I ವಾಲ್ಮೀಕಿ ನಾಯಕ I ಯುವಪಡೆಯಿಂದ I ಗುರಿಪೂರ್ಣಿಮೆ I
ಶಿವಮೊಗ್ಗ: ರಾಜ್ಯ ವಾಲ್ಮೀಕಿ ನಾಯಕ ಯುವಪಡೆ ಜಿಲ್ಲಾ ಘಟಕದ ವತಿಯಿಂದ ವಾಲ್ಮೀಕಿ ಸಮಾಜದಿಂದ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಶೇ ೮೫ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಂಘದ ಕಚೇರಿಯಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಗುರಿಪೂರ್ಣಿಮೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಾಲ್ಮೀಕಿ ನಾಯಕರ ಯುವ ಪಡೆ ಜಿಲ್ಲಾ ಘಟಕ ಅಧ್ಯಕ್ಷ ಆರ್. ಹರೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೆಗ್ಗಾನ್ ಆಸ್ಪತ್ರೆಯ ಹೃದಯ ರೋಗ ತಜ್ಞ ಡಾ. ಮಹೇಶ್ ಮೂರ್ತಿ, ವಾಸನ್ ಐ ಕೇರ್ ನೇತ್ರ ತಜ್ಞ ವೈದ್ಯ ಆರ್. ಪ್ರಸನ್ನ ಕುಮಾರ್, ವಾಲ್ಮೀಕಿ ನಾಯಕರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಹೆಚ್.ಎಂ. ಶೇಖರಪ್ಪ, ಪ್ರಮುಖರಾದ ಡಾ. ಅಣ್ಣಪ್ಪ ಎಂ. ಗಸ್ತಿ, ಆರ್.ರಂಗಪ್ಪ, ಡಿ.ಬಿ.ಹಳ್ಳಿ ಬಸವರಾಜಪ್ಪ, ಡಾ.ಜಯರಾಂ, ಜಿ.ಗುಡ್ಡಪ್ಪ, ರಾಮಣ್ಣ ವಿದ್ಯಾನಗರ, ಗಿರೀಶ, ಶಿವಕುಮಾರ್ ಭದ್ರಾವತಿ, ಮಾಸ್ಟರ್ ನರಸಿಂಹಮೂರ್ತಿ, ಮೇಘರಾಜ, ಮೋಹನ್, ಅವಿನಾಶ್ ಸೇರಿದಂತೆ ಗಣ್ಯರು ಇದ್ದರು.

