Saturday, August 1, 2026
Homeಸಾಹಿತ್ಯI ನನ್ನ ಕೊಲೆಗೈದು ಬಿಡಿ I

I ನನ್ನ ಕೊಲೆಗೈದು ಬಿಡಿ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ನನ್ನ ಕೊಲೆಗೈದು ಬಿಡಿ I

ಬರಹಗಳು ಹೊಗಳಿಕೆಯಾಗಿರಲಿ
ಲಿಟಿಗೇಶನ್ ವಿರುದ್ದ ಅಭಿವ್ಯಕ್ತಿಸದಿರಲಿ,
ಇದಕ್ಯಾವುದು ಧರ್ಮವಿಲ್ಲ, ಜಾತಿಗಳಿಲ್ಲ..!
ಪಂಥಿಯ ತತ್ವಗಳಿಲ್ಲ, ಪ್ರಗತಿಪರತೆಗಳಿಲ್ಲ,

ಕಾಸು, ವ್ಯವಸ್ಥೆಗಳ ಅಡಿ ಆಳುಗಳು,
ಕಾನೂನು ಕಟ್ಟಳೆಗಳ ಮೀರಿ ನಿಂದಿದೆ,
ನೈಜತೆಗಿಲ್ಲಿ ಬೆಲೆ ಇಲ್ಲ, ಕಾಸು ಕಾಸುಗಳೆಲ್ಲ..!
ಇನ್ನೂ ಸಾಕಾಗಿದೆ, ಅಭಿವ್ಯಕ್ತಿಸುವುದಿಲ್ಲ,

ಮಡದಿ-ಮಕ್ಕಳನು ಕುಣಿಕೆಗಳತ್ತ ದೂಡದಿರಿ,
ನಾ ಬರೆವ ಭೂ -ಲಿಟಿಗೇಶನ್ ಪ್ರಕರಣಗಳ ನಿಲ್ಲಿಸುವೆ,
ಪಂಥಿಯ ಮುಖವಾಡಿಗಳ ಕ್ರೂರ ಕ್ರೌರ್ಯ ದರ್ಶಿಸಿದೆ,
ತೀವ್ರಗಾಮಿಗಳ ಪರವಿರುವ ಮಂದಗಾಮಿಗಳಿವರು,
ಯಾರ ಬದುಕುಗಳನು ಬಿಡದೆ ಕೊಲೆಗೈಯುವರು,

ಹೇ ಅಂಬೇಡ್ಕರ ನಿಮ್ಮ ಸಂವಿಧಾನಗಳಿಗೆ ಶರಣು,
ಒಂದೊಮ್ಮೆ ಘನ ಮೌನವಹಿಸಿ ಅವಲೋಕಿಸುವೆ,
ನ್ಯಾಯದ ಪಥ ಎಂದು ಬೊಬ್ಬಿರಿವ ಪ್ರಬುದ್ಧರು
ಅನ್ಯಾಯಗಳ ಬುತ್ತಿ ಆಸ್ವಾದಿಸುವ ಸಮಯ ಸಂದಿಗ್ಧರು,

ಗೊತ್ತು ಮಾಡಿಕೊಂಡೆ, ಕುಟುಂಬದ ಸುಭಿಕ್ಷೆಗಾಗಿ,
ನಾ ಇನ್ನೂ ಲಿಟಿಗೇಶನ್ ಪ್ರಕರಣಗಳ ಅಭಿವ್ಯಕ್ತಿಸುವುದಿಲ್ಲ,
ಬೇಕಿದ್ದರೆ ನನ್ನ ಕೊಲೆಗೈದು ಬಿಡಿ, ತುಂಡು ತುಂಡಾಗಿ ಕತ್ತರಿಸಿ,
ಈ ಕರುಳ ಬಳ್ಳಿಗಳ ಮೇಲೆ ನಿಮ್ಮ ಕ್ರೌರ್ಯ ಬಿತ್ತದಿರಿ,
@Gara Srinivas

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I