Saturday, August 1, 2026
HomeಅಂಕಣI ಶಿವಮೊಗ್ಗದಲ್ಲಿರುವ ಅನಾಹುತಕಾರಿ ಅಂಡರ್‌ವರ್ಲ್ಡ್ I ಲವ,ಕುಶ ಎನ್ನುವ ನಟೋರಿಯಸ್ ಅವಳಿಗಳ ಹತ್ಯೆ I

I ಶಿವಮೊಗ್ಗದಲ್ಲಿರುವ ಅನಾಹುತಕಾರಿ ಅಂಡರ್‌ವರ್ಲ್ಡ್ I ಲವ,ಕುಶ ಎನ್ನುವ ನಟೋರಿಯಸ್ ಅವಳಿಗಳ ಹತ್ಯೆ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಶಿವಮೊಗ್ಗದಲ್ಲಿರುವ ಅನಾಹುತಕಾರಿ ಅಂಡರ್‌ವರ್ಲ್ಡ್ I ಲವ,ಕುಶ ಎನ್ನುವ ನಟೋರಿಯಸ್ ಅವಳಿಗಳ ಹತ್ಯೆ I

ಹಿಂದಿನ ಒಂದು ಹಂತದ ಸ್ಟೋರಿಯನ್ನು ಮುಂದುವರೆಸಿ, ಟಿಪ್ಪಣಿಯೊಂದನ್ನು ಇಲ್ಲಿ ಉಲ್ಲೇಖಿಸಿ ಸ್ಪಷ್ಟಿಕರಿಸಲಾಗುತ್ತಿದೆ, ಇಂತಹ ಕ್ರೈಂ ಲೋಕದ ಬರಹಗಳಿಂದ ಓದುಗರ ಜಗಲಿಗೆ ಇನ್ಯಾವ ಉಪಯುಕ್ತ ಅಲ್ಲದಿದ್ದರು, ವಾಸ್ತವ ಘಟಿತ ಘಟನೆಯನ್ನು ತಿಳಿದುಕೊಳ್ಳುವ ಜರೂರತ್ತಿದೆ, ಏಕೆಂದರೆ ಅಸಲಿ ಘಟನೆ ಇದೇ ಎಂದುಕೊಂಡವರಿಗೆ ವಾಸ್ತವದಲ್ಲಿ ಅದು ಬಹುತೇಕವಾಗಿ ತಿರುಚಲಾಗಿರುತ್ತದೆ ಎನ್ನುವ ನಿಖರಾಂಶಗಳು ಇಂದಿಗೂ ಮರೆ ಮಾಚುತ್ತಲೇ ಇದೆ, ಯಾರು ಕಲಿಯುಗದ ಕರ್ಣ ಎಂದೇ ಬಣ್ಣಿಸಲಾಗುತ್ತಿದಿಯೋ ಅದೇ ವ್ಯಕ್ತಿ ಮತ್ತೊಂದು ಮುಖದ ಕರಾಳತೆ ಬೆಚ್ಚಿ ಬೀಳಿಸುವುಂತಹದ್ದಾಗಿದೆ, ಇಂತಹ ಮುಖವಾಣಿಗಳನ್ನು ಬೆತ್ತಲುಗೊಳಿಸಿದರೆ ನಿಜಕ್ಕೂ ಪ್ರಬುದ್ದ ಸಮಾಜಕ್ಕೊಂದು ಅರ್ಥ ಬರುತ್ತದೆ, ಇಲ್ಲವಾದೊಡೆ ಅದೊಂದು ನಿರರ್ಥಕ ಎಂದೇ ಭಾವಿಸುತ್ತೇನೆ ಎನ್ನುವ ವಿಷಯ ಆಧಾರಿತ ಈ ಸಾಲುಗಳೊಂದಿಗೆ ಅಂದು ಲವ-ಕುಶ ಎನ್ನುವ ನಟೋರಿಯಸ್ ಪೈರ್ ಬ್ರಾಂಡ್ ಗಳ ಕುರಿತಾಗಿ ವಿಸ್ತೃತವಾಗಿಸುತ್ತಿದ್ದೇನೆ.

 ಶಿವಮೊಗ್ಗದ ನಟ್ಟ ನಗರಿ, ಅಪರಾಹ್ನ ಮೂಡುವ ಹೊತ್ತದು, ಡಾರ್ಕ್ ಬ್ಲೂ ಬಣ್ಣದ ಮಾರುತಿ ಥೌಸಂಡ್ ಕಾರಿನಲ್ಲಿ ನಟೋರಿಯಸ್ ಪೈರ್ ಬ್ರಾಂಡ್‌ಗಳಾದ ಲವ-ಕುಶರವರುಗಳು ಎಂದಿನಂತೆ ಅಶೋಕ ನಗರದ ೬ನೇ ತಿರುವು ಕೆರೆ ಅಂಗಳದಲ್ಲಿದ್ದ ಅವರ ಮನೆಯ ಸೂರಿನಿಂದ ಉಪ್ಪಿಟ್ಟು ತಿಂದು ಹೊರಟಿದ್ದರು, ಬಲಭಾಗದಲ್ಲಿದ್ದ ಚಾನೆಲ್ ದಂಡೆಯ ಹಾದಿಯಿಂದ ಕಾರಿನಲ್ಲಿ ಹೋಗುತ್ತಿದ್ದಂತೆಯೇ ಎದುರಿಗೆ ಬಂದವರಿಗೆಲ್ಲಾ ಹೋಯೋ, ಏಯ್ ಎಂದು ಮಾತಾಡಿಸುತ್ತಲಿ ಸಾಗಿ ಸುರಂಗ ದಾಟಿದ್ದರು, ಅಂದು ಆಗಸ್ಟ್ ೨೦೦೬ ಇಸವಿ ತಮ್ಮ ಡೆತ್ ಡೇಟಿನ ಕ್ಷಣಮಾನದತ್ತ ಹೋಗುತ್ತಿದ್ದೇವೆ ಎನ್ನುವ ಸಣ್ಣದೊಂದು ಸುಳಿವು ಅವರಿಗೆ ದೇವರಾಣೆಗೂ ಇರಲಿಲ್ಲ,

ಹೀಗೆ ಕಾರಿನಲ್ಲಿ ಬಂದವರು ಇನ್ನೇನು ಜೆಪಿ ನಗರದ ರಸ್ತೆಯಿಂದ ಸಾಗರ ರೋಡ್‌ನಲ್ಲಿ ತಿರುವಿನಲ್ಲಿದ್ದಾಗಲೇ ಯಮಹ-೧೦೦ ದ್ವಿಚಕ್ರ ವಾಹನದಲ್ಲಿ ಎಪಿಎಂಸಿ ಕಡೆ ಹೋಗುತ್ತಿದ್ದವನಿಗೆ ಕೈ-ಬೀಸಿ ಕರೆದಿದ್ದರು ಟಿ-ಕುಡಿಯೋಣ ಬ್ರದರ್ ಅಲ್ಲಿಗೆ ಬರ್ರೀ ಎಂದು ಕೂಗಿ ಹೇಳಿದ್ದು ಇದೀಗಲು ನೆನೆವಿದೆ, ಅದೊಂದು ಟಿ-ಕಾಫಿಗಾಗಿ ಮಾಮೂಲಿ ಅಡ್ಡೆ ಮಾಡಿಕೊಂಡಿದ್ದರು ಎಂಎಡಿಬಿ ಕಟ್ಟಡದ ಮುಂಭಾಗದಲ್ಲಿದ್ದ ಶಿವಶಕ್ತಿ ಆಟೋಮೊಬೈಲ್ಸ್ ಅಂಗಡಿ, ಪಕ್ಕದಲ್ಲಿಯೇ ಇದ್ದ ಕಾಫಿ ಕೆಪೆ, ಸರಿ ಬರುವೆ ಎಂದೇಳಿ ಎಪಿಎಂಸಿ ತಲುಪಿ ಕೇವಲ ಇಪ್ಪತ್ತು ನಿಮಿಷಗಳು ಕಳೆದಿರಲಿಲ್ಲ, ಅಷ್ಟೊತ್ತಿಗಾಗಲೇ ಶಶಿಕುಮಾರ್ ಬಸ್‌ನಲ್ಲಿ ಪಯಣಿಸುತ್ತಿದ್ದ ಮೆಡಿಕಲ್ ರೆಪ್ ಸ್ನೇಹಿತರೊಬ್ಬರು ತಿಳಿಸಿದ್ದನ್ನು ಕೇಳಿ ಗಾಬರಿ ಹುಟ್ಟಿಸಿತ್ತು, ಏನೇ ಆಗಲಿ ಪರಿಚಯವಿದ್ದವರು, ಎನ್ನುವ ಕಯ್ಯಾಲಿಯಲ್ಲಿ ಬರಬರನೇ ಬಂದು ಹಿಂತಿರುಗಿ ಬಂದು ನೋಡುವಲ್ಲಿ ಶಿವಶಕ್ತಿ ಆಟೋಮೊಬೈಲ್ ಅಂಗಡಿಯೊಳಗೆ ಕುಶನ ತಲೇ ಸೀಳಿ ಹಾಕಿದ್ದರು, ಹೊರಗಡೆ ಅಂಗಳದಲ್ಲಿ ಲವನ ಮೇಲೂ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು,

ಈ ಇಪ್ಪತ್ತು ನಿಮಿಷದೊಳಗೆ ಒಂದಿಷ್ಟು ಪತ್ರಕರ್ತರು ಅಲ್ಲಿಗೆ ಬಂದಿದ್ದರು ಪೋಟೋ ಕ್ಲಿಕ್ ಮಾಡುತ್ತಿದ್ದರು, ಓರ್ವ ಪತ್ರಕರ್ತರ ಕೈಯಲ್ಲಿ ಡೈರಿ ಇತ್ತು, ಅವರು ಕೂಡ ಇಂತಿವ ನಟೋರಿಯಸ್‌ಗಳ ಸ್ಥಿತಿಯನ್ನು ಕಣ್ಣಾರೆ ನೋಡಿ ಸಮಾಧಾನ ಬಿತ್ತಿದ್ದ ಮುಖಭಾವ ವ್ಯಕ್ತವಾಗುತಿತ್ತು, ಪೊಲೀಸರು ಅವರ ಕೆಲಸ ಮಾಡುತ್ತಿದ್ದರು, ಸ್ಪಾಟ್‌ನಲ್ಲಿಯೇ ನೆತ್ತರುಬಸಿದುಕೊಂಡು ಬರ್ಬರವಾಗಿ ಹತ್ಯೆಯಾಗಿದ್ದ ಕುಶನ ಶವವನ್ನು ಶವಗಾರಕ್ಕೆ ಕಳುಹಿಸಿದರೆ, ಇನ್ನೂ ಉಸಿರಾಡುತ್ತಿದ್ದ ಲವನನ್ನು ಸ್ಥಳೀಯ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಅಲ್ಲಿಯು ದೊಡ್ಡಪೇಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಬಾಂಡ್ಲಿ ಜಗದೀಶ್ ಬೇಕಂತಲೇ ಲವನನ್ನು ವಿಚಾರಣೆ ನೆವದಲ್ಲಿ ಮಾತಾಡಿಸುತ್ತಿದ್ದರು, ಏನಪ್ಪ ಯಾರು ಹೊಡೆದ್ರು ನಿಮಗೆ ಗೊತ್ತಿದಿಯಾ..? ಎಂದು ಕೇಳುತ್ತಿದ್ದರು, ಈತನ ಕೇಳುಗತನಕ್ಕೆ ಸಾವು ಎದುರಿದ್ದರು ಇನ್ನಿಲ್ಲದ ಕೊಂಚ ಭಯವಿಲ್ಲದೇ ಉತ್ತರಿಸಿದ್ದ ಲವ, ನನಗೊತ್ತಿದೆ, ಏನು ಮಾಡಬೇಕೆಂದು ನಿನ್ನತ್ರ ಹೇಳುವ ಅವಶ್ಯಕತೆಯಿಲ್ಲ ಎಂದು ಕಣ್ಣು ಬಿಟ್ಟು ಖಾಕಿಗೆ ಎದುರಿಸಿದ್ದ, ಏಕೆಂದರೆ ಇದರ ಅಸಲಿ ವರಾತಗಳು ಲವನಿಗೆ ಗೊತ್ತಿತ್ತು, ಹೀಗಾಗಿಯೇ ಬಾಂಡ್ಲಿ ಜಗದೀಶ್‌ಗೆ ಯಾವ ಕಿಮ್ಮತ್ ನೀಡಿರಲಿಲ್ಲ,

  ಇದು ಮುಂದುವರೆದರೆ ಆಪತ್ತಿದೆ, ಲವನೆಂದಿಗೂ ಬದುಕುಲೇ ಬಾರದು ಎನ್ನುವ ಮೋಸ್ಟ್ ಟೆರರ್ ಆಗುತ್ತಾನೆ ಎನ್ನುವುದು ಹಾಗೂ ಅಸಲಿ ಸ್ಟೋರಿ ಹೊರಬಾರದು ಎನ್ನುವ ಕಾರಣಕ್ಕಾಗಿಯೇ ಅಂದು ಆತನಿಗೆ ಬದುಕುಳಿವ ಎಲ್ಲಾ ಸಾಧ್ಯತೆಗಳಿದ್ದರು ಬ್ಲಡ್ ನೀಡದೆ ಸಾಕಷ್ಟು ಸಮಯ ವ್ಯಯ ಮಾಡಿಸಿ, ಆಂಬ್ಯುಲೆನ್ಸ್‌ನಲ್ಲಿ ಮಣಿಪಾಲ್‌ಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿದ್ದರು, ಮಾರ್ಗ ಮಧ್ಯದಲ್ಲಿಯೇ ಆತನು ಅಸುನೀಗಿದ್ದನು, ಇದೊಂದು ಪೂರ್ವಯೋಜಿತ ಪ್ಲಾನ್ ಎನ್ನುವುದು ಇಂದಿಗೂ ಬೆತ್ತಲಾಗಲೇ ಇಲ್ಲ, ಗೊತ್ತಿದ್ದವರು ಕುಟುಂಬದವರಿಗೂ ತಿಳಿಸದೇ ಪ್ರತಿಭಟಿಸಲೇ ಇಲ್ಲ, ಇದಕ್ಕೆ ಮೂಲ ಕಾರಣ ಅವರು ನಟೋರಿಯಸ್‌ಗಳೆನ್ನುವುದು ಗೊತ್ತು ಮಾಡಿಕೊಂಡಿದ್ದರು.

ಹೀಗಾಗಿಯೇ ದೊಡ್ಡಪೇಟೆ ಪೊಲೀಸರು ತನಿಖೆ ಮಾಡದೆ, ಅವರಿಗೆ ಪ್ರಾಥಮಿಕ ಹಂತದಲ್ಲಿಯೇ ತಿಳಿದು ಬಂದ ಮಾಹಿತಿಯಂತೆ ಒಂದು ನಿವೇಶನದ ಕಾರಣಕ್ಕಾಗಿ ವ್ಯಾಜ್ಯಗಳಿತ್ತು, ಅದು ಹಂದಿ ಅಣ್ಣಿಯವರ ಕುಟುಂಬಕ್ಕೆ ಸೇರಿದ್ದಾಗಿದ್ದು, ಆಗಾಗ್ಗೆ ಹಂದಿ ಅಣ್ಣಿಗೆ ಛೇಡಿಸುತ್ತಿದ್ದರು, ಬೈಯುತ್ತಿದ್ದರು, ಬೆದರಿಸುತ್ತಿದ್ದರು ಎನ್ನುವ ಸಣ್ಣದೊಂದು ಕಾರಣಗಳೇ ಇಷ್ಟೊಂದು ಬೀಕರ ಜೋಡಿ ಹತ್ಯೆ ನಡೆದು ಬಿಟ್ಟಿತೇ..?! ಎನ್ನುವ ಗುಮಾನಿಗಳು ನಾಗರೀಕ ವಲಯಕ್ಕೂ, ಅಂದಿನ ಅರೆಬೆಂದ ಭೂಗತ ಲೋಕಕ್ಕೂ ಮೂಡಿರಲಿಲ್ಲ, ಹೀಗಾಗಿ ಹಂದಿ ಅಣ್ಣಿ ಆತನ ಸಹಚರರಾದ ಏಳು ಜನರ ಮೇಲೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಯಿತು, ಮುಂದುವರೆದಂತೆ ಯಾವುದೇ ಬೇಸ್ ತನಿಖೆ ಕೈಗೊಳ್ಳದೆ ಚಾರ್ಜ್‌ಶೀಟ್ ಕೂಡ ದಾಖಲಿಸಿ ಕೇಸಿನ ಕಡತಕ್ಕೆ ಇತಿ ಹಾಡಲಾಯಿತು,

ಹೇಳಿ ನೀವು ಓದುತ್ತಿದ್ದರೆ ಒಂದು ನಿವೇಶನದ ವ್ಯಾಜ್ಯ, ಬೀಕರ ಜೋಡಿ ಹತ್ಯೆಗೆ ಕಾರಣವಾಯಿತೇ..?! ಹತ್ಯೆಯಾದವರು ಸಾಮಾನ್ಯರಲ್ಲ ಅವರು ಕರ್ನಾಟಕಕ್ಕೆ ಗೊತ್ತಿದ್ದ ಮೋಸ್ಟ್ ವಾಂಟೆಡ್ ಟೆರರ್ ಅವಳಿಗಳು, ಫೈರ್ ಬ್ರಾಂಡ್ ಬ್ರದರ್‍ಸ್ ಎಂದು ಉವಾಚಿಸುತ್ತಿದ್ದವರು, ಅಂದು ಏನೂ ಅರಿಯದ ಪಾತಕ ಲೋಕಕ್ಕೆ ಎಂಟ್ರಿ ಕೊಟ್ಟಿದ್ದವರ ಕೈಲಿ ಲಾಂಗ್-ಮಚ್ಚುಗಳು ಹೀನಾಡಿ ಗುರುತರವಾದ ಒಡೆತಗಳನ್ನು ಒಡೆಯಲು ಸಾಧ್ಯವೇ..?! ಎಂದು ಪ್ರಶ್ನಿಸಿಕೊಳ್ಳಬೇಕಾಗಿದ್ದ ಎಸ್‌ಐ ಜಗದೀಶ್ ಹಾಗೂ ಎಸ್ಪಿ ಅರುಣ್ ಚಕ್ರವರ್ತಿ ಅದ್ಯಾಕೆ ವೈಡನ್ ವಿಚಾರಣೆ ನಡೆಸದೇ ಮೌನವಾಗಿದ್ದರು ಎನ್ನುವುದಕ್ಕೆ ಹಲವು ಎಂಟ್ರಿಗಳು ಬಡ್ತಿ ಪಡೆದಿದ್ದವು, ಅದರಲ್ಲಿ ವೈಟ್ ಕಾಲರ್ ನೆರಳಿತ್ತು, ಇದೇ ನೆವದಲ್ಲಿ ಮತ್ತೊಬ್ಬ ಸುಫಾರಿ ಪಾತಾಕಿಯ ಎನ್‌ಕೌಂಟರ್‌ಗೆ ಸಿದ್ದತೆ ಮಾಡಿಕೊಳ್ಳಬೇಕಿತ್ತು, ದೂರದ ಬೆಂಗಳೂರಿನಿಂದ ಬಂದ ಕಾಲ್‌ಗಳು ಈ ಅವಳಿ ಹತ್ಯೆ ಕೇಸಿನ ತಳಸ್ಪರ್ಶಿ ವಿಚಾರಣೆ ನಡೆಸಲು ಅಡ್ಡಗೋಡೆಯಾಗಿತ್ತು, ಈ ಎಲ್ಲಾ ಕಾರಣಗಳಿಂದ ಈ ಕೇಸಿಗೆ ಗೋರಿ ಕಟ್ಟಿ ಮುಗಿಸಲಾಗಿತ್ತು,

ಈ ಅಡ್ಡಗೋಡೆಗಳು ನಿಜಕ್ಕೂ ವಾಸ್ತವದಲ್ಲಿ ನಟೋರಿಯಸ್ ಚಿಂತನೆಗಳೇ ಆಗಿದೆ, ಈ ಫೈರ್ ಬ್ರಾಂಡ್ ಬ್ರದರ್‍ಸ್ ಬದುಕಿದ್ದದ್ದರೆ ಜೆಡಿಎಸ್ ಪಕ್ಷದಿಂದ ಕಾಂಗೈಗೆ ಪಯಣಿಸಿದ ಓರ್ವ ವೈಟ್ ಕಾಲರ್‌ಗೆ ಶಿವಮೊಗ್ಗದ ಹಿಡಿತ ಸಾಧಿಸುವುದಕ್ಕೆ ಸಾಧ್ಯವಾಗುವುದಿಲ್ಲ, ಜೊತೆಗೆ ಅಂದಿನ ಜೆಡಿಎಸ್ ಪಕ್ಷದಲ್ಲಿ ಮುಂಚೂಣಿಯಾಗಿ ಕಾಣಿಸಿಕೊಳ್ಳುವುದಕ್ಕೆ ಶುರುಮಾಡಿದ್ದ ಇದೇ ಲವಕುಶ ಎನ್ನುವ ಅವಳಿ ರೌಡಿಗಳು ಅಂದು ಅಡಕೆಮಂಡಿಯ ವರ್ತಕರಾದ ರಂಗನಾಥ್ ಫಾರಂ ಹೌಸ್ ನಲ್ಲಿ ಮಾಜೀ ಪ್ರಧಾನಿಗಳಿಗೆ ಬೇಟಿ ಮಾಡಿದ್ದರು ಅದಲ್ಲದೆ ಹೆಚ್.ಡಿ ಕುಮಾರಸ್ವಾಮಿಯವರಿಗೂ ಬೇಟಿ ಮಾಡಿ ಬದಲಾಗುತ್ತೇವೆ, ಅಶೋಕ್‌ನಗರದ ೨೬ನೇ ವಾರ್ಡಿಗೆ ನಗರಸಭೆಯ ಸ್ಥಾನಕ್ಕೆ ಟಿಕೆಟ್ ಕೊಡಿ ಸ್ಪರ್ಧಿಸುತ್ತೇವೆ ಎಂದು ಅವಲತ್ತುಕೊಂಡಿದ್ದು ಅಲ್ಲದೆ, ಸಮಾಜದ ಮುಖ್ಯವಾಹಿನಿಗೆ ಬರಲು ಹವಣಿಸುತ್ತಿದ್ದರು, ಇದು ಎಂ.ಶ್ರೀಕಾಂತ್‌ರವರಿಗೂ ಹಿನ್ನಡೆ ತರಿಸಿದ್ದು ಸಹಿಸಲು ಆಗಲಿಲ್ಲ ಎನ್ನುವ ಮಾತುಗಳು ಕೂಡ ತೇಲಿತ್ತು,

ಆದರೆ ಒಂದು ಪೂರ್ವಯೋಜಿತ ಪ್ಲಾನ್‌ನಂತಹ ಕರ್ಮ ಕೂಪಕ್ಕೆ ನಟೋರಿಯಸ್‌ಗಳ ಕರ್ಮವು ಸುತ್ತಿಕೊಂಡು ಅವರುಗಳ ಅಧ್ಯಾಯ ಮುಗಿಸಿತ್ತು, ಎನ್ನುವ ವಾಸ್ತವ ಸಾಲುಗಳ ನಡುವೆ, ಮೊದಲಿನ ನಾಲ್ಕನೇ ಪ್ಯಾರದಲ್ಲಿ ಬರೆಯಲಾಗಿರುವ ಡೈರಿ ಹಿಡಿದುಕೊಂಡು ನೆತ್ತರು ಬಸಿದುಕೊಂಡು ಮಲಗಿದ್ದ ಲವನ ಎದುರಾಗಿ ಬಂದ ಪತ್ರಕರ್ತನೋರ್ವ ನೋಡು ನಿನ್ನ ಕರ್ಮ ಇಂದೇ ಮುಗಿಯುತ್ತಿದೆ ಎಂದು ಹೇಳುವಂತೆ ದರ್ಶಿಸಿದ್ದು ಯಾತಕ್ಕಾಗಿ, ಎಂದರೆ ಅವರು ಬದುಕಿದ್ದ ಸಂದರ್ಭದಲ್ಲಿ ಸಾಕಷ್ಟು ಭಾರಿ ಬೆದರಿಸಿದ್ದರು, ನಿನ್ನ ಒಡೆದು ದೊಡ್ಡ ಮೋರಿಯಲ್ಲಿ ಬಿಸಾಕುತ್ತೇವೆ ಎಂದಿದ್ದರು, ಇದೇ ಮಾತನ್ನು ಸಿಕ್ಕ-ಸಿಕ್ಕವರಿಗೂ ಹೆಗ್ಗಿಲ್ಲದೆ ಹೇಳುತ್ತಿದ್ದರು,

ಇಂತಹ ಬೆದರಿಕೆಗಳನ್ನು ಒಡ್ಡುವುದು, ಬೆದರಿಸುವುದು, ವಸೂಲಿಬಾಜಿ ಮಾಡುವುದು, ನಟೋರಿಯಸ್ ಲವ-ಕುಶರವರಿಗೆ ಮಾಮೂಲಿ ಆಗಿತ್ತು, ಒಮ್ಮೆ ನವರತ್ನ ಇಂಟರ್‌ನ್ಯಾಷನಲ್ ಹೊಟೇಲ್‌ನಲ್ಲಿದ್ದ ವೆಜ್ ಸೆಕ್ಷನ್‌ನಲ್ಲಿದ್ದು ಪೋನಾಯಿಸಿ ಕರೆದಿದ್ದರು,, ಪರಿಚಯ ಇದ್ದವರು ಎಂದು ಹೋದಾಗಲೇ ಅವರ ರಾಕ್ಷಸತ್ವ ಕಂಡಿದ್ದು, ಇದು ನನ್ನ ಕಣ್ಣಾರೆ ಕಂಡ ಅನುಭವಕ್ಕೆ ಬಂದಿತ್ತು, ನೋಡ್ರಿ ಬ್ರದರ್ ಅವರ ವಿಷಯಕ್ಕೆ ಹೋಗದಿರಿ ನೀವು ಪರಿಚಯ ಎನ್ನೋ ಕಾರಣಕ್ಕೆ ಮೌನವಾಗಿದ್ದೇವೆ, ಇನ್ನೂ ಈ ಮ್ಯಾಟರ್ ಇಲ್ಲಿಗೆ ಮುಗಿಯಬೇಕು ಎಂದು ಸಣ್ಣ ಸಂಗತಿಯೊಂದಕ್ಕೆ ಧಮ್ಕಿ ಹಾಕಿದ್ದ ಕುಶನ ಅವತಾರಕ್ಕೆ ಬೇಸರಗೊಂಡ ಲವ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ತಿಳಿಸಿ ಸಮಾಧಾನ ಮಾಡಿದ್ದರು, ಕುಶ ಒಮ್ಮೆಲೆ ಸಿಟ್ಟಿಗೆದ್ದವನಂತೆ, ಗೋಡಾ ತೋರಿಸಿದ್ದ ಇನ್ನು ಮುಂದೆ ಈ ಸಂಗತಿ ಇಲ್ಲೇ ಬಿಟ್ರೇ ಒಳಿತು, ಇಲ್ಲವಾದರೆ ಇದೇ ಗೋಡಾ ಮಾತಾಡುತ್ತೇ ಎಂದು ಬೊಬ್ಬಿಟ್ಟಿದ್ದ, ಇದನ್ನು ನೋಡಿ ಅವಕ್ಕಾಗಿ ಹೋಗಿದ್ದ ನನಗೆ ಅನ್ಯದಾರಿಗಾಣದೆ ಆಯ್ತು ಸರ್ ಎಂದು ಹೊರನಡೆಯಲು ಎದ್ದಾಗ, ಹೇ ಬ್ರದರ್ ಯಾಕ್ ಬೇಜಾರ್ ಕೂತ್ಕೋ ಎಂದು ಲವ ಕೈಹಿಡಿದು ಕೂರಿಸಿ, ಗಸಗಸೆ ಹಾಲು ಆರ್ಡರ್ ಮಾಡಿದರು, ಅದನ್ನು ಒಟ್ಟಿಗೆ ಕುಡಿದು ತೆರಳಿದ ಮೇಲೆ ಮತ್ತೇ ಅವರನ್ನು ನೋಡಿದ್ದು

ಡಾರ್ಕ್ ಬ್ಲೂ ಕಾರಿನಲ್ಲಿ ಸಾಗರ ರಸ್ತೆಗೆ ತಿರುವು ಮಾಡಿಕೊಂಡು ಹೋಗುತ್ತಿದ್ದವರು ಕೈ ಬೀಸಿ ಟೀ ಕುಡಿಯೋಣ ಬರ್ರಿ ಎಂದು ಕರೆದಾಗಲೇ, ಆದರೇ ವಿಧಿ ಅವರಿಗೆ ಅಲ್ಲಿ ಎಳ್ಳು ನೀರು ಬಿಟ್ಟಿದ್ದು ಇದೇ ವಿಪರ್ಯಾಸ ಅಲ್ಲವೇ, ಬದಲಾಗುತ್ತೇವೆ ಎಂದವರು ಸಮಾಜದ ಮುಖ್ಯವಾಹಿನಿಗೆ ಮತ್ತೆಂದಿಗೂ ಬರಲೇ ಇಲ್ಲ, ಸಣ್ಣ-ಸಣ್ಣ ಎಡವಟ್ಟುಗಳೇ ಮುಂದು ಮಾಡಿಕೊಂಡಿದ್ದರು, ಇಂತಿವುಗಳ ನಡುವೆ ಈ ಬ್ರೂಟಲ್ ಅಟ್ಯಾಕ್ ಅಂಡ್ ಅವಳಿ ಮರ್ಡರ್ ಮಿಸ್ಟರಿಗೆ, ಒಂದೇ ಒಂದು ನಿವೇಶನ ಘಟನೆ ಕಾರಣವಲ್ಲ ಎಂದು ಮನದಟ್ಟಾಗಿದ್ದರೂ, ಅದಕ್ಕೆ ಪೂರಕವಾದ ಮಾಹಿತಿಗಳು ಲಭ್ಯತೆ ಇರಲಿಲ್ಲ, ಇದಾದ ಕೆಲವೇ ವರುಷಗಳಲ್ಲಿ ಅಂದರೆ 2013ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಕೆ.ಬಿ ಪ್ರಸನ್ನಕುಮಾರ್‌ರವರು

          ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಶಾಸಕರಾದ ಅವಧಿಯಲ್ಲಿ ಬೆಂಗಳೂರಿನಿಂದ ಬಂದಿದ್ದ ಒಂದು ವೀಡಿಯೋ ತುಣುಕು ನೋಡಿದಾಗಲೇ ಅನಿಸಿದ್ದು, ಇಲ್ಲ ಇದರ ಹಿಂದೆ ಕಾಣದ ಕೈಗಳಿದೆ, ಇದೊಂದು ಪಕ್ಕಾ ಸುಫಾರಿ ಮರ್ಡರ್ ಎನ್ನುವ ಅಸಲಿ ಕಥಾನಕಗಳಿಗೆ ಪುಷ್ಟಿ ನೀಡಿದ್ದು ಮಾಜಿ ಭೂಗತ ದೊರೆ ಹಾಗೂ ಅಗ್ನಿ ವಾರಪತ್ರಿಕೆಯ ಸಂಪಾದಕ ಅಗ್ನಿ ಶ್ರೀಧರ್‌ರವರು ಬಿಡುಗಡೆ ಮಾಡಿದ್ದ ವ್ಯವಸ್ಥಿತವಾದ ವೀಡಿಯೋ ತುಣುಕು, ಹಾಗೂ ಜೆಡಿಎಸ್ ನಲ್ಲಿ ಹವಾ ಸೃಷ್ಟಿಸಲು ಹೊರಟು ಹೈಕಮಾಂಡ್‌ಗಳ ನಿಕಟವರ್ತಿಗಳಾಗಲು ಹೊರಟಿದ್ದ ಬೆಳವಣಿಗೆಗಳು, ಅಶೋಕ ನಗರದ ೨೬ನೇ ವಾರ್ಡಿಗೆ ನಗರಸಭಾ ಚುನಾವಣೆಗೆ ಮುಂದಾಗಿದ್ದ ಸಂಗತಿ, ಶಿವಮೊಗ್ಗವನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವ ಹಪಾಹಪಿತನಗಳು ಹಾಗೂ ಅತೀ ಮುಖ್ಯವಾಗಿ ಲವಕುಶರವರುಗಳಿಂದ ಕಣ್ತಪ್ಪಿಸಿ ಓಡಾಡಿಕೊಂಡಿದ್ದ ಸುಫಾರಿ ಹಂತಕ ತಮಿಳು ಕುಮಾರನ ಕರಿನೆರಳು ಅದೇ ಶಿವಶಕ್ತಿ ಆಟೋಮೊಬೈಲ್ಸ್ ಅಂಗಡಿಯ ಮುಂದಡಿ ಅಂದು ಮರ್ಡರ್ ಹೊತ್ತಿನಲ್ಲಿ ಹಾಸುಹೊಕ್ಕಿತ್ತು, ಎನ್ನುವ ಅಸಲಿ ಸಂಗತಿಗಳು ಇನ್ನಷ್ಟು ನಿಬ್ಬೆರಗು ಆಗಿಸುತ್ತದೆ, ಏನೇ ಆಗಲಿ ಅವರನ್ನು ಮುಖ್ಯವಾಹಿನಿಗೆ ಮತ್ತೆಂದಿಗೂ ಮರಳಲು ಬಿಡದೇ ಪೂರ್ವಯೋಜಿತ ಸ್ಕೆಚ್ಚಿನಂತೆ ತಿರುಗಿ ಬಾರದ ಊರಿಗೆ ಕಳುಹಿದ ಕಥಾನಕಗಳ ಅಸಲಿ ವರಾತಗಳನ್ನು ಮುಂದಿನ ಹೆಜ್ಜೆಗಳಲ್ಲಿ ವಿಸ್ತ್ರತವಾಗಿಸುವೆ.
                                 -ಮುಂದುವರೆಯುವುದು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I