I ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ I ವಕೀಲರ ಸಂಘದ ಪ್ರತಿಭಟನೆ I ಶಿವಮೊಗ್ಗ ಕೆಯುಡಬ್ಲ್ಯೂಜೆ ಬೆಂಬಲ I ಜಿಲ್ಲಾಧಿಕಾರಿಗಳಿಗೆ ಮನವಿ I
ಶಿವಮೊಗ್ಗ : ಶಿವಮೊಗ್ಗಕ್ಕೆ ಹೈಕೋರ್ಟ್ ಪೀಠ ಸ್ಥಾಪನೆಗೆ ಹಾಗೂ ಮಂಗಳೂರು ಪೀಠದ ವಿಷಯದಲ್ಲಿ ಶಿವಮೊಗ್ಗದ ಹೆಸರನ್ನು ಕೈ ಬಿಡುವಂತೆ ಆಗ್ರಹಿಸಿ ವಕೀಲರ ಸಂಘ ನಡೆಸುತ್ತಿರುವ ಹೋರಾಟಕ್ಕೆ ಶಿವಮೊಗ್ಗ ಕೆಯುಡಬ್ಲ್ಯೂಜೆ ಬೆಂಬಲ ವ್ಯಕ್ತಪಡಿಸಿ ಮುಷ್ಕರದಲ್ಲಿ ಪಾಲ್ಗೊಂಡಿತು.
ಈ ಸಂದರ್ಭದಲ್ಲಿ ಶಿವಮೊಗ್ಗ ಕೆಯುಡಬ್ಲ್ಯೂಜೆ ಜಿಲ್ಲಾ ಅಧ್ಯಕ್ಷರಾದ ವೈದ್ಯನಾಥ್ ಅವರು ಮಾತನಾಡಿ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠದ ಬೇಡಿಕೆ ನ್ಯಾಯಯುತವಾಗಿದ್ದು ಇದು ಕೇವಲ ವಕೀಲರ ಹೋರಾಟವಲ್ಲ ಜನತೆಯ ಪರವಾದ ಹೋರಾಟವಾಗಿದೆ ಎಂದು ಅವರು ಹೇಳಿದರು, ನಡೆಸುತ್ತಿರುವ ಅನಿರ್ಧಿಷ್ಠವಾಧಿ ಧರಣಿ ಜನತೆಯ ಹಿತದೃಷ್ಠಿಯಿಂದ ನ್ಯಾಯ ಸಮ್ಮತವಾಗಿದ್ದು ಮದ್ಯ ಕರ್ನಾಟಕದ ಭಾಗವಾಗಿರುವ ಈ ಪ್ರದೇಶಕ್ಕೆ ಬಹಳ ಹಿಂದಿನಿಂದಲೂ ಪರಿಸರ ವಿರೋಧಿ ಅನ್ಯಾಯಗಳು ಜರುಗುತ್ತಲೇ ಇದೆ. ಇಂತಹ ಅವೈಜ್ಞಾನಿಕ ದಾಳಿಗಳ ಪಟ್ಟಿಯಲ್ಲಿ ಮಂಗಳೂರು ಪೀಠ ಸ್ಥಾಪನೆಯ ಪ್ರಸ್ತಾವನೆಯಲ್ಲಿ ಶಿವಮೊಗ್ಗದ ಹೆಸರನ್ನು ಸೇರ್ಪಡೆಗೊಳಿಸಿರುವುದು ಸೇರಿಕೊಂಡಿರುವುದು ದುರಂತದ ಪರಮಾವಧಿಯಾಗಿದೆ ಎಂದು ವೈದ್ಯನಾಥ್ ಅವರು ಖಂಡಿಸಿದರು.
ಜನತೆಯ ಹಿತದೃಷ್ಟಿಯನ್ನು ಗಣನೆಗೆ ತೆಗೆದುಕೊಳ್ಳದೆ ಆರ್ಥಿಕ ಸ್ಥಿತಿಗತಿ ಹಾಗೂ ಪ್ರಾಕೃತಿಕ ವಿಕೋಪಗಳ ಸವಾಲುಗಳನ್ನು ಎದುರಿಸಿಕೊಂಡು ಕೇಸಿನ ಇತ್ಯರ್ಥಕ್ಕಾಗಿ ಮತ್ತೊಂದು ಸಮಸ್ಯೆಗಳನ್ನು ಕಟ್ಟಿಕೊಳ್ಳಬೇಕಾದ ಪ್ರಸಂಗಗಳ ಮೊದಲೇ ಜನತೆಯ ಪರವಾದ ಈ ಹೋರಾಟ ನಿರಂತರವಾಗಿರಲಿ ಎಂದು ಆಶಿಸಿದರು, ಅಲ್ಲದೆ ಬೇಕೆ, ಬೇಕು ನ್ಯಾಯ ಎನ್ನುವ ದನಿಗಳು ಮುಂದಿನ ದಿನಗಳಲ್ಲಿ ಪೀಠದ ಸ್ಥಾಪನೆ ಆಗುವವರೆಗೂ ಜನ ಸಮುದಾಯದ ದನಿಯಾಗಿ ಮುಂದುವರೆಯಬೇಕು, ಅಲ್ಲಿಯವರೆಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಬೆಂಬಲಿಸುತ್ತದೆ ಎಂದು ಅವರು ಈ ಸಂದರ್ಭದಲ್ಲಿ ವಿವರಿಸಿದರು.
ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಮನವಿ
ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠಕ್ಕೆ ಆಗ್ರಹಿಸಿ ಸಂಘದಿಂದ ಮುಖ್ಯಮಂತ್ರಿಗಳಿಗೆ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯರಾದ ರವಿಕುಮಾರ್, ಜಿಲ್ಲಾಧ್ಯಕ್ಷ ವೈದ್ಯನಾಥ್, ಪ್ರಧಾನ ಕಾರ್ಯದರ್ಶಿ ಹಾಲಸ್ವಾಮಿ, ಉಪಾಧ್ಯಕ್ಷರಾದ ದೇಶಾದ್ರಿ, ಸತ್ಯನಾರಾಯಣ, ಕಾರ್ಯದರ್ಶಿಗಳಾದ ಗಾ.ರಾ. ಶ್ರೀನಿವಾಸ್ ಹಾಗೂ ಆರುಂಡಿ ಶ್ರೀನಿವಾಸ್, ಭರತ್ ರಾಜ್ ಸಿಂಗ್, ಜಿ.ಟಿ.ಸತೀಶ್, ಬಾಲಕೃಷ್ಣ ಹೆಗಡೆ ಇನ್ನಿತರರು ಇದ್ದರು.


