I ಕೂಸಿಗೊಂದು ಮಾತು I
ಋಣಾತ್ಮಕ ಛಾಯೆ
ಗುಣಾತ್ಮಕ ಮಾಯೆ
ಬವಣೆಯ ಬಣವೆಯಾಗಿಸದಿರು
ಸುಡು ಕಾವಿಗೆ ನೀ ಬೂದಿಯಾಗದಿರು.
ಜಗತ್ತಿಗೆ ಜಗುಲಿಯೇ ಜ್ಞಾನಪೀಠ
ಅದುವೇ ಆತ್ಮರತಿಯ ತೀಡುವ ಎದೆಪಾಠ,
ಅರಿವಿನ ಭಾವ -ಕಾವಣಕೆ ತೂತು ಬೀಳದಿರು,
ಬಯಲ ಬೆತ್ತಲಿಗೆ ಬೇಲಿಯಾಗದಿರು.
ಋಣ-ಗುಣಗಳು ಗೌಣವಾಗಿಸದಿರು
ಬಿರು ಬಿಸಿಲನು ಉದರದ ಚರಿಗೆಗೆ ತುಂಬದಿರು,
ನಡೆವ ಬೀದಿಗೆ ಮುಳ್ಳ ಮೊನಚ ನಾಟಿಸದಿರು
ಕಾಯ ಕೊಳೆವ ಕಸವೆನ್ನುವುದನು ಮರೆಯದಿರು.
ಆಸರೆಯ ಇಳೆಯ ಮಡಿಲು ಮೌನವಾಗಿದೆ.
ಉದರದ ಉಸಿರಿಟ್ಟ ತಾಯಿಕಂಗಳು ಕಾದಿದೆ,
ತೀರಿಸಲಾರದ ಋಣವ ಹೊತ್ತು, ಗುಣಗಳ ಬಿತ್ತು
ನಿರುಮ್ಮಳ ಪ್ರೀತಿಯ ಮೊಹರೊತ್ತಿ ಬಿಡು.

