Saturday, August 1, 2026
Homeಸಾಹಿತ್ಯI ಜಾತಿ-ಧರ್ಮಗಳ ಜಗದೊಳು I

I ಜಾತಿ-ಧರ್ಮಗಳ ಜಗದೊಳು I

ಬರೆಯುತ್ತಾರೆ ಗಾರಾ.ಶ್ರೀನಿವಾಸ್‌

I ಜಾತಿ-ಧರ್ಮಗಳ ಜಗದೊಳು I

ಕಲ್ಲೂರ, ಬೊಮ್ಮನ,
ಮಾದರ, ಸಾಬರ
ಕಿಲಿಸ್ತಾನ್ರು, ಹಜಾಮ್ರು
ಶೆಟ್ಟರ, ಸುಡುಗಾಡು ಸಿದ್ದರ
ಜೀವ ವಿಂಗಡಣೆಯ ನೆಲೆಯಿದು,
ಜಾತಿ,ಧರ್ಮ ನಿಂದನೆಗಳ
ದನಿಯಿದು,
ಜಾತಿ ಹಿಡಿದರು, ಧರ್ಮ ಬಿಟ್ಟರು,
ಧರ್ಮ ಹಿಡಿದರು, ಜಾತಿ ಬಿಟ್ಟರು,
ಮಿಥ್ಯದ ಕೂಗು ಕೂಗಿಗೂ,
ಸೂರುಗಳ ಕಾವಿಟ್ಟರು,

ಬೆತ್ತಲ ಕಾಯಕೆ ಸೊಪ್ಪು-ಸೆದೆಗಳ ಸುತ್ತಿ,
ಹಸಿವ ದಾಹದಿ ಗೆಡ್ಡೆ -ಗೆಣಸು,
ಹಸಿ ಮಾಂಸಗಳ ಭಕ್ಷಿಸಿ,
ಪೊದೆ ಹಸಿರ, ಪ್ರತಿಧ್ವನಿಗಳ
ಆರಾಧಿಸಿ ಸಾಗಿತು,
ಮನುಕುಲವ ವೃದ್ದಿಸಿತು ಅನಾದಿ,
ಕೊಳೆಸಿತು ನಾಗರೀಕತೆಯ ಬುನಾದಿ,

ಮನಸು-ಮನಸುಗಳ
ಅಂತರದಿ, ಕಿಡಿಯ ಹಚ್ಚಿ
ದೈವ-ದೆವ್ವಗಳ ಸೃಷ್ಟಿಸಿ,
ಭಾವ ಬೇಗೆಗೆ ಹುಂಡಿಯಿಟ್ಟು,
ಬೆವರ ಕಿಸೆಗಳಿಗೆ ಕಂದಕವಿಟ್ಟರು,
ಕಂದಾಚಾರದಂದಣದಿ
ಮೊನಚು ಕಂದಲಿಗಳನು
ಶಿರಚ್ಛೇದನಕೆ ಅಣಿಗೊಳಿಸಿ,
ರುಧಿರದನಿಗಳ ತೊಟ್ಟಿಕ್ಕಿಸಿ,
ಬೊಗಸೆ ಬದುಕುಗಳ
ಸಮಾದಿಗೆ ದೌಡಾದರು,

ಅನಾದಿಯ ಕಾಲಗಳು ಕಾಲವಾಯಿತು,
ಮನಸಿನ ಮೃಗಿತನಗಳ ಮೇಳವಾಯಿತು,
ಅಂತರ್ಮುಖಿ ಆತ್ಮರತಿಗಳ ಕತ್ತಲಿಲಿ,
ದೀವಿಗೆಗಳು ಹಾರಿ ಹೋಯಿತು,
ಮಿಂಚು ಹುಳುವಿನಂತೆ ದನಿ ಮೊರೆದು
ಸದ್ದಿಲ್ಲದ ತೆರೆಗೆ ಸರಿಯಿತು,
ಲೋಕ ನಿಂದಿತರ ಜಗದೊಳು
ಜಾತಿ-ಧರ್ಮಗಳ ನೆಲೆಯೊಳು,
ಸತ್ಯವೇ ಹುದುಗಿ ಹೋಯಿತು,

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I