Sunday, August 2, 2026
Homeಸೂರ್ಯಗಗನI ಜೆಸಿಐ ರಾಯಲ್ಸ್‌ನಿಂದ I ಬ್ರೆಸ್ಟ್ ಫೀಡಿಂಗ್ ಕುರಿತ I ವಿಶೇಷ ಜಾಗೃತಿ ಕಾರ್ಯಕ್ರಮ I

I ಜೆಸಿಐ ರಾಯಲ್ಸ್‌ನಿಂದ I ಬ್ರೆಸ್ಟ್ ಫೀಡಿಂಗ್ ಕುರಿತ I ವಿಶೇಷ ಜಾಗೃತಿ ಕಾರ್ಯಕ್ರಮ I

I ಜೆಸಿಐ ರಾಯಲ್ಸ್‌ನಿಂದ I ಬ್ರೆಸ್ಟ್ ಫೀಡಿಂಗ್ ಕುರಿತ I ವಿಶೇಷ ಜಾಗೃತಿ ಕಾರ್ಯಕ್ರಮ I

ಶಿವಮೊಗ್ಗ : ನಗರದ ರಾಗಿಗುಡ್ಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಫ್‌ಪಿಎ ಸಂಸ್ಥೆಯ ಸಹಯೋಗದೊಂದಿಗೆ ಜೆಸಿಐ ಶಿವಮೊಗ್ಗ ರಾಯಲ್ಸ್ ಘಟಕದಿಂದ ಗರ್ಭಿಣಿ ಸ್ತ್ರೀಯರಿಗೆ ಉಪಯುಕ್ತವಾದ ಬ್ರೆಸ್ಟ್ ಫೀಡಿಂಗ್ ಕುರಿತಂತೆ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಎಫ್‌ಪಿಎ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಯಾದ ಪುಷ್ಪ ಶೆಟ್ಟಿಯವರು ಉಪಸ್ಥಿತರಿದ್ದು, ತಾಯಿಯ ಹಾಲು ಹುಟ್ಟಿದ ಮೊದಲ ಆರು ತಿಂಗಳು ಮಗುವಿಗೆ ಸಂಪೂರ್ಣ ಆಹಾರವಾಗಿದ್ದು, ಮಗುವಿನ ಆರೋಗ್ಯದ ಬೆಳೆವಣಿಗೆಗೆ ಹಾಗೂ ರೋಗ ನಿರೋಧಕ ಶಕ್ತಿಗೆ ಎಷ್ಟು ಸಹಾಯಕವಾಗಿರುತ್ತದೆ ಎಂಬುದರ ಬಗ್ಗೆ ಅತ್ಯಂತ ಮಾಹಿತಿ ಪೂರಿತವಾಗಿ ನುಡಿದರು.

ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಶಿವಮೊಗ್ಗ ಹಾಲ್ಕೊಳದ ಸಖಿ ವನ್ ಸ್ಟಾಪ್ ಸೆಂಟರ್‌ನ ಅಡ್ಮಿನಿಸ್ಟ್ರೇಟರ್ ಅಕ್ಷತಾ ರವರು, ಮಹಿಳೆಯರ ಮೇಲಿನ ಹಿಂಸೆ, ಮಾನಸಿಕ, ದೈಹಿಕ ಮತ್ತು ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯರಿಗೆ ವನ್ ಸ್ಟಾಪ್ ಸೆಂಟರ್ ನೀಡುವ ಸೇವೆಗಳಾದ ವೈದ್ಯಕೀಯ ನೆರವು, ನ್ಯಾಯ ಸಹಾಯ, ತಾತ್ಕಾಲಿಕ ಆಶ್ರಯ ಕುರಿತು ಸಮಗ್ರ ಮಾಹಿತಿ ನೀಡಿದರು.

ಹಾಗೂ ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ರಮ್ಯಾ ರವರು ಮಕ್ಕಳಿಗೆ ಅತ್ಯಂತ ಸೂಕ್ತವಾದ ಗುಡ್ ಟಚ್, ಮತ್ತು ಬ್ಯಾಡ್ ಟಚ್ ಕುರಿತು ಮಾಹಿತಿ ನೀಡುವ ಮೂಲಕ, ಮಕ್ಕಳ ಭದ್ರತೆ ಕುರಿತು ಮಹತ್ವದ ಅರಿವು ಮೂಡಿಸಿದರು.

ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ ಮಾಡಿರುವ ರಾಯಲ್ ಘಟಕದ ಲೇಡಿ ಜೆಸಿ ಗಿರಿಮಲ್ಲಿಕಾ ಅವರಿಗೆ ಅಭಿನಂದನೆ ತಿಳಿಸಲಾಯಿತು, ಸಂವೇದನಾಶೀಲ ಹಾಗೂ ಜಾಗೃತಿ ಮೂಲಕ ಕಾರ್ಯಕ್ರಮವನ್ನು ಆಯೋಜನೆ ಮಾಡಿದ ಜೆಸಿಐ ಶಿವಮೊಗ್ಗ ರಾಯಲ್ಸ್ ಘಟಕವು ತನ್ನ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸಿದೆ ಎಂದು ಘಟಕದ ಅಧ್ಯಕ್ಷರಾದ ಸ್ಮಿತಾ ಮೋಹನ್ ತಿಳಿಸಿದರು, ಕಾರ್ಯಕ್ರಮದಲ್ಲಿ ಘಟಕದ ಜೆಸಿಗಳು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I