Sunday, August 2, 2026
Homeಸೂರ್ಯಗಗನI ಗಾಜನೂರಿನ ಸಕ್ರೆಬೈಲಿನಲ್ಲಿ I ಮಹ್ಮದ್ ದಸ್ತಗಿರಿ ಮೇಲೆ ಮಾರಣಾಂತಿಕ ಹಲ್ಲೆ I ತುಂಗಾನಗರ ಪೊಲೀಸ್...

I ಗಾಜನೂರಿನ ಸಕ್ರೆಬೈಲಿನಲ್ಲಿ I ಮಹ್ಮದ್ ದಸ್ತಗಿರಿ ಮೇಲೆ ಮಾರಣಾಂತಿಕ ಹಲ್ಲೆ I ತುಂಗಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ ಐ ಆರ್ I

I ಗಾಜನೂರಿನ ಸಕ್ರೆಬೈಲಿನಲ್ಲಿ I ಮಹ್ಮದ್ ದಸ್ತಗಿರಿ ಮೇಲೆ ಮಾರಣಾಂತಿಕ ಹಲ್ಲೆ I ತುಂಗಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ ಐ ಆರ್ I

ಶಿವಮೊಗ್ಗ : ಗಾಜನೂರಿನ ಸಕ್ರೆಬೈಲಿನ ಶಿವಣ್ಣನ ಕ್ಯಾಂಟಿನ್ ನಲ್ಲಿ ಚಹಾ ಕುಡಿಯಲು ನಿಂತಿದ್ದ ಮಹ್ಮದ್ ದಸ್ತಗಿರಿ ಹಾಗೂ ಆತನ ಸ್ನೇಹಿತನ ಮೇಲೆ ನಿಹಾಲ್ ಸೇರಿದಂತೆ ಆರು ಹುಡುಗರ ಗುಂಪು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ನಿನ್ನೆ ರಾತ್ರಿ 8ರ ಹೊತ್ತಿಗೆ ಘಟಿಸಿದೆ,

ಶಿವಮೊಗ್ಗದಲ್ಲಿ ಇದೀಗ ರೌಡಿಸಂ, ಹಲ್ಲೆ, ಬೆದರಿಕೆ, ಕ್ರೈಂ ರೇಟಿಂಗ್ ಸಾಮಾನ್ಯವಾಗಿ ಬಿಟ್ಟಿದೆ, ಇಂತಹ ಸಾಲಿನಲ್ಲಿ ನಿನ್ನೆಯ ಘಟನೆಯು ಸೇರಿಕೊಂಡಿದೆ, ಇನ್ನೂ ಮೀಸೆ ಮೂಡುವ ಹೊತ್ತಿಗೆ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿವ ಕ್ರೇಜಿನಲ್ಲಿ ಯುವ ಸಮುದಾಯ ಮುಗಿ ಬೀಳುತ್ತಿರುವುದು ದುರಂತವಾಗಿದೆ, ಅಲ್ಲದೆ ಪೊಲೀಸ್ ಇಲಾಖೆಯ ಮೇಲಿನ ಸವಾಲುಗಳು ಹೆಚ್ಚಿದೆ,

ಅಸಲಿಗೆ ಮಹ್ಮದ್ ದಸ್ತಗಿರಿ ಎಂಬಾತ ಮಂಗಳೂರಿನಿಂದ ಒಂದು ಕಾರು ಖರಿದಿಸಿ ಅದನ್ನು ರೆಡಿ ಮಾಡಿಕೊಂಡು ಓಡಾಡುತ್ತಿದ್ದನು ಈತನ ಕೆಲಸವು ಕೂಡ ಟಿಂಕರಿಂಗ್ ಹಾಗೂ ವಾಹನ ಡೀಲಿಂಗ್ ಬ್ರೋಕಿಂಗ್ ಮಾಡುವುದು ಆಗಿದೆ, ಇದು ಈತನ ವಹಿವಾಟು, ಆದರೆ ಇದೇ ಕಾರು ತನಗೆ ಬೇಕೆಂದು ಧಮ್ಕಿ ಹಾಕಿ ಸುಮಾರು 3.50000 ರೂ ಮೌಲ್ಯದ ಮಾರುತಿ ರಿಡ್ಜ್ ಕಾರನ್ನು ಅನಾಮತ್ತಾಗಿ ಹಳೆ ಮಂಡ್ಲಿಯಲ್ಲಿರುವ ರೈಸ್ ಮಿಲ್ ಬಳಿ ಹೊಡೆದು, ಕಸಿದುಕೊಂಡು ಏನಾದರೂ ದೂರು ನೀಡಿದರೆ ನಿನ್ನ ಸ್ಟೋರಿ ಮುಗಿಸುತ್ತೇವೆ ಎಂದು ನಿಹಾಲ್ ಮತ್ತು ಆತನ ಗುಂಪು ಜೀವಬೆದರಿಕೆಯೊಡ್ಡಿ ಹೋಗಿರುತ್ತಾರೆ,

ಈ ನಂತರ ದೂರು ನೀಡುವುದಾಗಿ ತಿಳಿಸಿದ್ದ ಮಹ್ಮದ್ ದಸ್ತಗಿರಿ ಭಾನುವಾರ ಸಕ್ರೆಬೈಲಿನಲ್ಲಿರುವ ಪತ್ನಿ ಮನೆಗೆ ಹೋಗಿದ್ದು ಈ ಸಂದರ್ಭದಲ್ಲಿ ಶಿವಣ್ಣನ ಕ್ಯಾಂಟಿನ್ ಬಳಿ ಸ್ನೇಹಿತನೊಂದಿಗೆ ಇರುವುದು ಖಾತ್ರಿ ಪಡಿಸಿಕೊಂಡ ನಿಹಾಲ್ ಮತ್ತು ಆತನ ಗುಂಪು ಹೊಂಚು ಹಾಕಿದಂತೆ ಇವರುಗಳ ಮೇಲೆರಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುತ್ತಾರೆ, ಈ ಘಟನೆ ಘಟಿಸುತ್ತಿದ್ದಂತೆ ಜನರು ಸುತ್ತುವರೆದಿದ್ದು ನೋಡಿ ಪಲಾಯನಗೈದಿರುವ ಕಿಡಿಗೇಡಿಗಳ ಮೇಲೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಎಪ್ ಐ ಆರ್ ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ,

ಹಲ್ಲೆಗೊಳಗಾದ ಮಹ್ಮದ್ ದಸ್ತಗಿರಿ ಹಾಗೂ ಆತನ ಸ್ನೇಹಿತನನ್ನು ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿರುತ್ತಾರೆಂದು ತಿಳಿದು ಬಂದಿದೆ.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I