Sunday, August 2, 2026
Homeಸೂರ್ಯಗಗನ I ಮೃತ ಪತ್ರಕರ್ತ ಅನಿಲ್ ನಾಯ್ಕ ಕುಟುಂಬಕ್ಕೆ I ಆರ್ಥಿಕ ನೆರವಿಗಾಗಿ ಮನವಿ I ತಲುಪದಿದ್ದರೆ...

 I ಮೃತ ಪತ್ರಕರ್ತ ಅನಿಲ್ ನಾಯ್ಕ ಕುಟುಂಬಕ್ಕೆ I ಆರ್ಥಿಕ ನೆರವಿಗಾಗಿ ಮನವಿ I ತಲುಪದಿದ್ದರೆ ಅಕ್ಷರದ ಹೋರಾಟ ಅನಿವಾರ್ಯ I

 I ಮೃತ ಪತ್ರಕರ್ತ ಅನಿಲ್ ನಾಯ್ಕ ಕುಟುಂಬಕ್ಕೆ I ಆರ್ಥಿಕ ನೆರವಿಗಾಗಿ ಮನವಿ I ತಲುಪದಿದ್ದರೆ ಅಕ್ಷರದ ಹೋರಾಟ ಅನಿವಾರ್ಯ I

ಶಿವಮೊಗ್ಗ : ಪತ್ರಕರ್ತರಿಗೆ ಜೀವನ ಭದ್ರತೆ ಇದಿಯಾ..? ಎನ್ನುವಂತಹ ಪ್ರಶ್ನೆ ಇದೀಗ ದೃಶ್ಯ ಮಾಧ್ಯಮದ ಪತ್ರಕರ್ತ, ಮೃತ ಅನಿಲ್ ನಾಯ್ಕ ಅವರ ಮನೆ ಜಗಲಿಗೆ ತಲುಪಿ ಅಣಕವಿಟ್ಟಿದೆ, ಹೌದು ಪತ್ರಕರ್ತನ ಸಾವಿಗೆ ಖಾಲಿ ಸಂತಾಪಗಳು ಸಾಂದರ್ಭಿಕವಾಗಿದೆ, ಇನ್ನೂ ಶಿವಮೊಗ್ಗದ ಜಿಲ್ಲಾಧಿಕಾರಿಗಳು ಮಾಧ್ಯಮ ಸಮಿತಿ ಅಧ್ಯಕ್ಷರು ಜಿಲ್ಲಾರಕ್ಷಣಾಧಿಕಾರಿಗಳು ಉಪಾಧ್ಯಕ್ಷರು, ವಾರ್ತಾಧಿಕಾರಿಗಳು ಕಾರ್ಯದರ್ಶಿಯಾಗಿರುವ ಈ ಸಮಿತಿಯಿಂದ ಸೌಜನ್ಯಕ್ಕಾದರು ಸಂತಾಪದ ಸಂದೇಶ ಸಾವಿನ ಸೂತಕದ ಪತ್ರಕರ್ತನ ಮನೆಗೆ ತಲುಪಲಿಲ್ಲ, ಶಿವಮೊಗ್ಗದಲ್ಲಿರುವ ವಿವಿಧ ಪತ್ರಿಕಾ ಸಂಘಟನೆಗಳಲ್ಲೂ ಅರ್ಥಿಕ ನೆರವಿನ ಪ್ರಸ್ತಾಪಗಳಿಲ್ಲ,

