Monday, August 3, 2026
Homeಸೂರ್ಯಗಗನI ರಾಜಣ್ಣ ರಾಜೀನಾಮೆ I ವಾಲ್ಮೀಕಿ ಸಮುದಾಯ ಖಂಡನೆ I ಅಧ್ಯಕ್ಷ ಆರ್.ಹರೀಶ್ I

I ರಾಜಣ್ಣ ರಾಜೀನಾಮೆ I ವಾಲ್ಮೀಕಿ ಸಮುದಾಯ ಖಂಡನೆ I ಅಧ್ಯಕ್ಷ ಆರ್.ಹರೀಶ್ I

I ರಾಜಣ್ಣ ರಾಜೀನಾಮೆ I ವಾಲ್ಮೀಕಿ ಸಮುದಾಯ ಖಂಡನೆ I ಅಧ್ಯಕ್ಷ ಆರ್.ಹರೀಶ್ I

ಶಿವಮೊಗ್ಗ: ವಾಲ್ಮೀಕಿ ಸಮುದಾಯದ ಹಿರಿಯ ಸಚಿವ ಕೆ.ಎಸ್, ರಾಜಣ್ಣನವರ ರಾಜೀನಾಮೆ ಪಡೆದಿರುವುದು ಸರಿಯಾದ ಕ್ರಮವಲ್ಲ ಎಂದು ರಾಜ್ಯ ವಾಲ್ಮೀಕಿ ನಾಯಕರ ಯುವಪಡೆ ಜಿಲ್ಲಾ ಘಟಕ ಅಧ್ಯಕ್ಷ ಆರ್.ಹರೀಶ್ ಹಾಗೂ ಪ್ರಧಾನ ಕಾರ್ಯದರ್ಶಿ ಜಿ.ಗುಡ್ಡಪ್ಪ ಖಂಡಿಸಿದ್ದಾರೆ.

ಈ ಹಿಂದಿನ ಸರ್ಕಾರದಲ್ಲೂ ಜಲಸಂಪನ್ಮೂಲ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ರಮೇಶ್ ಜಾರಕಿಹೊಳಿ, ಶಾಸಕರು ಮತ್ತು ಸಚಿವರು ಮತ್ತು ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನೇ ಬಳಸಿಕೊಂಡು ವಾಲ್ಮೀಕಿ ಸಮುದಾಯದವರಾದ ಶ್ರೀರಾಮುಲು ರವರನ್ನು ಸೋಲಿಸಿರುವುದು ಮತ್ತು ಇದೇ ಸರ್ಕಾರದ ಸಚಿವರಾದ ಬಿ. ನಾಗೇಂದ್ರ, ಯುವ ಸಬಲೀಕರಣ, ಕ್ರೀಡಾ ಮತ್ತು ಬುಡಕಟ್ಟು ಕಲ್ಯಾಣದ ಸಚಿವರಾಗಿದ್ದು, ಇವರನ್ನು ತೆಲಂಗಾಣದಲ್ಲಿ ನಡೆದ ಚುನಾವಣೆಗೆ ಇವರ ವ್ಯಾಪ್ತಿಗೆ ಬರುವ ಇಲಾಖೆಯ ಹಣವನ್ನು ಅಕ್ರಮವಾಗಿ ತೆಲಂಗಾಣದ ರಾಜ್ಯದ ಚುನಾವಣೆಗೆ ಬಳಸಿಕೊಂಡಿರುವುದು ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷರಾದ ಬಸವನಗೌಡ ದದ್ಗಲ್ ರವರ ವ್ಯಾಪ್ತಿಗೆ ಬರುವ ಮಂಡಳಿಯ ಹಣವನ್ನು ಕೂಡ ಆಕ್ರಮವಾಗಿ ಬಳಸಿಕೊಂಡು ಇವರನ್ನು ಕೂಡ ಅಧ್ಯಕ್ಷ ಸ್ಥಾನದಿಂದ ತಲೆದಂಡ ಮಾಡಲಾಯಿತು.

ಹೀಗೆ ಇನ್ನೂ ಅನೇಕ ವಾಲ್ಮೀಕಿ ಸಮುದಾಯದ ಪರ ಧ್ವನಿ ಎತ್ತುವ ನಾಯಕರುಗಳಾದ ನರಸಿಂಹ ನಾಯಕ ರಾಜುಗೌಡರು, ಮಾಜಿ ಸಚಿವರು, ಸುರಪುರ, ಮಾಜಿ ಶಾಸಕರು, ಸಚಿವರಾದ ಶಿವನಗೌಡ ನಾಯಕ ಹಾಗೂ ಮಾಜಿ ಶಾಸಕರು ಸುರೇಶ್ ಬಾಬು-ಕಂಪ್ಲಿ ಕ್ಷೇತ್ರ ಹಾಗೂ ಸಮಾಜದ ಯುವ ಮುಖಂಡರಾದ ಹೊದಿಗೆರೆ ರಮೇಶ್-ಚನ್ನಗಿರಿ ಕ್ಷೇತ್ರ, ಬಂಗಾರ ಹನುಮಂತು-ಸಂಡೂರು ವಿಧಾನಸಭಾ ಕ್ಷೇತ್ರ, ಇನ್ನು ಅನೇಕ ವಾಲ್ಮೀಕಿ ಸಮಾಜದ ನಾಯಕರುಗಳನ್ನು ವ್ಯವಸ್ಥಿತವಾಗಿ, ರಾಜಕೀಯವಾಗಿ ಮುಗಿಸುವ ಹುನ್ನಾರ ನಡೆಯುತ್ತಿದ್ದು, ಅನೇಕ ಕಾಣದ ಕೈಗಳು ನಿರಂತರವಾಗಿ ಷಡ್ಯಂತ್ರ ಮಾಡುತ್ತಿವೆ.  ಇದೇ ರೀತಿ ಮುಂದುವರಿದಲ್ಲಿ ವಾಲ್ಮೀಕಿ ನಾಯಕ ಸಮಾಜವು ರಾಜ್ಯದಲ್ಲಿ ಉಗ್ರ ಹೋರಾಟದ ಮುಖಾಂತರ ತಕ್ಕ ಸಮಯದಲ್ಲಿ ತಕ್ಕ ಉತ್ತರವನ್ನು ನೀಡುತ್ತದೆ ಎಂಬ ಎಚ್ಚರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I