I ಅ.31ರಂದು ಹೆಚ್.ಸಿ ಯೋಗೇಶ್ರವರ I ಜೀವೋನ್ಮುಖಿ ನಿಲುವುಗಳು I ಸತತ 75ನೇ ಭಾರಿಗೆ ರಕ್ತದಾನ I
ಶಿವಮೊಗ್ಗ : ರಾಜಕೀಯ ಸಂಗತಿಗಳು ಹೇಗೆ ಕಟ್ಟಿಕೊಳ್ಳಬೇಕು ಎಂದರೆ ಜನಪ್ರಬುದ್ದತೆಯಿಂದ ಜನಸ್ನೇಹಿಯಾಗಿ ಕಟ್ಟಾಳುವಾಗಿ ನಿಲ್ಲಬೇಕು ಎನ್ನುವ ಆ ಕಾಲಘಟ್ಟದ ಮಾತಿನಂತೆ ಈ ಹೊತ್ತಿನ ಶಿವಮೊಗ್ಗದ ಯುವ ರಾಜಕಾರಣಿ ಹೆಚ್.ಸಿ ಯೋಗೇಶ್ರವರು ನಡೆದಿದ್ದಾರೆ ಎನ್ನುವುದಕ್ಕೆ ಸತತ ೭೪ ಭಾರಿ ರಕ್ತದಾನ ಮಾಡಿ ೭೫ನೇ ಭಾರಿಗೆ ರಕ್ತದಾನಕ್ಕಾಗಿ ವಿನೂತನ ಕಾರ್ಯಕ್ರಮವನ್ನು ರೂಪಿಸಿ ನಾಗರೀಕ ಗಮನ ಸೆಳೆದಿದ್ದಾರೆ.
ಅವರದೊಂದು ವೀಡಿಯೋ ತುಣುಕು ಹೀಗೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ, ರಾಜಕೀಯ ಎನ್ನುವುದು ರಕ್ತದಾನ ಮಾಡುವುದರ ಮುಖೇನ ಸ್ವಯಂ ರಕ್ತದಾನಿಯಾಗಿ ಜನಮಾದರಿಯಾಗಿ ಸಂದೇಶವನ್ನು ನೀಡಿರುವುದು ಶ್ಲಾಘನೀಯವಾಗಿದೆ, ಇದೀಗ ಅ.೩೧ರಂದು ಕರ್ನಾಟಕ ಸಂಘದ ಭವನದಲ್ಲಿ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿ ಅಲ್ಲಿ ತಮ್ಮ ೭೫ನೇ ಭಾರಿಯ ರಕ್ತದಾನಕ್ಕೆ ಮುಂದಾಗಿದ್ದಲ್ಲದೆ, ಎಪ್ಪತ್ತೈದು ಜನ ಸ್ನೇಹಿತರು ಒಡನಾಡಿಗಳು ಕೂಡ ರಕ್ತದಾನ ಮಾಡುತ್ತಿರುವುದು ಬಹುದೊಡ್ಡ ಸಾಮಾಜಿಕ ಸಂದೇಶವಾಗಿದೆ,
ರಕ್ತದಾನ ಎಂಬುದು ಜೀವಪರತೆಗಳ ನಿಲುವುಗಳು, ಓರ್ವ ರೋಗಿಯ ಅಥವಾ ತುರ್ತು ವೈದ್ಯಕೀಯ ಸಂದರ್ಭದಲ್ಲಿ ಬದುಕು ಉಳಿಸಬೇಕು ಎಂದೊಡೆ ರಕ್ತದಾನ ಬಹುಮುಖ್ಯ ಪಾತ್ರ ವಹಿಸುತ್ತದೆ, ಇಲ್ಲಿ ನಾಗರೀಕರ ಸಹಕಾರವಿಲ್ಲದೆ ರೋಗಿಯನ್ನು ಉಳಿಸಲು ಸಾಧ್ಯವಿಲ್ಲ ಹೀಗಾಗಿ ರಕ್ತದಾನದ ಬಗ್ಗೆ ಅರಿವು ಮೂಡಿಸುವ ಕೆಲಸಗಳು ಸಮಾಜಮುಖಿ ಮನಸುಗಳು ನಿರಂತರವಾಗಿ ಕೆಲಸ ಮಾಡುತ್ತಲೆ ಇದೆ, ಇಂತಹ ಸಾಲಿನಲ್ಲಿ ಹೆಚ್.ಸಿ ಯೋಗೇಶ್ರವರು ೭೫ ಜನ ಸ್ನೇಹಿತರೊಂದಿಗೆ ತಮ್ಮ ೭೫ನೇ ಭಾರಿಗೆ ರಕ್ತದಾನ ಮಾಡುತ್ತಿರುವುದು ರಾಜಕೀಯ ಮಾದರಿಯಾಗಿದೆ ಎಂದು ನಾಗರೀಕ ಉವಾಚವಾಗಿದೆ,

