I ಕೃಷಿ ನಗರ ಶಕ್ತಿ ಗಣಪತಿಗೆ I ಅಂಗಾರಕ ಸಂಕಷ್ಟಿಯ ವಿಶೇಷ ಪೂಜೆ I
ಶಿವಮೊಗ್ಗ : ವರ್ಷದಲ್ಲಿ ಕೇವಲ ಒಂದೆರಡು ಬಾರಿ ಬರುವ ಅದರಲ್ಲೂ ಮಂಗಳವಾರ ಬಂದಿರುವ ಅಂಗಾರಕ ಸಂಕಷ್ಟಿ ತುಂಬಾ ವಿಶೇಷ ಈ ದಿನದಂದು ಗಣಪತಿಯನ್ನು ಪ್ರಾರ್ಥಿಸಿ ಪೂಜಿಸಿದರೆ ವಿಶೇಷ ಫಲ ದೊರೆಯುತ್ತದೆ ಎಂದು ಕೃಷಿ ನಗರ ಶಕ್ತಿ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರು ತಿಳಿಸಿದರು,
ನಿನ್ನೆ ರಾತ್ರಿ ಅಂಗಾರಕ ಸಂಕಷ್ಟಿಯ ವಿಶೇಷ ಪೂಜೆ.. ಅಲಂಕಾರ ಹಾಗು ಪಂಚಾಮೃತ ಅಭಿಷೇಕ ಮಾಡಿ ಪೂಜೆ ಸಲ್ಲಿಸಿ
ಭಕ್ತ ಮಹಾಶಯರಿಗೆ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು ಎಂದು ಶ್ರೀ ಶಕ್ತಿ ಗಣಪತಿ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಟಿಡಿ ಅರವಿಂದ್ ತಿಳಿಸಿದರು 500ಕ್ಕೂ ಹೆಚ್ಚು ಭಕ್ತರು ಈ ಅಂಗಾರಕ ಸಂಕಷ್ಟಿಯ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು ಸಮಿತಿಯ ಪದಾಧಿಕಾರಿಗಳು ನಿರ್ದೇಶಕರು ಉಪಸ್ಥಿತರಿದ್ದರು

