Sunday, August 2, 2026
Homeಸೂರ್ಯಗಗನI ಹೈಕೋರ್ಟ್ ಸಂಚಾರಿ ಪೀಠದ ಸ್ಥಾಪನೆಗೆ I ಶಿವಮೊಗ್ಗ ಪರಿವಾರದ ಅಧ್ಯಕ್ಷರಾದ I ಕೆ.ಎಸ್ ಶಶಿ...

I ಹೈಕೋರ್ಟ್ ಸಂಚಾರಿ ಪೀಠದ ಸ್ಥಾಪನೆಗೆ I ಶಿವಮೊಗ್ಗ ಪರಿವಾರದ ಅಧ್ಯಕ್ಷರಾದ I ಕೆ.ಎಸ್ ಶಶಿ ಅವರಿಂದ ಆಗ್ರಹ I

I ಹೈಕೋರ್ಟ್ ಸಂಚಾರಿ ಪೀಠದ ಸ್ಥಾಪನೆಗೆ I ಶಿವಮೊಗ್ಗ ಪರಿವಾರದ ಅಧ್ಯಕ್ಷರಾದ I ಕೆ.ಎಸ್ ಶಶಿ ಅವರಿಂದ ಆಗ್ರಹ I

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆ ನೆರೆಯ ಜಿಲ್ಲೆಗಳಿಗೆ ಅನುಕೂಲಕರವಾದ ಸ್ಥಳವಾಗಿದ್ದು, ರೈಲು ಸಂಚಾರ, ವಿಮಾನ ನಿಲ್ದಾಣ, ಪ್ರಾಕೃತಿಕ ವಿಕೋಪಗಳಿಗೆ ತುತ್ತಾಗದ ಪ್ರದೇಶವಾಗಿದೆ, ಅಲ್ಲದೆ ಕರ್ನಾಟಕದ ಮಧ್ಯ ಭಾಗವಾಗಿರುವ ಶಿವಮೊಗ್ಗ ಜಿಲ್ಲೆ ಅನೇಕ ಹೋರಾಟಗಳನ್ನು, ಚಳುವಳಿಗಳನ್ನು ನಾಡಿಗೆ ಸಮರ್ಪಿಸಿದ ಹೆಗ್ಗಳಿಕೆಯನ್ನು ಹೊಂದಿದ್ದು ಹೈಕೋರ್ಟ್ ಸರ್ಕ್ಯೂಟ್ ಬೇಂಚ್ ಸ್ಥಾಪನೆ ಎನ್ನುವ ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಮುಷ್ಕರ ನ್ಯಾಯಯುತವಾಗಿದೆ, ಇದು ವೈಜ್ಞಾನಿಕವಾದ ಬೇಡಿಕೆಯು ಆಗಿರುವುದರಿಂದ ಶಿವಮೊಗ್ಗ ಪರಿವಾರ ಸಂಸ್ಥೆಯು ಸಂಪೂರ್ಣವಾಗಿ ಈ ಹೋರಾಟಕ್ಕೆ ಬೆಂಬಲಿಸುತ್ತದೆ ಎಂದು ಕೆ.ಎಸ್ ಶಶಿ ಅವರು ತಿಳಿಸಿದ್ದಾರೆ,

ಅವರು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ಶಿವಮೊಗ್ಗ ವಕೀಲರ ಸಂಘದಿಂದ ನಡೆಸಲಾಗುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರವು ಸಾಮಾಜಿಕವಾದ ಬೇಡಿಕೆ ಈಡೆರಿಕೆಗಾಗಿ ಆಗಿದ್ದು ಇದಕ್ಕೆ ಈ ನೆಲದ ನಾಗರೀಕರ ಬೆಂಬಲ ಇರಲಿ ಎಂದು ಹೇಳಿದರಲ್ಲದೆ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಿದ ತರುವಾಯ ಕೂಡಲೇ ಕಳೆದ ಅವಧಿಯ ಮುಖ್ಯಮಂತ್ರಿಗಳ ಪತ್ರವನ್ನು ಮರುಪರೀಶಿಲಿಸಿ ಯಾವುದೇ ಕಾರಣಕ್ಕೂ ಮಂಗಳೂರು ಹೈಕೋರ್ಟ್ ಸಂಚಾರಿ ಪೀಠಕ್ಕೆ ಲಗತ್ತು ಮಾಡಿಕೊಳ್ಳದೆ ಶಿವಮೊಗ್ಗದಲ್ಲಿಯೇ ಹೈಕೋರ್ಟ್ ಸರ್ಕ್ಯೂಟ್ ಬೇಂಚ್ ಸ್ಥಾಪಿಸಲು ಮುಖ್ಯ ನ್ಯಾಯಾದೀಶರಿಗೆ ಪತ್ರ ಬರೆದು ತಮ್ಮ ನಿಲುವು ವ್ಯಕ್ತಪಡಿಸಬೇಕೆಂದು ಈ ಸಂದರ್ಭದಲ್ಲಿ ಕೆ.ಎಸ್ ಶಶಿ ವಿವರಿಸಿದ್ದಾರೆ.

ಇನ್ನೂ ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ವಿವಿಧ ನಾಗರೀಕ ಸಂಸ್ಥೆಗಳಿಂದ ನಡೆದ ಜಾಥ ಇಡೀ ರಾಜ್ಯಕ್ಕೆ ನ್ಯಾಯದ ಕೂಗನ್ನು ಮುಟ್ಟಿಸಿದ್ದಾರೆ, ಶ್ರೀ ಸಾಮಾನ್ಯರ ಹಿತದೃಷ್ಠಿಯಿಂದ ಇದು ಸಮಂಜಸವಾದ ದನಿಯಾಗಿದೆ ಎಂದು ಶಿವಮೊಗ್ಗ ಪರಿವಾರ ಸಂಸ್ಥೆಯ ಅಧ್ಯಕ್ಷರಾದ ಕೆ.ಎಸ್ ಶಶಿ ಹೇಳಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I