I ನಮ್ಮೂರು ನವಿಲoಗೆ..I
ಅಂದದ ಚಂದದ ತವರೂರು
ಕಬ್ಬಿನ ಸಿಹಿಯಿದು ನಮ್ಮೂರು..
ಬಳುಕುವ ಬಳ್ಳಿಯ ನೋಟವಿದು
ಹೊನ್ನ ಪಚ್ಚೆ ಹಸಿರಿನ ಸೊಬಗಿದು..//
ನಮ್ಮ ಗಾವ ಚಂದನ ಬಲವು
ಗ್ರಾಮ್ಯ ನುಡಿಯೇ ಶ್ರೀಗಂಧವು..
ಹಳ್ಳಿಯ ಕಡೆ ಮಮತೆಯ ನಡೆ
ಕೂಡಿ ಬಾಳುವ ನವನೀತ ಗುಣವು..//
ನಗು ನಗುತ ನಲಿದು ಬಾಳೋಣ
ಖುಷಿಯಲಿ ಕೂಡಿ ನಡೆಯೋಣ..
ಬೆಳೆದ ಧಾನ್ಯದ ರಾಶಿಯ ಮಾಡಿ
ಭೂತಾಯಿಗೆ ಹಾಡಿ ನಮಿಸೋಣ..//
ನಮ್ಮೂರ ಚೆಲುವಿನ ಐಸಿರಿ
ಸೊಗಡು ಕಂಪಿನ ವನಸಿರಿ..
ಬಾಳಿನ ಗುಡಿ ಅರಮನೆಯಂಗೆ
ಬಾಳಕ್ಕೆ ಕುಣಿವ ನವಿಲoಗೆ..//✒️
-ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮಂಡ್ಯ.


ಧನ್ಯವಾದಗಳು ಸರ್ 🌻🌹💐✨👏🏻🙏🏻
ಕವನ ಬಹಳ ಸೊಗಸಾಗಿ ಮೂಡಿ ಬಂದಿದೆ ಸರ್. ಅಭಿನಂದನೆಗಳು 🎉💐💐