I ಕರ್ನಾಟಕ ಕದಂಬ ಪಡೆ ಸಂಘಟನೆಯ ದಿನದರ್ಶಿಕೆ ಬಿಡುಗಡೆಗೊಳಿಸಿದ I ಸಚಿವ ಕೆ.ಹೆಚ್ ಮುನಿಯಪ್ಪ I:
ಬೆಂಗಳೂರು : ಕರ್ನಾಟಕ ಕದಂಬ ಪಡೆ ಸಂಘಟನೆಯ ವಿನೂತನ ದಿನದರ್ಶಿಕೆಯನ್ನು ರಾಜ್ಯ ಸರ್ಕಾರದ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವರು ಹಾಗೂ ಮಾಜಿ ಭಾರತ ಒಕ್ಕೂಟ ಸರ್ಕಾರದ ಸಚಿವರು ಆದ ಕೆ.ಹೆಚ್ ಮುನಿಯಪ್ಪರವರು ಅನಾವರಣ ಮಾಡುವ ಮೂಲಕ ಕರ್ನಾಟಕ ಕದಂಬ ಪಡೆಯ ಕನ್ನಡ ಕೆಲಸಗಳಿಗೆ ಬೆಂಬಲಿಸುತ್ತೇನೆ ಹಾಗೂ ಉತ್ತಮ ರೀತಿಯಲ್ಲಿ ಸಂಘಟನೆಯನ್ನು ಕಟ್ಟಿ ರಾಜ್ಯಾದ್ಯಂತ ವಿಸ್ತರಿಸುವಂತೆ ಹೇಳಿದರು,
ಈ ಸಂದರ್ಭದಲ್ಲಿ ಸಂಘಟನೆಯ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

