ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಸಿಹಿಮೊಗೆ ಎಂಬ ಹತ್ಯೆಗಳ ನಿಲ್ದಾಣ I
ನಮ್ಮೂರು ಸಿಹಿಮೊಗೆ
ಅಲ್ಲೊಂದು ಹೋರಾಟ, ಚಳುವಳಿಗಳಿತ್ತು,
ಮತ-ಪಂಥಗಳ ಹೊರತಾದ ಜಗಲಿಗಳಿತ್ತು,
ಸಾಂಸ್ಕೃತಿಕ ಸೊಬಗಿನ ಮೇರು ಬಲದಿತ್ತು,
ಇಂದೇನಾಗಿದೆ..? ಕಪಟಿಗಳ ಹೂರಣಗಳಿದೆ,
ಹತ್ಯೆ, ಲಿಟಿಗೇಶನ್, ಸುಫಾರಿಗಳ ಕರಾಳವಿದೆ,
ಆರ್ಥಿಕತೆಯ ಹೂಡಿಕೆಗೆ ಬೆದರಿದ ಸಗಟಿದೆ,
ಮನುಷ್ಯ ಧ್ವೇಷ ಬೆಸೆವ ವೈಟ್ ಕಾಲರಿನ ದಂಡಿದೆ,
ಜಾತಿಗಳ ಮೇಳೈಸುವ, ಧರ್ಮ ಪ್ರಚೋದನೆಗಳಿದೆ,
ಅಭಿವ್ಯಕ್ತಿ ನಾಮಾಂಕಿತದಿರುವ ವಿಷಜಂತುಗಳಿದೆ,
ಆದರೂ ನಮ್ಮೂರು ಸಿಹಿಮೊಗೆ,
ವಿವಿಧತೆಯಲ್ಲಿ ಏಕತೆ ಮೂಡಿಸುವ ವೈವಿದ್ಯತೆಗಳಿದೆ,
ಸೇಡಿನ ದಿಸೆಯ ಸರಣಿ ಹತ್ಯೆಗಳು,
ಕಂಡ ಕಂಡಡೆ ಹೊಸೆವ ಅಕ್ರಮ ಬೇಲಿಗಳು,
ಕೋಮುಧ್ವೇಷ ಬಿತ್ತುವ ಪ್ರತಿ ಹೇಳಿಕೆಗಳು
ಮುಗಿಬಿದ್ದು ಬಿತ್ತರಿಸುವ ಸುದ್ದಿ ಕಾಲಂಗಳು,
ಒಂದಷ್ಟು ಸ್ವಯಂಚಾಲಿತ ಪ್ರೌಡಿಮೆ, ಪ್ರಬುದ್ದತೆಗಳು,
ಇದನ್ನೇ ನಂಬಿ ಬ್ಯಾಲೆನ್ಸ್ ಮಾಡುವ ಪರಗೇಡಿಗಳು,
ಆದರೂ ನಮ್ಮೂರು ಸಿಹಿಮೊಗೆ
ವಿವಿಧತೆಯಲಿ ಏಕತೆ ಮೂಡಿಸುವ ವೈವಿದ್ಯತೆಗಳಿದೆ,
ಕೆಲ ರಾಜಕಾರಣಿಗಳಿಂದ ಜನನ್ಯಾಯ ವಿಫಲ,
ಪೆನ್ನಿಗರು ಅಭಿವ್ಯಕ್ತಿ ಸಾರುವಲ್ಲಿ ಕೋಲಾಹಲ,
ರೌಡಿ ಎಲಿಮೆಂಟ್ಗಳ ದುಂಡಾವರ್ತನೆ ಸಫಲ,
ಪೊಲೀಸರೇಕೆ ಅತೀವ ನೀರವತೆ ತಳೆದ ಮೌನ,
ಎಲ್ಲವೂ ಮತಗುಂಪು, ಸಮುದಾಯಗಳ ಓಲೈಕೆ,
ರಾಜಕೀಯ ಜಾಲದ ಪಾಪದ ಕೂಸಿನ ಒಡಂಬಡಿಕೆ,
ಜನದನಿ ಗಟ್ಟಿಯಾಗಲಿ, ಕಪಟಿಗಳ ಅರಿಯಲಿ..
ಸೌಹಾರ್ದತೆ, ಸಹಬಾಳ್ವೆ, ಏಕತೆಯ ಜಗಲಿಗಳಿರಲಿ
ಇದುವೇ ನಮ್ಮ ಸಿಹಿಮೊಗೆ, ನಮ್ಮ ನಗುಮೊಗೆ.

