Saturday, August 1, 2026
Homeಸಾಹಿತ್ಯI ಕೆರೆ ನುಂಗಿದ ಅಕ್ರಮ ಲೇ-ಔಟ್ I

I ಕೆರೆ ನುಂಗಿದ ಅಕ್ರಮ ಲೇ-ಔಟ್ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಕೆರೆ ನುಂಗಿದ ಅಕ್ರಮ ಲೇ-ಔಟ್ I

ಬೇಲಿಯೇ ಎದ್ದು ಹೊಲ ಮೇಯ್ಯುತ್ತಿಹುದು
ಹೀಗೊಂದು ಲ್ಯಾಂಡ್ ಮಾಫಿಯಾ ಕೆರೆ ನುಂಗಿಹುದು,
ಅಕ್ರಮ ಡಿ-ನೋಟಿಪಿಕೇಶನ್ ದಾಖಲೆಗಳಿಹುದು,
ಭೂ ಪರಿವರ್ತನೆಗಳಿಲ್ಲದ ತಕ್ತೆ ದರ್ಶಿಸುತ್ತಿಹುದು,

ಏನೀದರ ಕರಾಮತ್ತು, ಭೂ ಕಬಳಿಕೆದಾರರ ಹಕೀಕತ್ತು,
ಅದೆಷ್ಟು ಸರ್ವೆ ನಂಬರ್ ಗಳ ದನಕ್ಕೆ ಮುಪತ್ತು, ಹುಲ್ಲುಬನಿ,
ಗೋಮಾಳ, ಕರಾಬು ಕಟ್ಟೆ, ಸರ್ಕಾರದ ವ್ಯತ್ಯಾಸ ವಿಸ್ತೀರ್ಣ,
ನುಂಗಿದ ರೌಡಿ ಎಲಿಮೆಂಟರಿಗಳು, ವೈಟ್ ಕಾಲರ್ಗಳು..!

ಚರಿತ್ರೆಯ ಕೆರೆಗಳು ಕಳೆದು ಹೋಗಿದೆ..?
ಲ್ಯಾಂಡ್ ಮಾಫಿಯಾ ಪೋರ್ಜರಿ ಕಡತಗಳಿಗೆ,
ಅಸ್ತೆಂದಿದ್ದಾನೆ ಜಿಲ್ಲಾಡಳಿತದ ಲಲೀತ್ ಕಿಶೋರ್,
ಮೀಸಲು ಭೂ ಪ್ರದೇಶದ ಹೆಗ್ಗಿಲ್ಲದ ಕಬಳಿಕೆಗಳು,
ಮೇವು, ಕುಡಿವ ನೀರಿಗೆ ಬರೆ ಎಳೆದಿಟ್ಟಿದೆ..!

ಜಾನುವಾರು ಬಿಡಾಡಿಗಳಾಗಿ ಬೀದಿಗೆ ಬಿದ್ದಿದೆ,
ಕಸಾಯಿಗಳಿಗಷ್ಟೆ ವಿರೋಧಿಸುವ ಗೋಹತ್ಯೆ ಅಜೆಂಡಾ,
ಗೋವಿನ ಮೀಸಲು ಗೋಮಾಳಗಳ ಉಳಿವಿಗೆ ಸೊಲ್ಲಿಲ್ಲ,
ಘನ ತ್ಯಾಜ್ಯ ತಿಂದುಂಡು ಉಬ್ಬಸ ತುಂಬಿದೆ,
ರಸ್ತೆಗಳಲ್ಲಿರುವ ಜಾನುವಾರು ಅಪಘಾತ ತಂದೊಡ್ಡಿದೆ,
ಮಾನ್ಯ ಬಿಜೆಪಿಗರೇ ನಿಲ್ಲಿಸಿ ಈ ಗೋ ಧೋರಣೆ..?

ಇನ್ನೂ ವಿಸ್ತೃತಗೊಳಿಸುವೇ..?! ದಾಖಲೆಗಳ ಜತೆಗೂಡಿ,
ವೈಟ್ ಕಾಲರ್, ಓರ್ವನ ಅಸಲಿ ದಂಧೆಯ ಕರಾಳತೆಗಳಗೂಡಿ,
ಯಾರಿಗಾಗಿ..? ಯಾವ ಸಾಮ್ರಾಜ್ಯಕ್ಕಾಗಿ ಈ ಧಾರುಣತೆಗಳು,
ರಕ್ಕಸರೂಪಿ ರುದ್ರ ರೌದ್ರತೆಗಳು, ಪಾಪಿ ಕೃತ್ಯಗಳು,
ಓ ಶಿವಮೊಗ್ಗವೇ..?! ಲ್ಯಾಂಡ್ ಮಾಫಿಯಾ ಬೇಕೆ..?!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I