Saturday, August 1, 2026
Homeಸೂರ್ಯಗಗನI ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ I ವಕೀಲರ ಸಂಘದ ಪ್ರತಿಭಟನೆ I ಶಿವಮೊಗ್ಗ ಕೆಯುಡಬ್ಲ್ಯೂಜೆ...

I ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ I ವಕೀಲರ ಸಂಘದ ಪ್ರತಿಭಟನೆ I ಶಿವಮೊಗ್ಗ ಕೆಯುಡಬ್ಲ್ಯೂಜೆ ಬೆಂಬಲ I ಜಿಲ್ಲಾಧಿಕಾರಿಗಳಿಗೆ ಮನವಿ I

I ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ I ವಕೀಲರ ಸಂಘದ ಪ್ರತಿಭಟನೆ I ಶಿವಮೊಗ್ಗ ಕೆಯುಡಬ್ಲ್ಯೂಜೆ ಬೆಂಬಲ I ಜಿಲ್ಲಾಧಿಕಾರಿಗಳಿಗೆ ಮನವಿ I

ಶಿವಮೊಗ್ಗ : ಶಿವಮೊಗ್ಗಕ್ಕೆ ಹೈಕೋರ್ಟ್ ಪೀಠ ಸ್ಥಾಪನೆಗೆ ಹಾಗೂ ಮಂಗಳೂರು ಪೀಠದ ವಿಷಯದಲ್ಲಿ ಶಿವಮೊಗ್ಗದ ಹೆಸರನ್ನು ಕೈ ಬಿಡುವಂತೆ ಆಗ್ರಹಿಸಿ ವಕೀಲರ ಸಂಘ ನಡೆಸುತ್ತಿರುವ ಹೋರಾಟಕ್ಕೆ ಶಿವಮೊಗ್ಗ ಕೆಯುಡಬ್ಲ್ಯೂಜೆ ಬೆಂಬಲ ವ್ಯಕ್ತಪಡಿಸಿ ಮುಷ್ಕರದಲ್ಲಿ ಪಾಲ್ಗೊಂಡಿತು.

ಈ ಸಂದರ್ಭದಲ್ಲಿ ಶಿವಮೊಗ್ಗ ಕೆಯುಡಬ್ಲ್ಯೂಜೆ ಜಿಲ್ಲಾ ಅಧ್ಯಕ್ಷರಾದ ವೈದ್ಯನಾಥ್ ಅವರು ಮಾತನಾಡಿ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠದ ಬೇಡಿಕೆ ನ್ಯಾಯಯುತವಾಗಿದ್ದು ಇದು ಕೇವಲ ವಕೀಲರ ಹೋರಾಟವಲ್ಲ ಜನತೆಯ ಪರವಾದ ಹೋರಾಟವಾಗಿದೆ ಎಂದು ಅವರು ಹೇಳಿದರು, ನಡೆಸುತ್ತಿರುವ ಅನಿರ್ಧಿಷ್ಠವಾಧಿ ಧರಣಿ ಜನತೆಯ ಹಿತದೃಷ್ಠಿಯಿಂದ ನ್ಯಾಯ ಸಮ್ಮತವಾಗಿದ್ದು ಮದ್ಯ ಕರ್ನಾಟಕದ ಭಾಗವಾಗಿರುವ ಈ ಪ್ರದೇಶಕ್ಕೆ ಬಹಳ ಹಿಂದಿನಿಂದಲೂ ಪರಿಸರ ವಿರೋಧಿ ಅನ್ಯಾಯಗಳು ಜರುಗುತ್ತಲೇ ಇದೆ. ಇಂತಹ ಅವೈಜ್ಞಾನಿಕ ದಾಳಿಗಳ ಪಟ್ಟಿಯಲ್ಲಿ ಮಂಗಳೂರು ಪೀಠ ಸ್ಥಾಪನೆಯ ಪ್ರಸ್ತಾವನೆಯಲ್ಲಿ ಶಿವಮೊಗ್ಗದ ಹೆಸರನ್ನು ಸೇರ್ಪಡೆಗೊಳಿಸಿರುವುದು ಸೇರಿಕೊಂಡಿರುವುದು ದುರಂತದ ಪರಮಾವಧಿಯಾಗಿದೆ ಎಂದು ವೈದ್ಯನಾಥ್ ಅವರು ಖಂಡಿಸಿದರು.

 

ಜನತೆಯ ಹಿತದೃಷ್ಟಿಯನ್ನು ಗಣನೆಗೆ ತೆಗೆದುಕೊಳ್ಳದೆ ಆರ್ಥಿಕ ಸ್ಥಿತಿಗತಿ ಹಾಗೂ ಪ್ರಾಕೃತಿಕ ವಿಕೋಪಗಳ ಸವಾಲುಗಳನ್ನು ಎದುರಿಸಿಕೊಂಡು ಕೇಸಿನ ಇತ್ಯರ್ಥಕ್ಕಾಗಿ ಮತ್ತೊಂದು ಸಮಸ್ಯೆಗಳನ್ನು ಕಟ್ಟಿಕೊಳ್ಳಬೇಕಾದ ಪ್ರಸಂಗಗಳ ಮೊದಲೇ ಜನತೆಯ ಪರವಾದ ಈ ಹೋರಾಟ ನಿರಂತರವಾಗಿರಲಿ ಎಂದು ಆಶಿಸಿದರು, ಅಲ್ಲದೆ ಬೇಕೆ, ಬೇಕು ನ್ಯಾಯ ಎನ್ನುವ ದನಿಗಳು ಮುಂದಿನ ದಿನಗಳಲ್ಲಿ ಪೀಠದ ಸ್ಥಾಪನೆ ಆಗುವವರೆಗೂ ಜನ ಸಮುದಾಯದ ದನಿಯಾಗಿ ಮುಂದುವರೆಯಬೇಕು, ಅಲ್ಲಿಯವರೆಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಬೆಂಬಲಿಸುತ್ತದೆ ಎಂದು ಅವರು ಈ ಸಂದರ್ಭದಲ್ಲಿ ವಿವರಿಸಿದರು.

ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಮನವಿ

ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠಕ್ಕೆ ಆಗ್ರಹಿಸಿ ಸಂಘದಿಂದ ಮುಖ್ಯಮಂತ್ರಿಗಳಿಗೆ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯರಾದ ರವಿಕುಮಾರ್, ಜಿಲ್ಲಾಧ್ಯಕ್ಷ ವೈದ್ಯನಾಥ್, ಪ್ರಧಾನ ಕಾರ್ಯದರ್ಶಿ ಹಾಲಸ್ವಾಮಿ, ಉಪಾಧ್ಯಕ್ಷರಾದ ದೇಶಾದ್ರಿ, ಸತ್ಯನಾರಾಯಣ, ಕಾರ್ಯದರ್ಶಿಗಳಾದ ಗಾ.ರಾ. ಶ್ರೀನಿವಾಸ್ ಹಾಗೂ ಆರುಂಡಿ ಶ್ರೀನಿವಾಸ್, ಭರತ್ ರಾಜ್ ಸಿಂಗ್, ಜಿ.ಟಿ.ಸತೀಶ್, ಬಾಲಕೃಷ್ಣ ಹೆಗಡೆ ಇನ್ನಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I