I ಗ್ಯಾಸ್ ಸಿಲೆಂಡರ್ ಸ್ಪೋಟ I ಹಾನಿಗೊಳಗಾದ ಮನೆಗೆ I ಶಾಸಕ ಚೆನ್ನಬಸಪ್ಪನವರ ಬೇಟಿ I
ಶಿವಮೊಗ್ಗ : ನಗರದ ಸಿದ್ದೇಶ್ವರ ನಗರದಲ್ಲಿ ಸಂಭವಿಸಿದ ಗ್ಯಾಸ್ ಸ್ಫೋಟದಿಂದ ಹಾನಿಗೊಳಗಾದ ಕುಟುಂಬಗಳಿಗೆ ಭೇಟಿ ನೀಡಿ, ವಿಷ್ಣು ಸಮಾಜ, ವಿಕಾಸ್ ಟ್ರಸ್ಟ್ ಹಾಗೂ ಬಟ್ಟೆ ವರ್ತಕರ ಸಂಘದ ಸಹಕಾರದೊಂದಿಗೆ ದಿನನಿತ್ಯ ಬಳಕೆಯ ಅಗತ್ಯ ವಸ್ತುಗಳು, ಬಟ್ಟೆಗಳು, ಬೆಡ್ಶೀಟ್ಗಳು ಹಾಗೂ ಆಹಾರ ಸಾಮಗ್ರಿಗಳನ್ನು ವಿತರಿಸುವ ಮೂಲಕ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ನೀಡುವ ಕಾರ್ಯವನ್ನು ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ವಿಕಾಸ್ ಟ್ರಸ್ಟ್ ಅಧ್ಯಕ್ಷರಾದ ಬಿ.ಎ. ರಂಗನಾಥ್, ವಿಷ್ಣು ಸಮಾಜದ ಪ್ರಮುಖರಾದ ಜೆಟು ಸಿಂಗ್, ಬಟ್ಟೆ ವರ್ತಕರ ಸಂಘದ ಪ್ರಮುಖರಾದ ಕುಮಾರ್, ಆರ್ಎಸ್ಎಸ್ ಪ್ರಮುಖರಾದ ಗಿರೀಶ್ ಕಾರಂತ್ ಹಾಗೂ ಶ್ರೀ ಸಚ್ಚಿದಾನಂದ, ನಗರ ಬಿಜೆಪಿ ಅಧ್ಯಕ್ಷರಾದ ಶ್ರೀ ಮೋಹನ್ ರೆಡ್ಡಿ, ಸಮಾಜದ ಪ್ರಮುಖರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.


