Thursday, August 6, 2026
Homeಸೂರ್ಯಗಗನI ಇವ್ರಿಗೆ ಆಜಾದಿ ಬೇಕಂತೆ..?! I

I ಇವ್ರಿಗೆ ಆಜಾದಿ ಬೇಕಂತೆ..?! I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಇವ್ರಿಗೆ ಆಜಾದಿ ಬೇಕಂತೆ..?! I

ನಾವಿನ್ನೂ ಗುಲಾಮಿಗಳೇ..?
ನನ್ನ ಭಾರತ ಯಾರ ಹಿಡಿತದಲ್ಲಿದೆ,
ಮನುವಾದ, ಬ್ರಾಹ್ಮಣವಾದ, ,
ಇನ್ನಾವ ಸಿದ್ದಾಂತದಲ್ಲಿದೆ..?!

ಬಲಪಂಥೀಯರು ದ್ರೋಹಿಗಳೇ..?!
ಬಿಜೆಪಿ ಪಕ್ಷ ಈ ದೇಶಕ್ಕೆ ಮಾರಕವೇ,
ಆರೆಸ್ಸೆಸ್ ಎದೆಚರಿಗೆಗಳು ವಿದ್ರೋಹಿಯೇ..?
ಇದೆಂತಹ ಕೂಗು “ಅಜಾದಿ”
ನಾವು ಸ್ವಾತಂತ್ರ್ಯ ಭಾರತದಲ್ಲಿಲ್ಲವೇ,

ಖಾಲಿ ಸುಳ್ಳಿನ ಸರಪಳಿಗಳಲಿ,
ಬಿಗಿತಗೊಳಿಸುವ ಕೂಗುಗಳಲಿ,
ಅತಂತ್ರತೆ, ಅರಾಜಕತೆ, ಅಭದ್ರತೆ,
ಸೃಷ್ಟಿಸುವ ಹುನ್ನಾರಗಳಲಿ
ಅಜಾದಿ, ಆಜಾದಿ ಎನ್ನದಿರಿ, ಅಬ್ಬರಿಸದಿರಿ,

ನನ್ನ ಭಾರತದಲಿ ಬಲಿದಾನಗಳ ಚರಿತ್ರೆಗಳಿದೆ,
ಇಂದಿಗೂ ಸ್ವಾತಂತ್ರ್ಯವಾಗಿದೆ, ಸಮೃದ್ದಿಯಾಗಿದೆ,
ದೇಶವಾಸಿಗಳ ಅಭಿಮಾನದಲ್ಲಿದೆ,
ಭಾರತದಲ್ಲಿ ಅನೇಕತೆಗಳ ಪಿಡುಗುಗಳಿದೆ..?
ಆದರೂ ಏಕತೆಯಲಿ ವೈವಿಧ್ಯತೆಗಳಿದೆ,

ಕ್ರಾಂತಿಕಾರಿಗಳ ಭಾರತವಿದು,
ದೇಶಾಭಿಮಾನಿಗಳ ಭಾರತವಿದು,
ಆಜಾದಿ ಹೆಸರಿನಲಿ ದೇಶವನ್ನ ಕೆಡವದಿರಿ,
ಆಜಾದಿ ಹೆಸರಿನಲಿ ಶ್ರೀರಾಮನನ್ನ ನಿಂದಿಸದಿರಿ,
ಭಾರತಮಾತೆಯ ಅಪಾಹಸ್ಯಗೈಯದಿರಿ,
ಆಜಾದಿ ಹೆಸರಿನಲಿ ಜನಜೀವನ ವಿಂಗಡಿಸದಿರಿ,
ಆಜಾದಿ ಹೆಸರಿನಲಿ ದೇಶದ್ರೋಹಿತ್ವ ಬಿತ್ತದಿರಿ,

ನನ್ನ ಭಾರತದಲ್ಲಿ ಸಂವಿಧಾನ ಗಟ್ಟಿಯಾಗಿದೆ,
ಸಮಷ್ಟಿ ಮನಸಿನೊಳು ಅಭಿವ್ಯಕ್ತಿಸಬಹುದಾಗಿದೆ,
ಈ ಜೀವದ ಸಂವಿಧಾನ ಯಾರ ಕೆಡುವಲು ಸಾಧ್ಯವಿಲ್ಲ,.
ಆಜಾದಿ ಹೆಸರಿನಲಿ ಸುಳ್ಳುಗಳ ಹಂಚದಿರಿ,

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಇವ್ರಿಗೆ ಆಜಾದಿ ಬೇಕಂತೆ..?! I I ಶಿವಮೊಗ್ಗ ವಕೀಲರ ಸಂಘದ ಚುನಾವಣೆಯಲ್ಲಿ ಗೀತಾ ಮಾನೆ ಅವರ ಸದ್ದು I  I ನಗರ ಬಿಜೆಪಿಯಿಂದ ತುಂಗಾ ನದಿಗೆ ಭಕ್ತಿಪೂರ್ವಕ ಬಾಗಿನ ಅರ್ಪಣೆ I ಜಿಲ್ಲೆಯ ಸಮೃದ್ಧಿಗಾಗಿ ಶಾಸಕ ಎಸ್.ಎನ್. ಚನ್ನಬಸಪ್ಪ ... I ಕೆಇಎ ಸ್ಪಷ್ಟನೆ I ಒಎಂಆರ್ ಹಾಗೂ ಪ್ರಶ್ನೆಪತ್ರಿಕೆ ಕ್ರಮಸಂಖ್ಯೆ ಒಂದೇ ಇರುವುದು ಕಡ್ಡಾಯವಲ್ಲ I ಸುಳ್ಳುಸುದ್ದಿ ನಂಬದಂ... I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ...