Monday, August 3, 2026
Homeಸೂರ್ಯಗಗನI ಬ್ಯಾಕೋಡು ಬಳಿ ಹುಲಿ ಕಾಟ | ಹಸು ಕೊಂದ ವ್ಯಾಘ್ರ, I ಬೈಕ್ ಸವಾರನ...

I ಬ್ಯಾಕೋಡು ಬಳಿ ಹುಲಿ ಕಾಟ | ಹಸು ಕೊಂದ ವ್ಯಾಘ್ರ, I ಬೈಕ್ ಸವಾರನ ಮೇಲೆ ದಾಳಿ I

I ಬ್ಯಾಕೋಡು ಬಳಿ ಹುಲಿ ಕಾಟ | ಹಸು ಕೊಂದ ವ್ಯಾಘ್ರ, I ಬೈಕ್ ಸವಾರನ ಮೇಲೆ ದಾಳಿ I

ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬ್ಯಾಕೋಡು ಸುತ್ತಮುತ್ತಲ ಪ್ರದೇಶದಲ್ಲಿ ಹುಲಿ ಕಾಟ ಆರಂಭವಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಪ್ರದೇಶದಲ್ಲಿ ಕಳೆದ ಒಂದು ವರ್ಷದಿಂದ ಗುಡ್ಡಗಳಿಗೆ ಮೇಯಲು ಹೋಗುವ ಹಸುಗಳನ್ನು ಹುಲಿ ಕೊಂದು ತಿಂದಿತ್ತು. ಈಗ ಮತ್ತೆ  ಘಟನೆ ನಡೆದಿದೆ.
ಕಳೆದ ವಾರ ಸ್ಥಳೀಯ ಅಂಬ್ಲಸರದ ರೈತ ಪಾರ್ಶ್ವನಾಥ ಜೈನ್ ಎನ್ನುವವರ ಕೊಟ್ಟಿಗೆ ಸಮೀಪ ಬಂದು ಒಂದು ಹಸುವನ್ನು ಕೊಂದು, ಅಲ್ಪ ಪ್ರಮಾಣದಲ್ಲಿ ತಿಂದು ಹಾಕಿ ಹೋಗಿದೆ.

ಕಳೆದ ಒಂದು ವರ್ಷದಲ್ಲಿ ಪಾರ್ಶ್ವನಾಥ ಜೈನ್ ಅವರಿಗೆ ಸೇರಿದ ಎರಡು ಹಸುಗಳನ್ನು ಹುಲಿ ತಿಂದು ಹಾಕಿತ್ತು. ಈಗ ಮನೆಯ ಬಳಿಗೆ ಬಂದು ಮತ್ತೊಂದು ಹಸುವನ್ನು ಕೊಂದು ಹಾಕಿರುವುದು ಭಯ ಉಂಟು ಮಾಡಿದೆ.
ಅಲ್ಲದೇ ಸಿಗ್ಲು ಸಮೀಪ ಬೈಕ್ ಸವಾರರ ಮೇಲೆ ಹುಲಿ ಆಕ್ರಮಣ ಮಾಡಿದ್ದು, ಅದರೊಂದಿಗೆ ಎರಡು ಮರಿಗಳು ಕಂಡು ಬಂದಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಹುಲಿಯೊಂದಿಗೆ ಮರಿಗಳನ್ನೂ ಸಹ ಸ್ಥಳೀಯರು ಕಂಡಿರುವುದಾಗಿ ಹೇಳಿದ್ದಾರೆ. ಹಾಗಾಗಿ ಹಿನ್ನೀರಿನ ಈ ಭಾಗದಲ್ಲಿ ಹಲವಾರು ಹುಲಿಗಳು ಸೇರಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅಂಬ್ಲಸರ, ಹೆರಾಟೆ, ಹೊನಗಲು, ಮುಚ್ಚಳ್ಳಿ ಹಾಗೂ ಸಿಗ್ಲು ಸಮೀಪ ಇತ್ತೀಚೆಗೆ ಪದೇ ಪದೇ ಹುಲಿ ಕಾಟದಿಂದ ಹಲವಾರು ರೈತರು ಹಸುಗಳನ್ನು ಕಳೆದುಕೊಂಡಿದ್ದಾರೆ.

ಅಲ್ಲದೇ ಕಾಡಿಗೆ ಹೊಂದಿಕೊAಡು ಇರುವ ಈ ಹಳ್ಳಿಗಳಲ್ಲಿ ಹುಲಿಗಳು ಸುಲಭವಾಗಿ ಸ್ಥಳೀಯರ ಮೇಲೆ ದಾಳಿ ಮಾಡುವ ಭಯ ಉಂಟು ಮಾಡಿದೆ. ಈ ಕುರಿತು ಅರಣ್ಯ ಇಲಾಖೆಯ ಗಮನಕ್ಕೆ ತರಲಾಗಿದ್ದು, ಈ ತನಕ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಸ್ಥಳೀಯರ ಆಕ್ರೋಶವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I