Sunday, August 2, 2026
Homeಸಾಹಿತ್ಯI ಗುಳಿ ಚೆಲುವೆ I

I ಗುಳಿ ಚೆಲುವೆ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಗುಳಿ ಚೆಲುವೆ I

ಬೈತಲೆ ಬಿಂದಿಗೆ, ಗುಳಿ ಕದಪಿನ ನೈದಿಲೆ
ಮೋಹಕ ನಯನದಿ ದಿಟ್ಟಿಸಿ
ಈ ಎದೆಯೊಳಗೆ ಭಾವ ಬಿತ್ತಿ
ಚಿಗುರೊಡೆಸದಿರು.

ರಮ್ಯದಿ ಘಮಿಸುವ ಪರಿಮಳ ಸ್ವಾದ
ನೀಳ ನವಿರಾದ ಕೇಶರಾಶಿಯ ಸಾಂಗತ್ಯ,
ಸೊಗಸಿನ ಮೊಗದಾವರೆಯ ಹೊಳಪು
ಕಪ್ಪು ಕಾಡಿಗೆ ರಹದಾರಿ, ಹಚ್ಚ ಹಸಿವಿನ ಮಕರಂದ.
ಜಗ ಮರೆಸುವ ಸುಕೋಮಲತೆ.

ಬಣ್ಣಿಸಲಾರದೇ ಸೊರಗಿ ಸುಣ್ಣವಾಗುವೆ
ನಿನ್ನ ಎದೆಸೂರಿಗೆ ಬಣ್ಣವಾಗುವೆ‌
ಚೆಲುವೆ, ಈ ಭಾವಗಳು ಬುಗ್ಗೆಗಳೆಬ್ಬಿಸಿವೆ‌
ಚಿತ್ತಾರದಿ ಹೊಂಗನಸುಗಳ ಹೆಣೆಯುತ್ತಿವೆ.

ಮೊದಲ ಸಲದಿ ಸುಳಿದ ನಿನ್ನ ಚಿ‌ತ್ರ ಫಲಕ
ಅಂತರಾಳದಿ ಲಗತ್ತಿಸಿದ್ದೇನೆ,
ವಿರಮಿಸದೇ ಚಿಗುರೊಡೆದ ಭಾವಗಳಿಗೆ ಅಂಕುಶವಾಗಿಸು
ನೀ ಮೌನದಿ ಮುಗಳ್ನಕ್ಕರೆ
ಬರೆವ ಸಾಲು ಮುಗಿಯದ ಮುಗಿಲಾದಿತು.
ಕೊನೆಯಿಲ್ಲದ ಎದೆಪುಟಗಳ ಹೊತ್ತಿಗೆಯಾದಿತು.
‌‌‌‌‌‌

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I