Saturday, August 1, 2026
Homeಸಾಹಿತ್ಯI ಬರಹಗಾರನಿಗಿಲ್ಲದ ಭದ್ರತೆ I

I ಬರಹಗಾರನಿಗಿಲ್ಲದ ಭದ್ರತೆ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಬರಹಗಾರನಿಗಿಲ್ಲದ ಭದ್ರತೆ I

ಹೌದು ಅವರು ಬಲಾಡ್ಯರು,
ನಾನೋರ್ವ ಬಲು ದುರ್ಬಲನು,
ಭಾವದಿ ಕಂಬನಿಗಳ ಮಿಡಿವವನು,
ಅವರು ಕೋಟಿ ಕಂತೆಗಳಿಟ್ಟವರು,

ಏನು ಬೇಕಾದರು ಮಾಡಲರ್ಹರು,
ರೌಡಿ ಎಲಿಮೆಂಟರಿಗಳ ಜಗಲಿಗಳವರು,
ಕಾನೂನು, ಅಧಿಕಾರದಂದಣ ಉಳ್ಳವರು,
ಬರಹಗಾರನಾಗಿ ಬರೆಯುವ ಆಗಿಲ್ಲ,

ಸಾಮಾಜಿಕ ನ್ಯಾಯ ಬಯಸುವ ಆಗಿಲ್ಲ,
ಗುರಿ ಮಾಡಿ, ಕಟ್ಟಿ ಹಾಕುವ ಹಪಾಹಪಿ ಯಾಕೆ..?!
ಇಲ್ಲಿನ ಇಂತಿವರಿಗೆ ರಾಜಕೀಯ ಗೊತ್ತಿಲ್ಲ,
ಒಂದೆಡೆ ವಿದ್ರೋಹಿಗಳ ನಂಟು, ಪಾಪದ ಗಂಟು,
ಅಭಿವ್ಯಕ್ತಿ ಕೊಲೆಗೆ ನಿಂದ ಹೊಂಚಿನ ಖದೀಮರು,

ಆದರೂ ಅವರಾಕೆ ಇದುವರೆಗೂ ಗೆಲ್ಲಲಿಲ್ಲ..!?
ಪಾಪ ವ್ಯರ್ಥದ ದಿನಮಾನ, ಇತ್ತಾಳೆ ಆಲಿಕೆಗಳು,
ನೋಟಿಸ್ ಕಳುಹಿ ಬೆದರಿಸಿ, ಹಿಂಡಿ ಇರಿಪ್ಪೆಗೊಳಿಸಿ,
ಅವನೊಬ್ಬ ದುರ್ಬಲನೆನ್ನುವ ಮಿಸ್ಟರಿಗಳು,

ರೌಡಿಗಳ ಛೂ ಬಿಟ್ಟು ಬದುಕು ನಿತ್ರಾಣಗೊಳಿಸಿ,
ಅವನೊಬ್ಬ ಏಕಾಂಗಿ, ಸಾಮಾನ್ಯ, ಮಾರ್ಜಾಲ,
ಆಚ್ಚರಿ ಈ ದುರ್ಬಲ ಎಂದಿಗೂ ಸೋಲಲಿಲ್ಲ,
ಇತ್ತಾಳೆ, ಅವಕಾಶವಾದಿಗಳೂ ಬಿಡಲಿಲ್ಲ,

ಬ್ಯಾಲೆನ್ಸ್ ಡ್ರಾಮದಿ ಕಪಟದ ಪಾತ್ರಧಾರಿಗಳು,
ಸುಳಿವಿಲ್ಲದೆ ದುರ್ಬಲನಿಂದೆಣೆದ ವೇದಿಕೆಗಳು,
ಒಂದೊಮ್ಮೆ ಗೆದ್ದು ಬೀಗಿ ಬಿಡಿ,
ದುರ್ಬಲನ ಸೂರು, ಅಭಿವ್ಯಕ್ತಿ ಮುಗಿದು ಬಿಡಲಿ,
ರಕ್ಕಸರ ಬಿಟ್ಟು ಕೊಚ್ಚಿಸಿ ಬಿಡಿ, ಇಳೆಗೆ ಬರಹದರ್ಪಣವಾಗಲಿ,
ಇನ್ನಷ್ಟು, ಮತ್ತಷ್ಟು ಕಿರುಕುಳ, ಮತ್ಸರದ ದಾಳಿ ಮೀರಲಿ,

ಮುಗಿದು ಹೋಗಲಿ ಈ ಅಭಿವ್ಯಕ್ತಿ ಬರಹಗಳು,

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I