I ರಾಜ್ಯ ಸರ್ಕಾರದ I ಆರ್ಥಿಕ ದಿವಾಳಿತನದ I ಮತ್ತೊಂದು ವೈಫಲ್ಯ I ಡಿ.ಎಸ್ ಅರುಣ್
ಶಿವಮೊಗ್ಗ : ಕೇಂದ್ರ ಸರ್ಕಾರದ ಮೂಲಭೂತ ಅನುದಾನ ೧೫ ನೇ ಹಣಕಾಸು ಆಯೋಗದ ೨೦೨೪-೨೫ ನೇ ಸಾಲಿನ ಅನುದಾನ ಬಿಡುಗಡೆಗೊಂಡಿದ್ದರೂ ಇಲ್ಲಿಯವರೆಗೂ ರಾಜ್ಯ ಸರ್ಕಾರವು ಸದರಿ ೧೫ ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆಗೊಳಿಸುವಲ್ಲಿ ತಡವರಿಸುತ್ತಿದೆ ವಿಧಾನ ಪರಿಷತ್ತಿನ ಶಾಸಕರಾದ ಡಿ.ಎಸ್ ಅರುಣ್ ತಿಳಿಸಿದರು
ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದಂತೆ ಕರ್ನಾಟಕ ರಾಜ್ಯ ೬೫೦೦ ಕ್ಕೂ ಹೆಚ್ಚಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಲಭೂತ ಅಭಿವೃದ್ಧಿ ಕೆಲಸಗಳಾದ ಕೃಷಿ ತೋಟಗಾರಿಕೆ, ರೇಷ್ಮೇ ಬೆಳೆಗಳ ಉತ್ಪಾದನೆ ಹೆಚ್ಚಳ ಮಾಡಲು, ಬಡತನ ನಿರ್ಮೂಲನ ಕಾರ್ಯಕ್ರಮ ಅನುಷ್ಟಾನ, ಪ್ರಾಥಮಿಕ ಪ್ರೌಢ ಶಿಕ್ಷಣಕ್ಕೆ ಸಂಬಂಧಿಸಿದ ಮೂಲ ಸೌಕರ್ಯ ಅಭಿವೃದ್ಧಿ, ಆರೋಗ್ಯ ಇಲಾಖೆ, ಮೂಲಭೂತ ಸೌಕರ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಅನುದಾನ ವಿನಿಯೋಗಿಸುವ ಸಲುವಾಗಿ ಬಿಡುಗಡೆ ಮಾಡಲಾಗುವುದು. ಆದರೆ ರಾಜ್ಯ ಸರ್ಕಾರದ ಅಧಿಕಾರಿಗಳ ನಿರ್ಲಕ್ಷದಿಂದ ಸದರಿ ಮೂಲ ಅನುದಾನ ಅನಿರ್ಬಂಧಿತ ( Untied Fund ) ಶೇಕಡ ೪೦ರಷ್ಟು ಹಂಚಿಕೆಯನ್ನು ಉದಾಸೀನತೆಯಿಂದ ನಿರ್ಬಂಧಿತ ಅನುದಾನ (Tied Fund) ಹಂಚಿಕೆಯಲ್ಲಿ ಬದಲುಗೊಳಿಸಿ, ಹಂಚಿಕೆ ಮಾಡಿ, ಅನಿರ್ಬಂಧಿತ (Untied Fund) ಶೇಕಡ ೪೦ರಷ್ಟು ಹಂಚಿಕೆ ಹಣದಿಂದ ಆಗಬೇಕಾಗಿರುವ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಕೆಲಸಗಳನ್ನು ಸ್ಥಗಿತಗೊಳಿಸಿ, ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮವಹಿಸದೇ ಇರುವುದು ಶೋಚನೀಯ ಸಂಗತಿಯಾಗಿರುತ್ತದೆ ಎಂದು ಅವರು ವಿವರಿಸಿದರು
ಆದ್ದರಿಂದ ಈ ಅನುದಾನ ಹಂಚಿಕೆಯಲ್ಲಿ ಮಾಡಿರುವ ಉದಾಸೀನತೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೋಂಡು ಆಗಿರುವ ಲೋಪವನ್ನು ಕೂಡಲೇ ಸರಿಪಡಿಸಿ, ರಾಜ್ಯಾದ್ಯಂತ ೬೫೦೦ ಕ್ಕೂ ಹೆಚ್ಚಿನ ಪಂಚಾಯಿತಿಗಳಿಗೆ ಒದಗಬೇಕಾದ ಮೂಲ ಅನುದಾನ ಅನಿರ್ಬಂಧಿತ (Untied Fund) ಶೇಕಡ ೪೦ರಷ್ಟು ಹಂಚಿಕೆಯನ್ನು ಅನುದಾನವನ್ನು ಬಿಡುಗಡೆಗೊಳಿಸಿ ಆದೇಶಿಸುವಂತೆ ರಾಜ್ಯ ಸರ್ಕಾರವನ್ನು
ವಿಧಾನ ಪರಿಷತ್ತಿನ ಶಾಸಕರಾದ ಡಿ.ಎಸ್ ಅರುಣ್ ರವರು ಆಗ್ರಹಿಸಿದರು.