ಆಚ್ಚರಿ ಎಂದರೆ ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ ಜನಪ್ರತಿನಿಧಿಗಳಿಗೂ ಆರ್ಥಿಕ ನೆರವಿನ ಹೆಜ್ಜೆಗಳಿಲ್ಲ, ಎಸ್.ಎನ್ ಚೆನ್ನಬಸಪ್ಪನವರ ಶಾಸಕ ನಿಧಿ, ಬಿ.ವೈ ರಾಘವೇಂದ್ರರವರ ಸಂಸದ ನಿಧಿ, ಹಾಗೂ
ಉಸ್ತುವಾರಿ ಮಂತ್ರಿಗಳಾದ ಮಧು ಬಂಗಾರಪ್ಪನವರ ವಿವೇಚನಾ ನಿಧಿಗಳಿಗೆ ಬರವಿರಲಿಲ್ಲ, ಶಿವಮೊಗ್ಗ ಮಹಾನಗರ ಪಾಲಿಕೆಯ ಬಜೆಟ್‌ನಲ್ಲಿ ಮೀಸಲಿರಿಸಿರುವ ಕ್ಷೇಮನಿಧಿ ಹಾಗೆಯೇ ಮೌನವಹಿಸಿದೆ, ಇದಕ್ಕೆ ಅಸಲಿ ಕಾರಣಗಳೇನು ಗೊತ್ತೇ..? ಜಿಲ್ಲಾಡಳಿತದ ತಾತ್ಸಾರತೆ, ಕೆಲ ಪತ್ರಕರ್ತರೇ ಪತ್ರಕರ್ತರನ್ನು ಶೋಷಣೆಗೈಯುವ ಈ ಹೊತ್ತಿನಲ್ಲಿ ದುರಂತಕ್ಕೀಡಾಗಿ ಮೃತನಾದ ಪತ್ರಕರ್ತ ಅನಿಲ್ ನಾಯ್ಕನ ಕುಟುಂಬಕ್ಕೆ ಸೋಷಿಯಲ್ ಮೀಡಿಯಾ ಮುಖೇನ ಅನಿಲ್ ನಾಯ್ಕನ ಭಾವಚಿತ್ರ ಹಾಕಿಕೊಂಡು ಸಂತಾಪ ಸೂಚಿಸಿ ಕೈತೊಳೆದುಕೊಂಡ ಜನಪ್ರತಿನಿಧಿಗಳು ಕೋಮುಗಲಭೆಯಂತಹ ಘಟನಾವಳಿಗಳಲ್ಲಿ ಜೀವ ಕಳೆದುಕೊಂಡವರ ಮನೆಗೆ ಲಕ್ಷೆಪಲಕ್ಷ ಹಣದ ಚೆಕ್ ಹೆಣದ ಮುಂದಡಿಯೇ ಇಡುತ್ತಾರೆ, ಜಿಲ್ಲಾಡಳಿತ ತಕ್ಷಣವೇ ತಮ್ಮ ಆರ್ಥಿಕ ಹೆಡ್‌ನಿಂದ ಚೆಕ್ ಬಿಡುಗಡೆ ಮಾಡುತ್ತದೆ, ಪತ್ರಕರ್ತರ ವಲಯದಲ್ಲಿ ಏನಾಗಿದೆ ನೋಡಿ..?

ಇದೊಂದು ಪಕ್ಷಪಾತವಲ್ಲದೆ ಮತ್ತೇನು..? ಇಂತಹದೊಂದು ನಿಲುವು ಸಮಂಜಸವಾದುದ್ದಲ್ಲವಾಗಿದೆ, ಪುಗುಸೊಟ್ಟೆ ಸಂತಾಪಗಳು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ಮಗ್ಗಲು ಬದಲಿಸಿರುವ ರಾಜಕಾರಣಿಗಳು ಈ ಕೂಡಲೇ ತಮ್ಮ ಪೋಸ್ಟಿಂಗ್ ಸಾಧ್ಯವಾದರೆ ಡಿಲೀಟ್ ಮಾಡಿಕೊಳ್ಳಲಿ, ಅಥವಾ ಸಂತಾಪ ಸೂಚಿಸುವ ಮಾನವೀಯ ಗುಣಗಳು, ಓರ್ವ ಪತ್ರಕರ್ತನ ಕುಟುಂಬದ ಮೇಲಿದ್ದರೆ ಇಂದೇ ಪತ್ರಕರ್ತ ಅನಿಲ್ ನಾಯ್ಕನ ಮನೆಗೆ ಹೋಗಿ ಆರ್ಥಿಕ ನೆರವು ನೀಡಿ ಸಂತಾಪಕ್ಕೊಂದು ನಿಜವಾದ ಅರ್ಥ ತಂದುಕೊಡಲಿ ಎನ್ನುವುದಾಗಿದೆ, ಏಕೆಂದರೆ ಪತ್ರಕರ್ತನೋರ್ವ ಯಾವ ಸಮಯದ ಪರಿಮಿತಿಗಳಿಲ್ಲದೆ, ಬದುಕಿನ ಆರ್ಥಿಕ ಹಾಗೂ ಜೀವ ಭದ್ರತೆಗಳಿಲ್ಲದೆ ರಾಷ್ಟ್ರ ಸಂವಿಧಾನವಾದ ನಾಲ್ಕನೆ ಅವಿಭಾಜ್ಯ ಅಂಗವಾದ ಪತ್ರಿಕಾಂಗದ ಅಭಿವ್ಯಕ್ತಿ ಅಡಿಯಲ್ಲಿ ಸಾಮಾಜಿಕವಾಗಿ ಶ್ರಮಿಸಿರುತ್ತಾನೆ ಎನ್ನುವ ಮೂಲಭೂತವಾದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಈ ಕೂಡಲೇ ಪತ್ರಕರ್ತ ಎಸ್. ಅನಿಲ್ ನಾಯ್ಕನ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಿ ಎನ್ನುವುದು ಸೂರ್ಯಗಗನ ಪತ್ರಿಕೆಯ ಆಗ್ರಹವಾಗಿದೆ.

ಮೃತ ಎಸ್.ಅನಿಲ್ ನಾಯ್ಕ ಮೂರುವರೆ ವರ್ಷದ ಗಂಡು ಮಗು ಹಾಗೂ ಓರ್ವ ಮಗಳು, ಪತ್ನಿಯನ್ನು ಅಗಲಿದ್ದು, ಆತನಿಲ್ಲದ ಪತ್ರಕರ್ತ ಮನೆ ಇದೀಗ ಅನಾಥವಾಗಿದೆ, ಸಂತಾಪಗಳು ಸುದ್ದಿಗಾಗಿ, ಅನುಕಂಪವಾಗಿ ಬಳಕೆಯಾಗದೆ ಅನ್ಯ ಸಂಗತಿಗಳಿಗೆ ರಾಜಕೀಯ ಲಾಭ-ಲೋಭಕ್ಕಾಗಿ ಬಳಕೆಯಾಗುವ ಆರ್ಥಿಕ ಅನುಕುಂಪಗಳು, ಕಳೆದ ಇಪ್ಪತ್ತು ವರುಷದಿಂದ ಶಿವಮೊಗ್ಗದ ವಾಯ್ಸ್ ಆಫ್ ಶಿವಮೊಗ್ಗ ದಿನಪತ್ರಿಕೆಯ ಮೂಲಕ ವೃತ್ತಿಜೀವನ ಆರಂಭಿಸಿದ್ದ ಅನಿಲ್ ನಾಯ್ಕ ಟಿವಿ.೯ ಚಿಕ್ಕಮಗಳೂರು ಜಿಲ್ಲಾ ಕ್ಯಾಮೆರಾಮನ್ ಆಗಿ ಸೇವೆ ಸಲ್ಲಿಸಿ ನಂತರ ಬಿಟಿವಿ ಶಿವಮೊಗ್ಗದ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು ಆದರೆ ದುರಂತದ ಅಪಘಾತದಲ್ಲಿ ಮೃತರಾಗಿ ಯಾವುದೇ ಜೀವನ ಭದ್ರತೆಯನ್ನು ಕುಟುಂಬಕ್ಕೆ ಮಾಡಿ ಕೊಡದೆ, ಬಾರದ ಊರಿಗೆ ಪಯಣಿಸಿರುವ ಬಿ.ಟಿವಿ ವರದಿಗಾರ ಅನಿಲ್ ಕುಟುಂಬಕ್ಕೆ ಸಾಮಾಜಿಕ ನ್ಯಾಯದ ದಿಸೆಯಲ್ಲಿ ಆರ್ಥಿಕ ನೆರವು ಅಗತ್ಯವಾಗಿದೆ.

ಈ ಕೂಡಲೇ ಪತ್ರಕರ್ತ ಅನಿಲ್ ನಾಯ್ಕನ ಕುಟುಂಬಕ್ಕೆ ಜಿಲ್ಲಾಡಳಿತ ಹಾಗೂ ಆಡಳಿತರೂಢ ಜನಪ್ರತಿನಿಧಿಗಳ ಅನುದಾನಗಳ ನಿಧಿಯಿಂದ ಆರ್ಥಿಕ ನೆರವು ನೀಡಲು ಮುಂದಾಗದಿದ್ದರೆ ಅಕ್ಷರದ ಹೋರಾಟ ಅನಿವಾರ್ಯ ಎಂದು ಸೂರ್ಯಗಗನ ಕನ್ನಡ ಪತ್ರಿಕೆ ತಿಳಿಸುತ್ತದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I