I ಕರ್ತವ್ಯನಿರತ ಪೊಲೀಸ್ ಕುಟುಂಬಕ್ಕೆ ಎಲ್ಲಿದೆ ರಕ್ಷಣೆ..?! I ಹಲ್ಲೆ, ಎಪ್.ಐ.ಆರ್ ದಾಖಲು I ಇದು ಗಿರಣಿ ಸದ್ದಿನ ಪ್ರಕರಣ I
ಶಿವಮೊಗ್ಗ : ಗಾಡಿಕೊಪ್ಪದಲ್ಲಿ ಹಿಟ್ಟಿನ ಗಿರಣಿಯನ್ನ ಕಾನೂನು ಬಾಹಿರವಾಗಿ ನಡೆಸುತ್ತಿದ್ದ ಕಾರಣ ದೂರು ನೀಡಿದ್ದಕ್ಕೆ ಪೊಲೀಸ್ ಮತ್ತು ಅವರ ತಂದೆ 78 ವರ್ಷದ ತಂದೆಯವರನ್ನ ಗಿರಣಿಯ ಮಾಲೀಕನೇ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಅಸಲಿಗೆ ಹಲ್ಲೆಗೊಳಗಾದ ಘಟನೆ, ಹಾಗೂ ಬೆದರಿಕೆಯೊಳಗಾಗಿದ್ದು ಓರ್ವ ಕರ್ತವ್ಯನಿರತ ಪೊಲೀಸ್ ಕುಟುಂಬದ ಮೇಲೆ ಎನ್ನುವುದು ಅಚ್ಚರಿ ತರಿಸಿದೆ,
ಎಲ್ಲಿದೆ ಜನರಕ್ಷಣೆ ಮಾಡುವ ಪೊಲೀಸರ ಕುಟುಂಬಕ್ಕೆ ಭದ್ರತೆ ಎನ್ನುವಂತಹ ಪರಿಸ್ಥಿತಿ ಶಿವಮೊಗ್ಗದಲ್ಲಿ ನಿರ್ಮಾಣವಾಗಿದೆ, ಇದೀಗಷ್ಟೆ ನೂತನ ಎಸ್ಪಿ ಬಿ.ನಿಖಿಲ್ ರವರು ವರ್ಗಾವಣೆಯಾಗಿ ಬಂದಿರುವ ನಿಮಗೆ ನಗರದ ಕ್ರೈಂ ಲೋಕ ಅದೆಷ್ಟರ ಮಟ್ಟಿಗೆ ಯಾರಿಗೂ ಬೆದರದೆ ಅಮರಿಕೊಂಡಿದೆ ಎನ್ನುವುದು ಗೊತ್ತು ಮಾಡಿಕೊಳ್ಳಬೇಕಾಗಿರುವ ಅತೀ ಸೂಕ್ಷ್ಮಾತಿ ಸೂಕ್ಷ್ಮ ಜರೂರತ್ತಿದೆ,
ಈ ಪ್ರಕರಣವೂ ಇಂತಿದೆ : ಗಾಡಿಕೊಪ್ಪದಲ್ಲಿ ರಂಗೇಗೌಡ ಎಂಬಾತ ಲಕ್ಷ್ಮೀ ನಾರಾಯಣ ಎಂಬ ಹೆಸರಿನಲ್ಲಿ ಹಿಟ್ಟಿನ ಗಿರಣಿ ನಡೆಸುತ್ತಿದ್ದು ಹಿಟ್ಟಿನ ಗಿರಣಿಯನ್ನ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರಪೇಕ್ಷಣಾಪತ್ರ ಪಡೆಯದೆ ನಡೆಸಲಾಗುತ್ತಿದೆ. ಈ ಹಿಟ್ಟಿನಗಿರಣಿ ಹೆಚ್ಚಿನ ಡೆಸಿಬಲ್ ಶಬ್ದವನ್ನ ಹೊರಹಾಕುತ್ತಿದೆ ಎಂದು ಶೇಖರಪ್ಪ ಮತ್ತು ಅವರ ಪುತ್ರ ಪೊಲೀಸ್ ಆದ ರಮೇಶ್ ಸಹ ದೂರು ನೀಡಿದ್ದರು.
ಶೇಖರಪ್ಪನವರಿಗೆ ವಯೋ ಸಹಜ ಖಾಯಿಲೆಯಿದ್ದು ಈ ಗಿರಣಿಯ ಶಬ್ದದಿಂದ ಅವರ ಆರೋಗ್ಯವೂ ಏರುಪೇರು ಕಾಣಿಸಿತ್ತು. ಈ ಪ್ರಕರಣವನ್ನ ಶಾಸಕರ ಬಳಿ ಡಿ.30 ರಂದು ರಮೇಶ್ ಶೇಖರಪ್ಪ ವಿವರಣೆ ನೀಡುತ್ತಿರುವ ವೇಳೆ ಅಲ್ಲಿಗೆ ಬಂದ ಗಿರಣಿಯ ಮಾಲೀಕ ರಂಗೇಗೌಡ ಮತ್ತು ಸಹೋದರ ಕಿರಣ್, ಹಲ್ಲೆಗೆ ಮುಂದಾಗಿದ್ದಾರೆ ಎಂದು ದೂರಲಾಗಿದೆ.
ಪರಿಸರ ಇಲಾಖೆ, ಮೆಸ್ಕಾಂ, ಇಲಾಖೆಗೆ ದೂರು ನೀಡ್ತೀರ ನೀಡಿ, ನಾವು ಗಿರಣಿಯನ್ನ ಹೇಗೆ ನಡೆಸಬೇಕು ಗೊತ್ತಿದೆ ಎಂದು ಜೀವಬೆದರಿಕೆ ಹಾಕಲಾಗಿದೆ ಎಂದು ತಂದೆ ಮಗ ತುಂಗಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನನ್ವಯ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿ ದಾಖಲಾಗಿದೆ, ಇನ್ನೂ ಶಿವಮೊಗ್ಗದಲ್ಲಿ ದುಂಡಾವರ್ತನೆಗಳಿಗೆ ಎಡೆಮುರಿ ಕಟ್ಟದಿದ್ದೊಡೆ, ಕ್ರೈಂ ಇಸ್ಟರಿ ಇನ್ನಷ್ಟು ದುಪ್ಪಟ್ಟು ದುಬಾರಿಯಾಗಿ ನಾಗರೀಕ ಸಮಾಜವನ್ನು ಅಣಕಿಸದೇ ಇರಲಾರದು,







