I ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಪೈಶಾಚಿಕ ಕೃತ್ಯ ಖಂಡಿಸಿ ಪ್ರತಿಭಟನೆ I ಹಿಂದೂ ಸಂಘಟನೆಗಳಿಂದ ಮನವಿ I
ಶಿವಮೊಗ್ಗ :ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಿರಂತರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮಕ್ಕೆ ಒತ್ತಾಯಿಸಿ ಈ ದಿನ ಬಾಂಗ್ಲಾದೇಶದ ವ್ಯವಹಾರಗಳ ಮೇಲೆ ನಿಬಂಧ ಹಾಗೂ ಮತಾಂಧ ಗುಂಪುಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ.ಹಿಂದೂ ಜನಜಾಗೃತಿ ವೇದಿಕೆ. ಹಾಗೂ ವಿಶ್ವ ಹಿಂದೂ ಪರಿಷತ್ ಇನ್ನೂ ಮುಂತಾದ ಸಂಘಟನೆಗಳ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಪ್ರಮುಖರೊಂದಿಗೆ ಮನವಿ ಸಲ್ಲಿಸಲಾಯಿತು .
ಈ ಸಂದರ್ಭದಲ್ಲಿ ಪ್ರಮುಖರಾದ ಪ್ರಫುಲ್ಲ ಚಂದ್ರ ಹೆಚ್. ಯೋಗೇಶ್ ಬಾಬಣ್ಣ.ಪರಿಸರ ರಮೇಶ್.ವಿಶ್ವನಾಥ್ ರಾಜೇಶ್ ಗೌಡ. ಮುಕುಂದಣ್ಣ. ಸುರೇಶ್. ವಕೀಲರಾದ ರೇಖೇಶ್ ಮಾನೆ ಸೇರಿದಂತೆ ವಕೀಲರ ತಂಡದೊಂದಿಗೆ ಇನ್ನೂ ಹಲವಾರು ಪ್ರಮುಖ ಮಹಿಳಾ ಸಂಘಟನೆಯ ಸದಸ್ಯರು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದರು..

