Saturday, August 1, 2026
Homeಸಾಹಿತ್ಯI ಅವಳ ಒಡಲು I

I ಅವಳ ಒಡಲು I

I ಅವಳ ಒಡಲು I

ಒಬ್ಬಂಟಿಯಾದಾಗಲೆಲ್ಲ
ಗೊಣಗುತ್ತಲೇ ಇರುತ್ತಾಳೆ ಅಮ್ಮ,
ಅದೆಷ್ಟು ಮಾತಿತ್ತೋ ಅವಳೊಳಗೆ
ಬೈಯುವಾಗಲೆಲ್ಲ ಮಮತೆಯ ಹೆಸರಲಿ
ಬಂಧಿಸಿದಳು ಬೈಗುಳಗಳನು
ಮುದ್ದು ಹೆಚ್ಚಾಗಿ ಕೆಟ್ಟಿತೆಂದು
ಕಣ್ಣಲ್ಲೇ ಹೆದರಿಸಿದಳು ಆಗಾಗ…

ಅದೇನೇನು ಮುಚ್ಚಿಟ್ಟಳೋ
ಖಾಲಿಯಾದ ಅನ್ನದ ಪಾತ್ರೆಯೊಂದಿಗೇ
ತನ್ನ ಹಸಿವೆಯನ್ನೂ,
ಅನೇಕ ಸುಟ್ಟ ಗಾಯಗಳನ್ನು
ಅವಮಾನ, ಅಸಹಾಯಕತೆ, ಕಣ್ಣೀರು
ರೆಕ್ಕೆ ಬಂದ ಹಕ್ಕಿಗಳು
ಗೂಡು ಮರೆತ ದುಃಖವನ್ನೂ…

ಎಳೆತನದಿ ಅವಳೇ ಪ್ರಪಂಚವಾದಾಗ
ಅವಳೊಡನೆ ಮಾತಿತ್ತು ನೂರು
ಬೆಳೆದಾಗ ಹೊರಗಿನ ಕುತೂಹಲದ ನಡುವೆ
ಶೂನ್ಯವಾದಳವಳು,
ಏನೇನೂ ಅರಿಯದ ದಡ್ಡಿಯಾದಳು
ಮಕ್ಕಳ ಮನವರಿಯದ ಮುಗ್ಧೆಯಾದಳು…

ಆಲಿಸು ಗೊಣಗಾಟವ
ಅದೆಷ್ಟು ನೋವು ಹತಾಶೆ
ಶಬ್ಧವಾಗಲು ಸೋತು ಮಲಗಿವೆ
ಪದಗಳಿಗಾಗಿ ತಡಕುತ್ತಾಳೆ,
ಕೇಳುವ ಕಿವಿಗಾಗಿ ಹುಡುಕುತ್ತಾಳೆ
ಶಬ್ಧವಾಗು ಆ ನೀರವ ಲೋಕಕೆ
ಬೆಳಕಾಗು ತಮವ ತುಂಬಿದ ಮನಕೆ…

-ರಶ್ಮಿ ಶಮಂತ್, ಹೊಸನಗರ 

RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I