ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಪಾನ್ ಖಾಕಿಯು,
ಮೆಗ್ಗಾನ್ ರವಿಯೂ I
ಒತ್ತಡಕ್ಕೆ ಸಿಲುಕಿತೇ ತನಿಖೆ..?!
ಮೂರು ಭಾರಿ ಕರೆ ಕೆರೆದ ಬತ್ತಳಿಕೆ,
ಖಾಕಿ ಕಿಸೆಗಿಳಿದ ಬೆಳ್ಳಿ ಉರುದಾರ,
ಗೋಲ್ಡ್ ರಿಂಗ್, ಒಂದು ಉಂಗುರ,
ಕತೆಯ ಹೆಣೆದೆಣೆದು ಕಟ್ಟಿತೇ..?!
ಅಪರಾಧಿಯೋರ್ವ ನುಣುಚಬಾರದು,
ನಿರಾಪರಾಧಿಯೊಬ್ಬ ಬಂಧಿತನಾಗಬಾರದು,
ಈ ಪಾನ್ ಖಾಕಿ ಕಥಾನಕದ ಸಗಟಿನ ಗಂಟು,
ತೆರೆದ ಅಂಚೆಯಂತೆ ಬೆತ್ತಲಾಗಬೇಕಿದೆ,
ಸಂವಿಧಾನದ ಮೂಲಭೂತ ಮೌಲ್ಯವೆಲ್ಲಿದೆ..?!
ತನಿಖೆ ಎಂಬುವ ಗೋಜಲಿಲ್ಲಿ ಹಾದಿ ತಪ್ಪಿದೆ,
ಆಯನೂರಿನಿಂದ ಶುರುವಾದ ಪಥಗಳು,
ಬಿಡಾಡಿ ಇಸ್ಪೀಟ್ ಅಡ್ಡೆಯವರೆಗಿನ ಲಗತ್ತುಗಳು,
ಪ್ರಥಮ ವರ್ತಮಾನ ವರದಿಗಳೆಲ್ಲಿ ಕಾಪಿಟ್ಟಿದೆ..?!
ಮಾನವ ಹಕ್ಕುಗಳ ಸಂಗತಿಗಳಿಲ್ಲಿ ದನಿಯಾಗಿದೆ,
ಮೆಗ್ಗಾನ್ ರವಿ ಎಂಬಾತ ಆರೋಪಿ ಹೇಗಾದ ಗೊತ್ತೇ..?!
ಪಾನ್ ಖಾಕಿ ಹರೀಶ್ ಪಾಟೀಲ್ಗೇ ಇಂಚಿಂಚು ಗೊತ್ತಿದೆ,
ಅಂದೊಮ್ಮೆ IPC ಸೆಕ್ಷನ್ ದುರುಪಯೋಗ..!
ಇಂದು BNS ಸೆಕ್ಷನ್ ಡಿರಿಲೇಶನ್ ಡ್ಯೂಟಿನಲ್ಲಿ ನಲುಗಿದೆ,
ಸುದ್ದಿ ಪೇಜುಗಳಲ್ಲಿ ವಿಸ್ತೃತವಾಗಬೇಕಿದೆ,
ತಪ್ಪು ತಪ್ಪೇ, ವಾಸ್ತವಗಳು ಮಾರ್ಧನಿಸಲೇಬೇಕಿದೆ,

