Monday, August 3, 2026
Homeಸೂರ್ಯಗಗನI ಖಾಲಿ ಜೇಬು I

I ಖಾಲಿ ಜೇಬು I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಖಾಲಿ ಜೇಬು I

ಹೊತ್ತಾರೆ ಬರೆಗಳ ನೋವು,
ಕಡು ಕತ್ತಲ ನಿದುರೆಗಳ ಕಾವು,
ಕಂಗಳ ಹೊರಳಿಸುತಲಿ ಕೂತೇ,
ನಾಳೆಯ ಹೆಜ್ಜೆಗಳು ಕುದಿತಿತ್ತು,

ಯಾರ ಮೇಲೂ ಆರೋಪವಿತ್ತಿಲ್ಲ,
ಎದೆ ನಂಬಿಕೆಗಳೂ ಹುಸಿಯಾಗಿಲ್ಲ,
ಈ ಅರಿವಿನೊಳಗೆ ಬಲದಿ ಗುರುವಿದ್ದಾನೆ,
ಕುದಿವ ಹೆಜ್ಜೆಗಳ ಮುಂದಿಡಿಸುತ್ತಿದ್ದಾನೆ
ನೋವುಗಳ ತಣಿಸುತ್ತಿದ್ದಾನೆ,

ಇನ್ನಷ್ಟು ನಿಂದಿಸುವವರು ನಿಂದಿಸಲಿ
ಅಡ್ಡಿಯಾಗುವವರು ಅಡ್ಡಿಯಾಗಲಿ,
ಕುತ್ಸಿತ ವಿಕೃತಿಗಳು ಪಾನಮತ್ತದಿ ನರ್ತಿಸಲಿ,
ನಾನೆಂದಿಗೂ ಸೊಲ್ಲೆತ್ತುವುದಿಲ್ಲ,
ಮೌನದಿ ಗುರುವಿನ ದೀವಿಗೆ ಹಿಡಿಯುತ್ತೇನೆ,

ಕೋಟೆ ಕಟ್ಟಿ ಆಳಿದವರೇನು, ಅಳಿಯಲಿಲ್ಲವೇ,
ಅಧಿಕಾರದಂದಣದಿ ಮೆರೆದವರು ಬಸವಳಿದಿಲ್ಲವೇ,
ಕ್ಷುದ್ರಾವಸ್ಥೆಯೊಳು ಮುಗಿಬಿದ್ದವರು ಕೊನೆಯಾಗಲಿಲ್ಲವೇ..?!
ಇನ್ನೂ ಇವರು ಯಾವ ಲೆಕ್ಕದಿ ಇದ್ದಾರು..!?

ಹಸನ್ಮುಖಿಯಾಗಿಯೇ ಇದ್ದೇನೆ,
ನೋವುಗಳು ಸಹಿಸುವುದನು ಕಲಿಸಿದ್ದಾನೆ,
ಬೊಬ್ಬೆಗಳ ಹೆಜ್ಜೆಗಳು ಸಾಗುತ್ತಲೇ ಇದೆ,
ಕ್ರಮಿಸುವ ಕಾಲದಿ ಎಲ್ಲವೂ ನಿರುಮ್ಮಳವಾಗಿದೆ,

ನಾನೀಗ ಹೊಸತೊಂದು ದಿಕ್ಕಿನೆಡೆಗೆ,
ನಡೆದಿದ್ದೇನೆ, ನಡೆದಿದ್ದೇನೆ, ತುಸು ಕಾಲದಿ,
ಧ್ವೇಷಿಗಳು, ಅಸೂಯೇ ಚಿತ್ತಗಳು,
ಚಪ್ಪಾಳೆಗಳು ತಟ್ಟಲಿದೆ, ಗುಣಗಾನಿಸಲಿದೆ,

ಹೇ ಗುರುವೇ ಧನ್ಯವಾದಗಳು
ನೀ ಈ ಪಾಮರನೊಳಗೆ ಶಾಶ್ವತವಾಗಿದ್ದಕ್ಕೆ,
ಕ್ಲಿಷ್ಟಕರಗಳಲಿ ನಡೆಸುತ್ತಿರುವುದಕ್ಕೆ,
ಅಲೌಕಿಕತೆಯ ಕಟ್ಟಿ ಕೊಟ್ಟಿದ್ದಕ್ಕೆ
ಮತ್ತೊಮ್ಮೆ, ಮಗದೊಮ್ಮೆ ಧನ್ಯವಾದಗಳು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I