಿ ದೇವಳದ ಜಾಗ ಸುರಕ್ಷಿತಗೊಳಿಸಿದಂತಾಗುತ್ತದೆ ಎನ್ನುವುದು ಗೋಪಾಳದ ಜನತೆಯ ಅಭಿಪ್ರಾಯವಾಗಿದೆ,

ಈಗಾಗಲೇ ಪೋರ್ಜರಿ ದಾಖಲೆಗಳ ಮೂಲಕ ಹಂಗಾಮ ಮಡಗಿರುವ ಎರಡು ಅನಾಹುತಕಾರಿ ಜಾಲದ ಮೇಲೆ ಕಾನೂನು ರಿತ್ಯಾ ಕ್ರಮ ಕೈಗೊಂಡು, ದೇವಳದ ಜಾಗ ದೇವಳಕ್ಕೆ ಉಳಿಸುವ ಜರೂರಿ ಕ್ರಮಗಳ ಹೊಣೆಗಾರಿಕೆ ಜಿಲ್ಲಾಡಳಿತ ಮೇಲಿದೆ, ಇದಾಗದಿದ್ದರೆ ದೇವಳದ ಭಕ್ತರು, ಇಲ್ಲಿನ ಸ್ಥಳಿಯರು ಸೇರಿ ಪೋರ್ಜರಿಸ್ಟ್ ಗುಂಪಿನ ಮೇಲೆ ಮುಗಿ ಬೀಳುವುದು ಹಾಗೂ ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆಗೆ ದಕ್ಕೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲವಾಗಿದೆ, ಈಗಾಗಲೇ ಹಿಂದೂ ಪರ ಸಂಘಟನೆಗಳು ಮೊದಲ ಬೈಠಕ್ ನಡೆಸಿದೆ ಎನ್ನುವುದು ತಿಳಿದು ಬಂದಿದೆ,

ನಗರದಲ್ಲಿ ಬೇಲಿ ಸುತ್ತುವ ಗುತ್ತಿಗೆ ಇಟ್ಟುಕೊಂಡಿರುವ ಬುಲೆಟ್ ಯತೀಶ ಹಾಗೂ ಜೆಪಿ ನಗರದ ಕಣ್ಣನ ಗ್ಯಾಂಗ್ ಈ ದೇವಳದ ಮೂಲ ಖರಾಬು ಜಾಗ ಸುಮಾರು ಈ ಹೊತ್ತಿನ ಐವತ್ತು ಕೋಟಿ ಮೌಲ್ಯದ 5ಎಕರೆ 13 ಗುಂಟೆ ಜಾಗದ ಭೂ ಪ್ರದೇಶದ ಕಬ್ಜಾಕ್ಕೆ ಬೇಲಿ ಸುತ್ತಲು, ಸ್ಥಳೀಯರನ್ನು ಕೂಡ ಬೆದರಿಸುವ ಹಂತಕ್ಕೆ ಹೋಗಿರುವ ಘಟನೆ ಜರುಗುತ್ತಿದೆ, ಇನ್ನಾದರೂ ಜಿಲ್ಲಾಧಿಕಾರಿಗಳು, ಜಿಲ್ಲಾರಕ್ಷಣಾಧಿಕಾರಿಗಳು ಗಮನಹರಿಸಲಿ ಹಾಗೂ ಪೋರ್ಜರಿಸ್ಟ್ ಗಳ ಮೇಲೆ ಕಾನೂನು ರಿತ್ಯಾ ಕ್ರಮ ಜರುಗಿಸಲಿ ಎನ್ನುವುದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I