ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಹಕ್ಕಿಗಾಗಿ ಸದ್ದಿದು “ಲ್ಯಾಂಡ್ ಲಾರ್ಡ್” I
ಸಮಾಜಕ್ಕೊಂದು ಸಂದೇಶ
ಸಮಾನತೆಯ ಸೂರಿನ ಸಮಾವೇಶ,
ಎದೆಯ ಬೆಂಕಿ ತಣಿಯದ ಹೆಜ್ಜೆಗಳು,
ಶೋಷಣೆಯ ವಿರುದ್ದವೆದ್ದ ದನಿಗಳು,
ನಟ ವಿಜಯ್, ನಟಿ ರಚಿತಾ ಪಾತ್ರಗಳು
80ರ ದಶಕದ ಹಸಿರಕ್ತದ ನೆನೆವುಗಳು,
ಲ್ಯಾಂಡ್ ಲಿಟಿಗೇಶನ್ ರೂಪಾಂತರದೊಳು,
ಇಂದಿಗೂ ಜಮಿನ್ದಾರಿಕೆ ಬದುಕಿದ್ದಾವೆ..!
ಅನ್ನ ಕೊಡುವ ಒಕ್ಕಲು ಭೂಮಿ ಕಬಳಿಕೆ,
ದುರ್ಬಲ ಜನಜೀವನವ ಒಕ್ಕಲೆಬ್ಬಿಸುವಿಕೆ,
ಮಾರು ಮೀರಿದರೆ ಮತ್ತದೇ ರಕ್ತಪಾತ,
ತಿರುಗಿ ಬಿದ್ದ ರಾಚಯ್ಯನ ಹಕ್ಕಿನ ಜಾಥ,
ಸಮಾಜ ಅದೆಂದಿಗೂ ಒಂದಾಗದು,
ಹೋರಾಟದ ಕಾವುಗಳು ಮೊನಚುಗೊಳ್ಳಲಿ,
ಬಡ ಜಗಲಿಗಳು ಮುಗ್ಗರಿಸಿ ಕುಸಿಯದಿರಲಿ,
“ಲ್ಯಾಂಡ್ ಲಾರ್ಡ್” ಅಧ್ಯಯನದ ಅರಿವು,
ಬನ್ನಿ ಜೀವನದ ಅನುಭವ ತಳೆಯೋಣ,

