I ಹೈಕೋರ್ಟ್ ಸಂಚಾರಿ ಪೀಠದ ಸ್ಥಾಪನೆಗೆ I ಶಿವಮೊಗ್ಗ ಪರಿವಾರದ ಅಧ್ಯಕ್ಷರಾದ I ಕೆ.ಎಸ್ ಶಶಿ ಅವರಿಂದ ಆಗ್ರಹ I
ಶಿವಮೊಗ್ಗ : ಶಿವಮೊಗ್ಗ ಜಿಲ್ಲೆ ನೆರೆಯ ಜಿಲ್ಲೆಗಳಿಗೆ ಅನುಕೂಲಕರವಾದ ಸ್ಥಳವಾಗಿದ್ದು, ರೈಲು ಸಂಚಾರ, ವಿಮಾನ ನಿಲ್ದಾಣ, ಪ್ರಾಕೃತಿಕ ವಿಕೋಪಗಳಿಗೆ ತುತ್ತಾಗದ ಪ್ರದೇಶವಾಗಿದೆ, ಅಲ್ಲದೆ ಕರ್ನಾಟಕದ ಮಧ್ಯ ಭಾಗವಾಗಿರುವ ಶಿವಮೊಗ್ಗ ಜಿಲ್ಲೆ ಅನೇಕ ಹೋರಾಟಗಳನ್ನು, ಚಳುವಳಿಗಳನ್ನು ನಾಡಿಗೆ ಸಮರ್ಪಿಸಿದ ಹೆಗ್ಗಳಿಕೆಯನ್ನು ಹೊಂದಿದ್ದು ಹೈಕೋರ್ಟ್ ಸರ್ಕ್ಯೂಟ್ ಬೇಂಚ್ ಸ್ಥಾಪನೆ ಎನ್ನುವ ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಮುಷ್ಕರ ನ್ಯಾಯಯುತವಾಗಿದೆ, ಇದು ವೈಜ್ಞಾನಿಕವಾದ ಬೇಡಿಕೆಯು ಆಗಿರುವುದರಿಂದ ಶಿವಮೊಗ್ಗ ಪರಿವಾರ ಸಂಸ್ಥೆಯು ಸಂಪೂರ್ಣವಾಗಿ ಈ ಹೋರಾಟಕ್ಕೆ ಬೆಂಬಲಿಸುತ್ತದೆ ಎಂದು ಕೆ.ಎಸ್ ಶಶಿ ಅವರು ತಿಳಿಸಿದ್ದಾರೆ,
ಅವರು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ಶಿವಮೊಗ್ಗ ವಕೀಲರ ಸಂಘದಿಂದ ನಡೆಸಲಾಗುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರವು ಸಾಮಾಜಿಕವಾದ ಬೇಡಿಕೆ ಈಡೆರಿಕೆಗಾಗಿ ಆಗಿದ್ದು ಇದಕ್ಕೆ ಈ ನೆಲದ ನಾಗರೀಕರ ಬೆಂಬಲ ಇರಲಿ ಎಂದು ಹೇಳಿದರಲ್ಲದೆ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಿದ ತರುವಾಯ ಕೂಡಲೇ ಕಳೆದ ಅವಧಿಯ ಮುಖ್ಯಮಂತ್ರಿಗಳ ಪತ್ರವನ್ನು ಮರುಪರೀಶಿಲಿಸಿ ಯಾವುದೇ ಕಾರಣಕ್ಕೂ ಮಂಗಳೂರು ಹೈಕೋರ್ಟ್ ಸಂಚಾರಿ ಪೀಠಕ್ಕೆ ಲಗತ್ತು ಮಾಡಿಕೊಳ್ಳದೆ ಶಿವಮೊಗ್ಗದಲ್ಲಿಯೇ ಹೈಕೋರ್ಟ್ ಸರ್ಕ್ಯೂಟ್ ಬೇಂಚ್ ಸ್ಥಾಪಿಸಲು ಮುಖ್ಯ ನ್ಯಾಯಾದೀಶರಿಗೆ ಪತ್ರ ಬರೆದು ತಮ್ಮ ನಿಲುವು ವ್ಯಕ್ತಪಡಿಸಬೇಕೆಂದು ಈ ಸಂದರ್ಭದಲ್ಲಿ ಕೆ.ಎಸ್ ಶಶಿ ವಿವರಿಸಿದ್ದಾರೆ.
ಇನ್ನೂ ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ವಿವಿಧ ನಾಗರೀಕ ಸಂಸ್ಥೆಗಳಿಂದ ನಡೆದ ಜಾಥ ಇಡೀ ರಾಜ್ಯಕ್ಕೆ ನ್ಯಾಯದ ಕೂಗನ್ನು ಮುಟ್ಟಿಸಿದ್ದಾರೆ, ಶ್ರೀ ಸಾಮಾನ್ಯರ ಹಿತದೃಷ್ಠಿಯಿಂದ ಇದು ಸಮಂಜಸವಾದ ದನಿಯಾಗಿದೆ ಎಂದು ಶಿವಮೊಗ್ಗ ಪರಿವಾರ ಸಂಸ್ಥೆಯ ಅಧ್ಯಕ್ಷರಾದ ಕೆ.ಎಸ್ ಶಶಿ ಹೇಳಿದ್ದಾರೆ.

