Saturday, August 1, 2026
Homeಸಾಹಿತ್ಯI ಬರಹದ ಹಕ್ಕಿ I

I ಬರಹದ ಹಕ್ಕಿ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

ಬರಹದ ಹಕ್ಕಿ

ಬರಹದ ಗೂಡೊಂದು ಕಟ್ಟಿದೆ ತಾಯಿ
ಅದುವೆ ತೂರಿ ಬಂದ ಕಲ್ಲುಗಳ ಲೆಕ್ಕಿಸಲಿಲ್ಲ,
ಪ್ರತಿ-ಪದಗಳಿಡಿದು ಹೊಸೆದ ಗೂಡ ಗೋಡೆ,
ಭಾವದ ಬುಗ್ಗೆಗಳ ತಳಸ್ಪರ್ಶಿಯಾಗಿ ಲೇಪಿಸಿತ್ತು,
ಆತ್ಮಧಾರೆಯ ಲೇಖನಿಗೆ ಕಾವಿನ ಮೈಯೊಡ್ಡಿತ್ತು,

ಕಾಸಿಲ್ಲದ ಬರಹಗಳು, ಅಭಿವ್ಯಕ್ತಿಯ ಸಾರಿತ್ತು,
ವಿಕೃತ ನಾಲಗೆಗಳ ಮುಂದಡಿ ಮೌನದಿ ಆಲಿಸಿತ್ತು,
ಸತ್ಯ-ಮಿಥ್ಯಗಳ ತರ್ಕದಡಿ ಜಗಲಿಗಳ ಮೇಲೇರಿತ್ತು,
ಈ ಗೂಡು ನಿನ್ನದೆ ಒಡಲಿನಾಳದ ಕಾವಣ ಗೊತ್ತೇ,

ತಾಯೇ,ಕಾಯ ಮಸಣದಿ ವಿರಾಜಿಸಿದರೂ…
ಬರೆದ ಸಾಲುಗಳೆಂದಿಗೂ ಅಳಿಸಲಾಗದು,
ಅದೆಲ್ಲವೂ ಶಾಸನವಾಗುವ ತನಕದಿ ಲಗತ್ತಾಗುವೆ,
ಕಾಯಕದ ಕೃತಿಗೆ ಅಣಿಗೊಂಡು, ಅಭ್ಯಾಸಿಯಾಗುವೆ,

ನಾನೀಗ ಎನ್ನೊಳಗೆ ಇಳಿದಿದ್ದೇನೆ,
ಅನ್ಯರುಗಳ ತುಲನೆಗಳಾಚೆಗೆ ಪಯಣಿಸಿದ್ದೇನೆ,
ಉಳಿದಿದ್ದೊಂದೆ ಬಲದ ಗುರುವಿನ ಸಾಂಗತ್ಯ,
ನೋಡು ಹಕ್ಕಿಯ ಬದುಕು ಬದಲಾಗಿದೆ ತಾಯಿ,
ಹರಸಮ್ಮ ಕೊನೆ-ತುದಿಯಲ್ಲಿದ್ದೇನೆ,
-Gara Srinivas

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I