I ಬಸವ ಸಮಿತಿಗೆ ನಿವೃತ್ತ ಪ್ರಾಚಾರ್ಯ I ಪ್ರೊ. ಎ.ಎಸ್. ಚಂದ್ರಶೇಖರ್ ನೇಮಕ I
ಶಿವಮೊಗ್ಗ: ರಾಷ್ಟ್ರದ ಮಾಜಿ ರಾಷ್ಟ್ರಪತಿ ಬಿ.ಡಿ. ಜತ್ತಿ ಅವರು ಸ್ಥಾಪಿಸಿರುವ ಬಸವ ಸಮಿತಿಯ ಕೇಂದ್ರ ಸಮಿತಿಗೆ ಶಿವಮೊಗ್ಗದ ನಿವೃತ್ತ ಪ್ರಾಚಾರ್ಯರಾದ ಪ್ರೊ. ಎ.ಎಸ್. ಚಂದ್ರಶೇಖರ್ ಅವರು ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಶರಣ ತತ್ವದ ಪ್ರಚಾರ ಹಾಗೂ ಅನುಷ್ಠಾನ ಬಸವ ಸಮಿತಿಯ ಮುಖ್ಯ ಕಾರ್ಯವಾಗಿದ್ದು, ಅರವಿಂದ ಜತ್ತಿ ಅವರು ಈಗ ಬಸವ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂದಿನ ಐದು ವರ್ಷಗಳ ಅವಧಿಗೆ ಶಿವಮೊಗ್ಗ ಜಿಲ್ಲೆಯನ್ನು ಚಂದ್ರಶೇಖರ್ ಅವರು ಪ್ರತಿನಿಧಿಸಲಿದ್ದಾರೆ.
ಚಂದ್ರಶೇಖರ್ ಅವರು ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಶಿವಮೊಗ್ಗ ಬಸವ ಕೇಂದ್ರದ ಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ ಉಪ ಪೋಷಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಜಿಲ್ಲಾ ರೋಟರಿ ಗವರ್ನರ್ ಆಗಿ ಪ್ರೋ. ಎ.ಎಸ್.ಚಂದ್ರಶೇಖರ್ ಅವರು ಮಾಡಿರುವ ಕಾರ್ಯ ಅದ್ವಿತೀಯವಾಗಿದೆ. ಸ್ವತಃ ರೋಟರಿ ದತ್ತಿ ದಾನಿಗಳೂ ಆಗಿರುವ ಇವರು ಕೋಟ್ಯಂತರ ರೂಪಾಯಿ ನೆರವನ್ನು ಸರ್ಕಾರಿ ಶಾಲೆಗಳ ಮೂಲಭೂತ ಸೌಲಭ್ಯ ಅಭಿವೃದ್ಧಿಗೆ ನೀಡಿದ್ದಾರೆ.

