I ಆ.13 ರಂದು I ಎಂ ಶ್ರೀಕಾಂತ್ ಅಣ್ಣಾ ಅಭಿಮಾನಿ ಬಳಗದಿಂದ I ನಾಗರೀಕರಿಗಾಗಿ ಉಚಿತ ಕಿಡ್ನಿ ಹಾಗೂ ಮೂತ್ರಕೋಶ ತಪಾಸಣಾ ಶಿಬಿರ I
ಶಿವಮೊಗ್ಗ : ನಗರದ ದುರ್ಗಿಗುಡಿಯ ತೃಪ್ತಿ ಹೆಲ್ತ್ ಕೇರ್ ನಲ್ಲಿ ಆ.13ರಂದು “ಎಂ ಶ್ರೀಕಾಂತ್ ಅಣ್ಣಾ ಅಭಿಮಾನಿ ಬಳಗ ವತಿಯಿಂದ ನಾಗರೀಕರಿಗಾಗಿ ನಗರದ ಸಾರ್ವಜನಿಕರಿಗಾಗಿ
ಉಚಿತ ಕಿಡ್ನಿ ಮತ್ತು ಮೂತ್ರಕೋಶ ರೋಗಗಳ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ,
ಕಿಡ್ನಿ ಮತ್ತು ಮೂತ್ರಕೋಶ ತಜ್ಞರಾದ ಎಸ್. ಚಂದ್ರಶೇಖರ್
ಅವರು ತಪಾಸಣೆ ನಡೆಸಲಿದ್ದು ಆ.13ರ ನಾಳೆ ಬೆಳಿಗ್ಗೆ 9ರಿಂದ ಸಂಜೆ 6ಗಂಟೆಯವರೆಗೆ ಜರುಗಲಿದೆ, ಈ ಶಿಬಿರದಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಸಿ-ಆರ್ಮ್ ಫ್ಲೋರೋಸ್ಕೋಪ್,
ಕಿಡ್ನಿ ಸ್ಟೋನ್ ಸ್ಕ್ಯಾನಿಂಗ್, ECG ಲ್ಯಾಬೋರೇಟರಿ ಸಹಿತ, ಮಧುಮೇಹ ಪರೀಕ್ಷೆ,,ರಕ್ತದೊತ್ತಡ ಪರೀಕ್ಷೆ ಇದ್ದು ನಾಗರೀಕರು ತೃಪ್ತಿ ಹೆಲ್ತ್ ಕೇರ್ ನಲ್ಲಿ ಹೆಸರು ನೊಂದಾಯಿಸುವಂತೆ ಶಿಬಿರದ ಆಯೋಜಕರು ತಿಳಿಸಿದ್ದಾರೆ,
ಈ ಶಿಬಿರದ ಉದ್ಘಾಟನೆಯನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ.ಶ್ರೀಕಾಂತ್ ಅವರು ನೆರವೇರಿಸಲಿದ್ದು ಈ ಸಂದರ್ಭದಲ್ಲಿ ರಘು ಗೌಡ ಉಪಸ್ಥಿತರಿರುತ್ತಾರೆ ಎಂದು ಈ ಮೂಲಕ ವಿವರಿಸಿದ್ದಾರೆ,